ಆ್ಯಪ್ನಗರ

ಈ ಗಗನಯಾತ್ರಿ ನಡೆದಾಡಿದ್ದು ಎಲ್ಲಿ? ನೋಡಿ ವೈರಲ್‌ ವೀಡಿಯೋ

ಬೆಂಗಳೂರಿಗರು ಚಂದ್ರನ ಮೇಲೆ ನಡೆದಾಡಿದರೆ? ಹೌದು, ಆದರೆ ಇದು ನಡೆದಿದ್ದು ಬೆಂಗಳೂರಿನಲ್ಲಿ...! ಹೇಗೆ ಅಂತೀರಾ...? ಕಲಾವಿದರೊಬ್ಬರ 3ಡಿ ಸ್ಟ್ರೀಟ್ ಆರ್ಟ್‌ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿಯಾಗಿ ಟ್ರೆಂಡಿಂಗ್ ಆಗುತ್ತಿದೆ.

Vijaya Karnataka Web 2 Sep 2019, 8:43 pm
ಬೆಂಗಳೂರು: ಹೊಂಡ ಗುಂಡಿಗಳಿಂದ ತುಂಬಿದ ಬೆಂಗಳೂರು ನಗರದ ರಸ್ತೆಗಳ ದುರವಸ್ಥೆಯನ್ನು 3ಡಿ ಚಿತ್ರಕಲೆ ಮೂಲಕ ಚಂದ್ರನ ನೆಲದಂತೆ ಚಿತ್ರಿಸಿದ ಕಲಾವಿದ ಬಾದಲ್ ನಂಜುಂಡಸ್ವಾಮಿ ಅವರು ನಿರ್ಮಿಸಿದ 56 ಸೆಕೆಂಡ್‌ಗಳ ಈ ವೀಡಿಯೋ ಸಾಕ್ಷಾತ್ ಚಂದ್ರನ ನೆಲದಂತೆಯೇ ಮೂಡಿ ಬಂದಿದೆ. ಅವರು ತಮ್ಮ ಫೇಸ್‌ಬುಕ್ ಪುಟದಲ್ಲಿ ಈ ವೀಡಿಯೋ ಶೇರ್ ಮಾಡಿಕೊಂಡಿದ್ದಾರೆ.
Vijaya Karnataka Web Screenshot


ಅವರು ಶೇರ್ ಮಾಡಿಕೊಂಡು ಕೆಲವೇ ಗಂಟೆಗಳಲ್ಲಿ ಅದು ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. 14 ಸಾವಿರಕ್ಕೂ ಹೆಚ್ಚು ಲೈಕ್ಸ್ ಪಡೆದುಕೊಂಡಿದೆ. 21 ಸಾವಿರಕ್ಕೂ ಹೆಚ್ಚು ಶೇರ್‌ಗಳಾಗಿವೆ. ಕೆಲವರು ಅದ್ಭುತವಾಗಿದೆ ಎಂದು ಮೆಚ್ಚಿಕೊಂಡರೆ, ಮತ್ತೆ ಕೆಲವರು ಇದನ್ನು ವರ್ಣಿಸಲು ಪದಗಳೇ ಸಿಗುತ್ತಿಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಂಜುಂಡಸ್ವಾಮಿ ಅವರ ಕೃತಿ ಸರಕಾರದ ಕೆಲಸಕ್ಕೆ ಹಿಡಿದ ಕೈಗನ್ನಡಿ ಎಂದು ಮತ್ತೆ ಕೆಲವರು ಬಣ್ಣಿಸಿದ್ದಾರೆ.


ಬೆಂಗಳೂರಿನ ಕಲಾವಿದ ನಂಜುಂಡಸ್ವಾಮಿ ಪೌರ ಅಧಿಕಾರಿಗಳ ಗಮನ ಸೆಳೆಯಲು ತಮ್ಮ ಕಲಾ ಕೌಶಲ್ಯವನ್ನು ಬಳಸಿಕೊಂಡಿದ್ದಾರೆ. ರಸ್ತೆ ಗುಂಡಿ ಮುಚ್ಚಲು ವಿಫಲವಾದ ಅಧಿಕಾರಿಗಳಿಗೆ ಚಾಟಿ ಬೀಸಲು ಜೂನ್‌ನಲ್ಲಿ ರಸ್ತೆ ಮಧ್ಯೆ ನೈಜ ಗಾತ್ರದ ಮೊಸಳೆಯ ಕಲಾಕೃತಿ ರಚಿಸಿದ್ದರು ನಂಜುಉಂಡಸ್ವಾಮಿ. ಅದಾಗಿ ಕೆಲವೇ ದಿನದಲ್ಲಿ ರಸ್ತೆಯಲ್ಲಿದ್ದ ಆ ಗುಂಡಿಗೆ ಮುಚ್ಚುವ ಭಾಗ್ಯ ದೊರೆತಿತ್ತು. 2018ರಲ್ಲಿ ನಂಜುಂಡಸ್ವಾಮಿ ಇದೇ ರೀತಿ ಬೃಹತ್ ರಸ್ತೆ ಗುಂಡಿಯ ಸುತ್ತ ಜೇಡರ ಬಲೆಯ ಕಲಾಕೃತಿ ನಿರ್ಮಿಸಿ ಅಧಿಕಾರಿಗಳ ಗಮನ ಸೆಳೆದಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ