ಬೆಂಗಳೂರು: ಬಿಜೆಪಿಯ ಕೆಲವು ಶಾಸಕರ ಸದಸ್ಯತ್ವಕ್ಕಾಗಿ ಬೆಂಗಳೂರು ಗಾಲ್ಫ್ ಕ್ಲಬ್ ಗುತ್ತಿಗೆ ಅವಧಿಯನ್ನು 30 ವರ್ಷಕ್ಕೆ ವಿಸ್ತರಣೆ ಮಾಡಲಾಗಿದೆ ಎಂದು ಎಐಸಿಸಿ ವಕ್ತಾರ ಗೌರವ್ ವಲ್ಲಬ್ ಆರೋಪಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರತಿದಿನ ಹೊಸ ಹಗರಣ ರಾಜ್ಯದಲ್ಲಿ ಕಾಣಿಸಿಕೊಳ್ಳುತ್ತಿದೆ. ಬೆಂಗಳೂರು ಗಾಲ್ಫ್ ಕ್ಲಬ್ ಗುತ್ತಿಗೆ ಅವಧಿ 2021 ಕ್ಕೆ ಮುಗಿದಿದೆ. ಆದರೆ ಈಗ ನೀತಿ ಸಂಹಿತೆ ಜಾರಿಗೆ ಬರುವ ಸಂದರ್ಭದಲ್ಲಿ 30 ವರ್ಷ ಅವಧಿಗೆ ವಿಸ್ತರಣೆ ಮಾಡಲಾಗಿದೆ. 12 ಬಿಜೆಪಿ ಶಾಸಕರು ಹಾಗೂ ಪದಾಧಿಕಾರಿಗಳು ಗಾಲ್ಫ್ ಕ್ಲಬ್ ಸದಸ್ಯತ್ವ ಪಡೆದುಕೊಂಡಿದ್ದಾರೆ. ಅದಕ್ಕೆ ಗುತ್ತಿಗೆ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ ಎಂದು ಆರೋಪಿಸಿದರು.
ಆದರೆ 20 ವರ್ಷದಿಂದ ಬೆಂಗಳೂರು ಗಾಲ್ಫ್ ಕ್ಲಬ್ ಸದಸ್ಯತ್ವಕ್ಕೆ ಕಾಯುತ್ತಿರುವವರಿಗೆ ಸದಸ್ಯತ್ವ ಸಿಗುತ್ತಿಲ್ಲ. ಪ್ರಸಿದ್ಧ ಗಾಲ್ಫ್ ಆಟಗಾರರಿಗೂ ಸದಸ್ಯತ್ವ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗಾಲ್ಫ್ ಕ್ಲಬ್ ಹೊಸ ಸದಸ್ಯತ್ವದ ವಿವರ ಕೊಡಬೇಕು. ರಾಜಕಾರಣಿಗಳು ಹಾಗೂ ಅಧಿಕಾರಿಗಳ ಸದಸ್ಯತ್ವದ ಮಾಹಿತಿಯನ್ನು ಕೊಡಬೇಕು. ಸದಸ್ಯತ್ವ ಪಡೆದುಕೊಳ್ಳುವ ವಿಚಾರದಲ್ಲೂ ಹಗರಣ ನಡೆದಿದೆ ಎಂದು ಆರೋಪಿಸಿದರು.
ತಾರಾ ಪ್ರಚಾರಕರ ಲಿಸ್ಟ್ ನಲ್ಲಿ ತೇಜಸ್ವಿ ಸೂರ್ಯ ಏಕಿಲ್ಲ?
ಬಿಜೆಪಿ ಸ್ಟಾರ್ ಪ್ರಚಾರಕರ ಲಿಸ್ಟ್ ನಲ್ಲಿ ಎಮರ್ಜೆನ್ಸಿ ಗೇಟ್ ಓಪನ್ ತೇಜಸ್ವಿ ಸೂರ್ಯ ಹೆಸರು ಏಕಿಲ್ಲ? ಜೋತಿರಾದಿತ್ಯ ಸಿಂಧ್ಯ ಹೆಸರು ಏಕಿಲ್ಲ? ಎಂದು ಪ್ರಶ್ನಿಸಿದ ಅವರು, ಸಚಿನ್ ಪೈಲಟ್ ನಮ್ಮ ಪರವಾಗಿ ಪ್ರಚಾರ ನಡೆಸುತ್ತಾರೆ ಎಂದರು.
ಇನ್ನು ಶೋಭಾ ಕರಂದ್ಲಾಜೆ ಆರೋಪಕ್ಕೆ ತಿರುಗೇಟು ನೀಡಿ, ನಂದಿನಿ ಹಾಗೂ ಅಮೂಲ್ ವಿಚಾರವಾಗಿ ಬಗ್ಗೆ ಶೋಭಾ ಕರಂದ್ಲಾಜೆ ಏಕೆ ಮಾತನಾಡಲ್ಲ, ಮಹಾರಾಷ್ಟ್ರ ಸರ್ಕಾರ ರಾಜ್ಯದ ಹಳ್ಳಿಗಳಿಗೆ ಆರೋಗ್ಯ ವಿಮೆ ಯೋಜನೆ ವಿಸ್ತರಣೆ ಬಗ್ಗೆ ಶೋಭಾ ಅವರು ಏಕೆ ಮಾತನಾಡಲ್ಲ ಎಂದ ಅವರು, ಯುಪಿಎ 1 ಅವಧಿಯಲ್ಲಿ ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ, ಇದೀಗ ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಅತೀಕ್ ಎನ್ ಡಿ ಎ ಪರವಾಗಿ ಮತ ಹಾಕಿದ್ದರು. ಹಾಗಾದರೆ ಅತೀಕ್ ಬಿಜೆಪಿ ಬಿ ಟೀಂ ಎಂದು ಏಕೆ ಕರೆಯಬಾರದು? ಎಂದು ಪ್ರಶ್ನಿಸಿದರು.
ಇನ್ನು ಬಿಜೆಪಿ ಉತ್ತರ ಪ್ರದೇಶದ ಸಚಿವ ನಂದಗೋಪಾಲ ಗುಪ್ತ ಜೊತೆಗೆ ಅತೀಕ್ ಇದ್ದ ಫೋಟೋ ಪ್ರದರ್ಶನ ಮಾಡಿದ ಅವರು ಇವರ ಜೊತೆಗೆ ಏನು ಸಂಬಂಧ ಅತೀಕ್ ಗೆ ಎಂದು ಪ್ರಶ್ನಿಸಿದರು.
ಕನಕಪುರದಲ್ಲಿ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆ ವಿಚಾರವಾಗಿ ಮಾತನಾಡಿ, ಇದು ನಮ್ಮ ಪಕ್ಷದ ತಂತ್ರಗಾರಿಕೆ. ಸರ್ವೇ ಪ್ರಕಾರ ಡಿಕೆಶಿ ಒಂದು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಸಮಯ ಬಂದಾಗ ಉತ್ತರ ನೀಡುತ್ತೇವೆ ಎಂದು ಗೌರವ್ ವಲ್ಲಬ್ ಹೇಳಿದರು.
ಚುನಾವಣೆ ಹತ್ತಿರವಾಗುತ್ತಿದ್ದಂತೆ, ಎಲ್ಲಾ ಪಕ್ಷಗಳು ಅಲರ್ಟ್ ಆಗಿದ್ದು, ಆರೋಪ ಪ್ರತ್ಯಾರೋಪಗಳು, ಹಗರಣಗಳನ್ನು ಬಯಲಿಗೆ ಎಳೆಯುವುದು ಆರಂಭವಾಗಿದೆ.
ಆದರೆ 20 ವರ್ಷದಿಂದ ಬೆಂಗಳೂರು ಗಾಲ್ಫ್ ಕ್ಲಬ್ ಸದಸ್ಯತ್ವಕ್ಕೆ ಕಾಯುತ್ತಿರುವವರಿಗೆ ಸದಸ್ಯತ್ವ ಸಿಗುತ್ತಿಲ್ಲ. ಪ್ರಸಿದ್ಧ ಗಾಲ್ಫ್ ಆಟಗಾರರಿಗೂ ಸದಸ್ಯತ್ವ ಸಿಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಗಾಲ್ಫ್ ಕ್ಲಬ್ ಹೊಸ ಸದಸ್ಯತ್ವದ ವಿವರ ಕೊಡಬೇಕು. ರಾಜಕಾರಣಿಗಳು ಹಾಗೂ ಅಧಿಕಾರಿಗಳ ಸದಸ್ಯತ್ವದ ಮಾಹಿತಿಯನ್ನು ಕೊಡಬೇಕು. ಸದಸ್ಯತ್ವ ಪಡೆದುಕೊಳ್ಳುವ ವಿಚಾರದಲ್ಲೂ ಹಗರಣ ನಡೆದಿದೆ ಎಂದು ಆರೋಪಿಸಿದರು.
ತಾರಾ ಪ್ರಚಾರಕರ ಲಿಸ್ಟ್ ನಲ್ಲಿ ತೇಜಸ್ವಿ ಸೂರ್ಯ ಏಕಿಲ್ಲ?
ಬಿಜೆಪಿ ಸ್ಟಾರ್ ಪ್ರಚಾರಕರ ಲಿಸ್ಟ್ ನಲ್ಲಿ ಎಮರ್ಜೆನ್ಸಿ ಗೇಟ್ ಓಪನ್ ತೇಜಸ್ವಿ ಸೂರ್ಯ ಹೆಸರು ಏಕಿಲ್ಲ? ಜೋತಿರಾದಿತ್ಯ ಸಿಂಧ್ಯ ಹೆಸರು ಏಕಿಲ್ಲ? ಎಂದು ಪ್ರಶ್ನಿಸಿದ ಅವರು, ಸಚಿನ್ ಪೈಲಟ್ ನಮ್ಮ ಪರವಾಗಿ ಪ್ರಚಾರ ನಡೆಸುತ್ತಾರೆ ಎಂದರು.
ಇನ್ನು ಶೋಭಾ ಕರಂದ್ಲಾಜೆ ಆರೋಪಕ್ಕೆ ತಿರುಗೇಟು ನೀಡಿ, ನಂದಿನಿ ಹಾಗೂ ಅಮೂಲ್ ವಿಚಾರವಾಗಿ ಬಗ್ಗೆ ಶೋಭಾ ಕರಂದ್ಲಾಜೆ ಏಕೆ ಮಾತನಾಡಲ್ಲ, ಮಹಾರಾಷ್ಟ್ರ ಸರ್ಕಾರ ರಾಜ್ಯದ ಹಳ್ಳಿಗಳಿಗೆ ಆರೋಗ್ಯ ವಿಮೆ ಯೋಜನೆ ವಿಸ್ತರಣೆ ಬಗ್ಗೆ ಶೋಭಾ ಅವರು ಏಕೆ ಮಾತನಾಡಲ್ಲ ಎಂದ ಅವರು, ಯುಪಿಎ 1 ಅವಧಿಯಲ್ಲಿ ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ, ಇದೀಗ ದುಷ್ಕರ್ಮಿಗಳಿಂದ ಹತ್ಯೆಗೊಳಗಾದ ಅತೀಕ್ ಎನ್ ಡಿ ಎ ಪರವಾಗಿ ಮತ ಹಾಕಿದ್ದರು. ಹಾಗಾದರೆ ಅತೀಕ್ ಬಿಜೆಪಿ ಬಿ ಟೀಂ ಎಂದು ಏಕೆ ಕರೆಯಬಾರದು? ಎಂದು ಪ್ರಶ್ನಿಸಿದರು.
ಇನ್ನು ಬಿಜೆಪಿ ಉತ್ತರ ಪ್ರದೇಶದ ಸಚಿವ ನಂದಗೋಪಾಲ ಗುಪ್ತ ಜೊತೆಗೆ ಅತೀಕ್ ಇದ್ದ ಫೋಟೋ ಪ್ರದರ್ಶನ ಮಾಡಿದ ಅವರು ಇವರ ಜೊತೆಗೆ ಏನು ಸಂಬಂಧ ಅತೀಕ್ ಗೆ ಎಂದು ಪ್ರಶ್ನಿಸಿದರು.
ಕನಕಪುರದಲ್ಲಿ ಡಿ.ಕೆ.ಸುರೇಶ್ ನಾಮಪತ್ರ ಸಲ್ಲಿಕೆ ವಿಚಾರವಾಗಿ ಮಾತನಾಡಿ, ಇದು ನಮ್ಮ ಪಕ್ಷದ ತಂತ್ರಗಾರಿಕೆ. ಸರ್ವೇ ಪ್ರಕಾರ ಡಿಕೆಶಿ ಒಂದು ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತಾರೆ. ಸಮಯ ಬಂದಾಗ ಉತ್ತರ ನೀಡುತ್ತೇವೆ ಎಂದು ಗೌರವ್ ವಲ್ಲಬ್ ಹೇಳಿದರು.
ಚುನಾವಣೆ ಹತ್ತಿರವಾಗುತ್ತಿದ್ದಂತೆ, ಎಲ್ಲಾ ಪಕ್ಷಗಳು ಅಲರ್ಟ್ ಆಗಿದ್ದು, ಆರೋಪ ಪ್ರತ್ಯಾರೋಪಗಳು, ಹಗರಣಗಳನ್ನು ಬಯಲಿಗೆ ಎಳೆಯುವುದು ಆರಂಭವಾಗಿದೆ.