ಆ್ಯಪ್ನಗರ

ರಾಷ್ಟ್ರಗೀತೆಗೆ ಎದ್ದು ನಿಂತು ಗೌರವ ಕೊಡದ್ದಕ್ಕೆ ಪಾಕ್ ಉಗ್ರರೆಂದು ನಿಂದಿಸಿ ಚಿತ್ರಮಂದಿರದಿಂದ ಔಟ್‌!

​​ನಾಯಕ ನಟನಾಗಿ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಅರುಣ್‌ ಗೌಡ ಮತ್ತು ಅವರ ಸ್ನೇಹಿತರು 'ಅಸುರಂ' ತಮಿಳು ಸಿನಿಮಾ ವೀಕ್ಷಣೆಗೆ ಹೋದಾಗ ಈ ಗಲಾಟೆ ನಡೆದಿದೆ. ಇದರ ವಿಡಿಯೊ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Vijaya Karnataka 29 Oct 2019, 7:01 am
ಬೆಂಗಳೂರು: ಚಿತ್ರಮಂದಿರದಲ್ಲಿ ರಾಷ್ಟ್ರಗೀತೆ ಹಾಡುವ ವೇಳೆ ಎದ್ದು ನಿಂತಿಲ್ಲವೆಂದು ನಾಲ್ವರು ಯುವಕ, ಯುವತಿಯರನ್ನು 'ಪಾಕಿಸ್ತಾನಿ ಉಗ್ರ'ರೆಂದು ನಿಂದಿಸಿ ನಗರದ ಒರಾಯನ್‌ ಮಾಲ್‌ನಿಂದ ಹೊರ ಕಳಿಸಲಾಗಿದೆ.
Vijaya Karnataka Web 7890


ರಾಷ್ಟ್ರಗೀತೆಗೆ ಅವಮಾನ: ವಿದ್ಯಾರ್ಥಿಗಳ ಮೇಲೆ ಹಲ್ಲೆ

ನಾಯಕ ನಟನಾಗಿ ಕೆಲವು ಸಿನಿಮಾಗಳಲ್ಲಿ ನಟಿಸಿರುವ ಅರುಣ್‌ ಗೌಡ ಮತ್ತು ಅವರ ಸ್ನೇಹಿತರು 'ಅಸುರಂ' ತಮಿಳು ಸಿನಿಮಾ ವೀಕ್ಷಣೆಗೆ ಹೋದಾಗ ಈ ಗಲಾಟೆ ನಡೆದಿದೆ. ಇದರ ವಿಡಿಯೊ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ''ಇವರಿಗೆ ಏನು ಮಾಡಬೇಕು? ನಮ್ಮ ರಾಷ್ಟ್ರಗೀತೆಗೆ ಅಗೌರವ ತೋರಿದ್ದಾರೆ. ಯಾವನೇನಾದರೂ ದೇಶದ ವಿರುದ್ಧ ವರ್ತಿಸಿದರೆ ನಾನೇ ಮೊದಲು ಧ್ವನಿ ಎತ್ತುತ್ತೇನೆ. ಈ ಯುವಕರನ್ನು ಸಾರ್ವಜನಿಕರು ತರಾಟೆಗೆ ತೆಗೆದುಕೊಳ್ಳುವ­ವರೆಗೆ ಶೇರ್‌ ಮಾಡಿ. ಜೈ ಹಿಂದ್‌, ಜೈ ಶ್ರೀರಾಮ್‌,'' ಅರುಣ್‌ ಗೌಡ ಫೇಸ್‌ ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

''3 ತಾಸು ಸಿನಿಮಾ ನೋಡುತ್ತಿರಿ. 52 ಸೆಕೆಂಡು ರಾಷ್ಟ್ರಗೀತೆಗೆ ಎದ್ದು ನಿಲ್ಲಲು ಆಗುವುದಿಲ್ಲವೇ? ದೇಶ ರಕ್ಷಣೆಗಾಗಿ ಗಡಿಯಲ್ಲಿನಿಂತು ನಮ್ಮ ಸೈನಿಕರು ಜೀವ ಕೊಡುತ್ತಾರೆ. ನಿಮಗೆ ದೇಶಭಕ್ತಿ ಇಲ್ವಾ ? ಗೌರವ ಇಲ್ವಾ ? ಪಾಕಿಸ್ತಾನಿ ಉಗ್ರರು ನೀವು,'' ಎಂದು ನಿಂದಿಸಲಾಗಿದೆ.

ನಂತರ ಅಲ್ಲಿಗೆ ಇತರ ಪ್ರೇಕ್ಷಕರು ಕೂಡ ಆಗಮಿಸುತ್ತಾರೆ. ಈ ವೇಳೆ ಸಿನಿಮಾದ ನಡುವೆಯೇ ನಾಲ್ವರಿಗೆ ಶೇಮ್‌, ಶೇಮ್‌ ಎಂದು ಹೇಳಿ ಚಿತ್ರಮಂದಿರದಿಂದ ಹೊರಗೆ ಕಳುಹಿಸಲಾಗುತ್ತದೆ. ''ಕೆಲವು ಯುವಕ, ಯುವತಿಯರು ರಾಷ್ಟ್ರಗೀತೆಗೆ ಎದ್ದು ನಿಲ್ಲುವುದಿಲ್ಲ. ಎಡಪಂಥೀಯ ಮನೋಭಾವದ ಈ ಕಮ್ಯು­ನಿಷ್ಟರು ಯಾವಾಗಲೂ ದೇಶದ ವಿರುದ್ಧವೇ,'' ಎಂದು ಶ್ರೀಕಾಂತ್‌ ಎಂಬುವರು ಟ್ವೀಟ್‌ ಮಾಡಿದ್ದಾರೆ. ಅದನ್ನು 4 ಸಾವಿರಕ್ಕೂ ಹೆಚ್ಚು ಜನ ಲೈಕ್‌ ಮಾಡಿದ್ದಾರೆ.

''ರಾಷ್ಟ್ರಗೀತೆಗೆ ಎದ್ದು ನಿಲ್ಲಿ ಎಂದು ಕೇಳಿದ ಯುವಕರಿಗೆ ಹ್ಯಾಟ್ಸ್‌ಆಫ್‌,'' ಎಂದು ಕ್ಯಾಪ್ಟನ್‌ ಹರೀಶ್‌ ಪಿಳ್ಯೈ ಪ್ರತಿಕ್ರಿಯಿಸಿದ್ದಾರೆ.

ನಿಂದನೆಗೆ ವಿರೋಧ ವ್ಯಕ್ತ:
''ಜನರು ಚಿತ್ರಮಂದಿರಕ್ಕೆ ಸಿನಿಮಾ ನೋಡಲು ಹೋಗುತ್ತಾರೆ. ರಾಷ್ಟ್ರಗೀತೆಗೆ ಎದ್ದು ನಿಲ್ಲಲು ಅಲ್ಲ. ಇದು ಸ್ಟುಪಿಡಿಟಿ. ರಾಷ್ಟ್ರಗೀತೆ ವೇಳೆ ಎದ್ದು ನಿಲ್ಲಲೇಬೇಕೆಂದು ಸಂವಿದಾನದಲ್ಲಿಎಲ್ಲಿಯೂ ಹೇಳಿಲ್ಲ,'' ಎಂದು ಪ್ರಸಾದ್‌ ಎಂಬುವರು ಪ್ರತಿಕ್ರಿಯಿಸಿದ್ದಾರೆ.

''ಈ ಜನಾಂಗ ನಕಲಿ ದೇಶಭಕ್ತಿಯನ್ನು ನಂಬದಿರುವುದು ಒಳ್ಳೆಯದು. ಸೂಕ್ತವಲ್ಲದ ಸಂದರ್ಭದಲ್ಲಿಭಾರತ್‌ ಮಾತಾ ಕಿ ಜೈ ಮತ್ತು ವಂದೇ ಮಾತರಂ ಎಂಬುವ ಬದಲು ಸುಮ್ಮನಿರುವುದು ಒಳ್ಳೆಯದು. ಭಾರತ ಮಾತೆಯನ್ನು ವಿಭಜನೆ ಮಾಡಲಾಗುತ್ತಿದೆ,'' ಎಂದು ರಾಜೇಂದ್ರ ಕುಂಭಟ್‌ ಎಂಬುವರು ಪ್ರತಿಕ್ರಿಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ