ಆ್ಯಪ್ನಗರ

ಬೆಂಗಳೂರು ಗಲಭೆ: ಮೃತರಿಗೆ ತಲಾ 5 ಲಕ್ಷ ರೂ. ನೆರವು ಘೋಷಿಸಿದ ಜಮೀರ್‌!

ಬೆಂಗಳೂರಿನಲ್ಲಿ ಮಂಗಳವಾರ ರಾತ್ರಿ ದಾಂಧಲೆ ವೇಳೆ ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಮೃತಪಟ್ಟ ಮೂವರ ಕುಟುಂಬಕ್ಕೆ ತಲಾ ಐದು ಲಕ್ಷ ರೂ. ನೆರವು ನೀಡುವುದಾಗಿ ಶಾಸಕ ಜಮೀರ್‌ಅಹಮದ್‌ ಖಾನ್‌ ತಿಳಿಸಿದ್ದಾರೆ.

Vijaya Karnataka Web 14 Aug 2020, 11:08 pm
ಬೆಂಗಳೂರು: ಮಂಗಳವಾರ ರಾತ್ರಿ ದಾಂಧಲೆ ವೇಳೆ ಪೊಲೀಸರು ನಡೆಸಿದ ಗೋಲಿಬಾರ್‌ನಲ್ಲಿ ಮೃತಪಟ್ಟ ಮೂವರ ಕುಟುಂಬಕ್ಕೆ ತಲಾ ಐದು ಲಕ್ಷ ರೂ. ನೆರವು ನೀಡುವುದಾಗಿ ಶಾಸಕ ಜಮೀರ್‌ತಿಳಿಸಿದ್ದಾರೆ.
Vijaya Karnataka Web zameer ahmed


ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಎದುರಿಗೆ ಮಾಧ್ಯಮ ಪ್ರತಿನಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಮೀರ್‌, ''ಮೃತರ ಕುಟುಂಬದಲ್ಲಿ ಹಿರಿಯ ಪೋಷಕರಿದ್ದು ಅವರೀಗ ಅಸಹಾಯಕರಾಗಿದ್ದಾರೆ. ಅವರ ಜೀವನಕ್ಕೆ ನೆರವಾಗುವ ಉದ್ದೇಶದಿಂದ ತಲಾ 5 ಲಕ್ಷ ರೂ. ನೆರವು ನೀಡುತ್ತೇನೆ'' ಎಂದರು.

ಬೆಂಕಿಗೆ ಆಹುತಿಯಾದ ಅಖಂಡ ಶ್ರೀನಿವಾಸಮೂರ್ತಿಯವರ ಮನೆಯನ್ನು ಧರ್ಮ ಗುರುಗಳೇ ಕಟ್ಟಿಕೊಡುವುದಾಗಿ ತಿಳಿಸಿದ ಬಳಿಕ ಗೋಲಿಬಾರ್‌ನಲ್ಲಿ ಮೃತಪಟ್ಟ ಕುಟುಂಬದವರ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಜಮೀರ್‌, ''ಗೋಲಿಬಾರ್‌ನಲ್ಲಿ ಸತ್ತವರು ಉಳಿದವರಿಗೆ ಪಾಠ ಆಗಬೇಕು. ಅವರ ಕುಟುಂಬ ಈಗ ದುಡಿಯುವವರಿಲ್ಲದೆ ಅನಾಥವಾಗಿದೆ. ಹೀಗಾಗಿ ನೆರವು ನೀಡುತ್ತೇನೆ'' ಎಂದು ತಿಳಿಸಿದರು.

ಈ ಬಾರಿ ಸಾರ್ವಜನಿಕ ಗಣೇಶೋತ್ಸವ ರದ್ದು: ರಾಜ್ಯ ಸರಕಾರದ ಮಾರ್ಗಸೂಚಿ ಬಿಡುಗಡೆ!

ಗೋಲಿಬಾರ್‌ನಲ್ಲಿ ಆಟೋ ಚಾಲಕ ಶೇಕ್‌ ಸಿದ್ದಿಕಿ, ಎಸಿ ಮೆಕ್ಯಾನಿಕ್‌ ಯಾಸಿರ್‌ ಹಾಗೂ ಮಾಂಸದ ವ್ಯಾಪಾರಿ ವಾಜಿದ್‌ ಮೃತಪಟ್ಟಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ