ಬೆಂಗಳೂರು: ರೈತ, ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಗಳ ವಿರುದ್ಧ ರೈತ, ದಲಿತ, ಕಾರ್ಮಿಕರ 30 ಸಂಘಟನೆಗಳನ್ನು ಒಳಗೊಂಡ ಐಕ್ಯ ಹೋರಾಟ ಸಮಿತಿ ನಗರದ ಫ್ರೀಡಂ ಪಾರ್ಕ್ನಲ್ಲಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಅಹೋರಾತ್ರಿ ಧರಣಿ ಮಂಗಳವಾರವೂ ಮುಂದುವರಿಯಿತು.
ಈ ನಡುವೆ, ಸಂಘಟನೆಗಳ ಹೋರಾಟಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಜೆಡಿಎಸ್ ಮುಖಂಡರಾದ ಎಚ್ಡಿ ರೇವಣ್ಣ ಹಾಗೂ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸಾಥ್ ನೀಡಿದ್ದಾರೆ.
ಜೊತೆಗೆ, ಸೆ. 25ರಂದು ನಡೆಸಲು ಉದ್ದೇಶಿಸಿರುವ ಭಾರತ್ ಬಂದ್ಗೆ ಸಂಘಟನೆಗಳು ತಾತ್ವಿಕ ಒಪ್ಪಿಗೆ ಸೂಚಿಸಿದ್ದು, ಬುಧವಾರ ಬೆಳಗ್ಗೆ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.
ಉಳ್ಳವನೇ ಭೂಮಿ ಒಡೆಯ
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, "ದೇವರಾಜ ಅರಸು ಜಾರಿಗೊಳಿಸಿದ ಉಳುವವನೇ ಭೂಮಿ ಒಡೆಯ ಎಂಬ ಕಾಯಿದೆಯನ್ನು ಬಿಜೆಪಿ ಸರಕಾರ ಕಸಿದುಕೊಂಡು ಉಳ್ಳವನೇ ಭೂಮಿ ಒಡೆಯ ಎಂಬ ನೀತಿ ಜಾರಿಗೊಳಿಸುತ್ತಿದೆ," ಎಂದು ಟೀಕಿಸಿದರು.
''ಭಾರತದಲ್ಲಿನ ಕೃಷಿ ಕಾರ್ಮಿಕರಿಗೂ ಭೂಮಿಗೂ ತಲೆತಲಾಂತರದಿಂದ ಅವಿನಾಭಾವ ಸಂಬಂಧವಿದೆ. ಹಿಂದಿನ ದಿನಗಳಲ್ಲಿ ಕೃಷಿಯೇ ಜನರ ಮೂಲ ಆದಾಯವಾಗಿತ್ತು. ರಾಜರು, ಪಾಳೇಗಾರರ ಕಾಲದಲ್ಲೂ ಕೃಷಿಯೇ ಮೂಲಾಧಾರಾಗಿತ್ತು. ಈಗಿರುವ ಕೈಗಾರಿಕೆ ಮತ್ತು ಸೇವಾ ವಲಯಗಳೇ ಇರಲಿಲ್ಲ. ಆದರೂ, ಸೇವಾ ವಲಯ ಆದಾಯ ಕೇವಲ ಶೇ.20ರಷ್ಟಿದ್ದರೆ, ಕೃಷಿ ವಲಯ ಶೇ. 27ರಿಂದ 28ರಷ್ಟು ಆದಾಯ ನೀಡುತ್ತದೆ. ಅಂತಹ ಕೃಷಿ ಭೂಮಿಯನ್ನು ರೈತರಿಂದ ಕಿತ್ತು ಕಾರ್ಪೊರೇಟ್ ಕಂಪನಿಗಳಿಗೆ ಬಿಜೆಪಿ ಸರಕಾರ ಮಾರಾಟ ಮಾಡಲು ನಿಂತಿದೆ," ಎಂದು ಕಿಡಿಕಾರಿದರು.
"ಅನುಚ್ಛೇದ 63ರ ಪ್ರಕಾರ ಒಬ್ಬರಿಗೆ 10,20,30,40 ಯೂನಿಟ್ ಭೂಮಿ ಇರಬೇಕು. ಅದಕ್ಕಿಂತ ಜಾಸ್ತಿ ಭೂಮಿ ಇರಬಾರದು ಎಂಬ ನಿಯಮವಿತ್ತು. ಆದರೆ, ಪ್ರಸ್ತುತ ಅದನ್ನು ಡಬಲ್ ಮಾಡುವುದಲ್ಲದೆ, ಯಾರು ಹೇಗೆ ಬೇಕಾದರೂ ರೈತರ ಭೂಮಿಯನ್ನು ಕಸಿದುಕೊಳ್ಳುವಂತಹ ತಿದ್ದುಪಡಿ ತಂದಿದ್ದಾರೆ. 79ಎ ಅಡಿಯಲ್ಲಿ 13,814 ಪ್ರಕರಣ ದಾಖಲಾಗಿದ್ದವು. ಈಗ ಅದಕ್ಕೆಲ್ಲಎಳ್ಳುನೀರು ಬಿಡಲಾಗಿದೆ," ಎಂದು ವಿವರಿಸಿದರು.
''ಎಪಿಎಂಸಿ ಕಾಯಿದೆಗೂ ಕೇಂದ್ರ ಸರಕಾರಕ್ಕೂ ಸಂಬಂಧವಿಲ್ಲ. ಆದರೂ, 2017ರಲ್ಲಿ ಯಾವುದೋ ಒಂದು ಮಾದರಿ ಬಿಲ್ ತಂದು ಒಪ್ಪಿಕೊಳ್ಳಿ ಎಂದು ಒತ್ತಾಯ ಮಾಡುತ್ತಿದೆ. ಕೇಂದ್ರ ಸರಕಾರದ ರೈತ ವಿರೋಧಿ ನೀತಿಗಳನ್ನು 18 ವಿರೋಧ ಪಕ್ಷಗಳು ಹಾಗೂ ಎನ್ಡಿಎ ಅಂಗ ಪಕ್ಷಗಳು ವಿರೋಧ ಮಾಡುತ್ತಿವೆ. ಹಾಗಾಗಿ ರೈತ, ದಲಿತ, ಕಾರ್ಮಿಕರ ಪರವಾಗಿ ಕಾಂಗ್ರೆಸ್ ಪಕ್ಷ ಸದಾ ನಿಲ್ಲುತ್ತದೆ. ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ," ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
"ಸರ್ವಾಧಿಕಾರ ಮತ್ತು ಪ್ರಜಾಪ್ರಭುತ್ವದ ನಡುವೆ ಸಮರ ನಡೆಯುತ್ತಿದೆ. ನರೇಂದ್ರ ಮೋದಿ ಸರ್ವಾಧಿಕಾರದ ಆಡಳಿತ ನಡೆಸುತ್ತಿದ್ದಾರೆ. ಹೀಗಾಗಿ, ಪ್ರಜಾಪ್ರಭುತ್ವದ ಉಳಿವಿಗಾಗಿ ನಾವು ಸದಾ ಹೋರಾಡಲೇಬೇಕು," ಎಂದರು.
ಜೆಡಿಎಸ್ ಸಹಕರಿಸಿದರೆ ಪರಿಷತ್ನಲ್ಲಿಮಸೂದೆ ತಡೆ
''ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಸಹಕಾರ ನೀಡಿದರೆ ರಾಜ್ಯ ಸರಕಾರ ವಿಧಾನ ಪರಿಷತ್ನಲ್ಲಿ ಮಂಡಿಸಲು ಮುಂದಾಗಿರುವ ಭೂಸುಧಾರಣಾ ಕಾಯಿದೆ ತಿದ್ದುಪಡಿ ಮಸೂದೆ ಜಾರಿಯಾಗಲು ಬಿಡುವುದಿಲ್ಲ. ವಿಧಾನ ಪರಿಷತ್ನಲ್ಲಿ ಬಿಜೆಪಿಗೆ ಅಗತ್ಯ ಬಹುಮತವಿಲ್ಲ. ಹೀಗಾಗಿ ಕಾಂಗ್ರೆಸ್, ಜೆಡಿಎಸ್ ಕೂಡಿದರೆ ಕಾಯಿದೆ ತಡೆಯಲು ಸೂಕ್ತ ಬಹುಮತ ದೊರೆಯುತ್ತದೆ,'' ಎಂದು ಸಿದ್ದರಾಮಯ್ಯ ಹೇಳಿದರು.
ಈ ನಡುವೆ, ಸಂಘಟನೆಗಳ ಹೋರಾಟಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್, ಜೆಡಿಎಸ್ ಮುಖಂಡರಾದ ಎಚ್ಡಿ ರೇವಣ್ಣ ಹಾಗೂ ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಸಾಥ್ ನೀಡಿದ್ದಾರೆ.
ಜೊತೆಗೆ, ಸೆ. 25ರಂದು ನಡೆಸಲು ಉದ್ದೇಶಿಸಿರುವ ಭಾರತ್ ಬಂದ್ಗೆ ಸಂಘಟನೆಗಳು ತಾತ್ವಿಕ ಒಪ್ಪಿಗೆ ಸೂಚಿಸಿದ್ದು, ಬುಧವಾರ ಬೆಳಗ್ಗೆ ಅಂತಿಮ ನಿರ್ಧಾರ ಪ್ರಕಟಿಸುವುದಾಗಿ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್ ಹಾಗೂ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ.
ಉಳ್ಳವನೇ ಭೂಮಿ ಒಡೆಯ
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, "ದೇವರಾಜ ಅರಸು ಜಾರಿಗೊಳಿಸಿದ ಉಳುವವನೇ ಭೂಮಿ ಒಡೆಯ ಎಂಬ ಕಾಯಿದೆಯನ್ನು ಬಿಜೆಪಿ ಸರಕಾರ ಕಸಿದುಕೊಂಡು ಉಳ್ಳವನೇ ಭೂಮಿ ಒಡೆಯ ಎಂಬ ನೀತಿ ಜಾರಿಗೊಳಿಸುತ್ತಿದೆ," ಎಂದು ಟೀಕಿಸಿದರು.
''ಭಾರತದಲ್ಲಿನ ಕೃಷಿ ಕಾರ್ಮಿಕರಿಗೂ ಭೂಮಿಗೂ ತಲೆತಲಾಂತರದಿಂದ ಅವಿನಾಭಾವ ಸಂಬಂಧವಿದೆ. ಹಿಂದಿನ ದಿನಗಳಲ್ಲಿ ಕೃಷಿಯೇ ಜನರ ಮೂಲ ಆದಾಯವಾಗಿತ್ತು. ರಾಜರು, ಪಾಳೇಗಾರರ ಕಾಲದಲ್ಲೂ ಕೃಷಿಯೇ ಮೂಲಾಧಾರಾಗಿತ್ತು. ಈಗಿರುವ ಕೈಗಾರಿಕೆ ಮತ್ತು ಸೇವಾ ವಲಯಗಳೇ ಇರಲಿಲ್ಲ. ಆದರೂ, ಸೇವಾ ವಲಯ ಆದಾಯ ಕೇವಲ ಶೇ.20ರಷ್ಟಿದ್ದರೆ, ಕೃಷಿ ವಲಯ ಶೇ. 27ರಿಂದ 28ರಷ್ಟು ಆದಾಯ ನೀಡುತ್ತದೆ. ಅಂತಹ ಕೃಷಿ ಭೂಮಿಯನ್ನು ರೈತರಿಂದ ಕಿತ್ತು ಕಾರ್ಪೊರೇಟ್ ಕಂಪನಿಗಳಿಗೆ ಬಿಜೆಪಿ ಸರಕಾರ ಮಾರಾಟ ಮಾಡಲು ನಿಂತಿದೆ," ಎಂದು ಕಿಡಿಕಾರಿದರು.
"ಅನುಚ್ಛೇದ 63ರ ಪ್ರಕಾರ ಒಬ್ಬರಿಗೆ 10,20,30,40 ಯೂನಿಟ್ ಭೂಮಿ ಇರಬೇಕು. ಅದಕ್ಕಿಂತ ಜಾಸ್ತಿ ಭೂಮಿ ಇರಬಾರದು ಎಂಬ ನಿಯಮವಿತ್ತು. ಆದರೆ, ಪ್ರಸ್ತುತ ಅದನ್ನು ಡಬಲ್ ಮಾಡುವುದಲ್ಲದೆ, ಯಾರು ಹೇಗೆ ಬೇಕಾದರೂ ರೈತರ ಭೂಮಿಯನ್ನು ಕಸಿದುಕೊಳ್ಳುವಂತಹ ತಿದ್ದುಪಡಿ ತಂದಿದ್ದಾರೆ. 79ಎ ಅಡಿಯಲ್ಲಿ 13,814 ಪ್ರಕರಣ ದಾಖಲಾಗಿದ್ದವು. ಈಗ ಅದಕ್ಕೆಲ್ಲಎಳ್ಳುನೀರು ಬಿಡಲಾಗಿದೆ," ಎಂದು ವಿವರಿಸಿದರು.
''ಎಪಿಎಂಸಿ ಕಾಯಿದೆಗೂ ಕೇಂದ್ರ ಸರಕಾರಕ್ಕೂ ಸಂಬಂಧವಿಲ್ಲ. ಆದರೂ, 2017ರಲ್ಲಿ ಯಾವುದೋ ಒಂದು ಮಾದರಿ ಬಿಲ್ ತಂದು ಒಪ್ಪಿಕೊಳ್ಳಿ ಎಂದು ಒತ್ತಾಯ ಮಾಡುತ್ತಿದೆ. ಕೇಂದ್ರ ಸರಕಾರದ ರೈತ ವಿರೋಧಿ ನೀತಿಗಳನ್ನು 18 ವಿರೋಧ ಪಕ್ಷಗಳು ಹಾಗೂ ಎನ್ಡಿಎ ಅಂಗ ಪಕ್ಷಗಳು ವಿರೋಧ ಮಾಡುತ್ತಿವೆ. ಹಾಗಾಗಿ ರೈತ, ದಲಿತ, ಕಾರ್ಮಿಕರ ಪರವಾಗಿ ಕಾಂಗ್ರೆಸ್ ಪಕ್ಷ ಸದಾ ನಿಲ್ಲುತ್ತದೆ. ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ," ಎಂದು ಸಿದ್ದರಾಮಯ್ಯ ಭರವಸೆ ನೀಡಿದರು.
"ಸರ್ವಾಧಿಕಾರ ಮತ್ತು ಪ್ರಜಾಪ್ರಭುತ್ವದ ನಡುವೆ ಸಮರ ನಡೆಯುತ್ತಿದೆ. ನರೇಂದ್ರ ಮೋದಿ ಸರ್ವಾಧಿಕಾರದ ಆಡಳಿತ ನಡೆಸುತ್ತಿದ್ದಾರೆ. ಹೀಗಾಗಿ, ಪ್ರಜಾಪ್ರಭುತ್ವದ ಉಳಿವಿಗಾಗಿ ನಾವು ಸದಾ ಹೋರಾಡಲೇಬೇಕು," ಎಂದರು.
ಜೆಡಿಎಸ್ ಸಹಕರಿಸಿದರೆ ಪರಿಷತ್ನಲ್ಲಿಮಸೂದೆ ತಡೆ
''ಕಾಂಗ್ರೆಸ್ ಪಕ್ಷಕ್ಕೆ ಜೆಡಿಎಸ್ ಸಹಕಾರ ನೀಡಿದರೆ ರಾಜ್ಯ ಸರಕಾರ ವಿಧಾನ ಪರಿಷತ್ನಲ್ಲಿ ಮಂಡಿಸಲು ಮುಂದಾಗಿರುವ ಭೂಸುಧಾರಣಾ ಕಾಯಿದೆ ತಿದ್ದುಪಡಿ ಮಸೂದೆ ಜಾರಿಯಾಗಲು ಬಿಡುವುದಿಲ್ಲ. ವಿಧಾನ ಪರಿಷತ್ನಲ್ಲಿ ಬಿಜೆಪಿಗೆ ಅಗತ್ಯ ಬಹುಮತವಿಲ್ಲ. ಹೀಗಾಗಿ ಕಾಂಗ್ರೆಸ್, ಜೆಡಿಎಸ್ ಕೂಡಿದರೆ ಕಾಯಿದೆ ತಡೆಯಲು ಸೂಕ್ತ ಬಹುಮತ ದೊರೆಯುತ್ತದೆ,'' ಎಂದು ಸಿದ್ದರಾಮಯ್ಯ ಹೇಳಿದರು.