ರಾಮನಗರ: ಬಿಡದಿಯ ಈಗಲ್ಟನ್ ರೆಸಾರ್ಟ್ ಗಲಾಟೆಯ ಪ್ರಮುಖ ಆರೋಪಿ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ ಬೆನ್ನಟ್ಟಿ ರಾಮನಗರ ಪೊಲೀಸರು ಮಹಾರಾಷ್ಟ್ರದ ಪುಣೆಯತ್ತ ಹೊರಟಿದ್ದಾರೆ. ಮುಂಬಯಿ ಹೋಟೆಲ್ ಒಂದರಲ್ಲಿ ಶಾಸಕ ಗಣೇಶ್ ಅವಿತುಕೊಂಡಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು, ಹೋಟೆಲ್ಗೆ ತೆರಳಿದ್ದರು. ಆದರೆ, ಗಣೇಶ್ ಕೂದಲೆಳೆ ಅಂತರದಲ್ಲಿ ಪೊಲೀಸರಿಂದ ತಪ್ಪಿಸಿಕೊಂಡು ಪಲಾಯನ ಮಾಡಿದ್ದಾರೆ. ಅವರು ಪುಣೆಯತ್ತ ತೆರಳಿರುವ ಮಾಹಿತಿ ಇದ್ದು, ಪೊಲೀಸರು ಅವರ ಬೆನ್ನುಬಿದ್ದಿದ್ದಾರೆ ಎಂದು ಖಚಿತ ಮೂಲಗಳು ತಿಳಿಸಿವೆ.
ಪ್ರಭಾವಿಗಳ ಆಶ್ರಯ ?:
ಹಲ್ಲೆ ಪ್ರಕರಣ ಸಂಬಂಧ ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿರುವ ಗಣೇಶ್ ಅವರಿಗೆ ಪ್ರಭಾವಿ ರಾಜಕೀಯ ನಾಯಕರೇ ಆಶ್ರಯ ನೀಡುತ್ತಿದ್ದಾರೆ ಎನ್ನಲಾಗಿದೆ. ಆದ್ದರಿಂದಲೇ ಅವರು ಪೊಲೀಸರಿಂದ ತಪ್ಪಿಸಿಕೊಳ್ಳುವುದು ಸುಲಭವಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.
ಜಾಮೀನಿಗೆ ಸಲ್ಲಿಕೆಯಾಗದ ಅರ್ಜಿ:
ಶಾಸಕ ಗಣೇಶ್ ಅವರು ಶುಕ್ರವಾರವೂ ರಾಮನಗರ ಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ. ಆನಂದ್ ಸಿಂಗ್ ಜತೆ ಅವರು ರಾಜಿ ಪ್ರಯತ್ನ ನಡೆಸುತ್ತಿದ್ದು, ಅದೇ ಜಾಮೀನಿಗೆ ಅರ್ಜಿ ಸಲ್ಲಿಸದಿರಲು ಕಾರಣ ಎನ್ನಲಾಗುತ್ತಿದೆ.
ಪ್ರಕರಣದಲ್ಲಿ ಬಿಜೆಪಿ ಪ್ರವೇಶ:
ಶಾಸಕರ ಬಡಿದಾಟ ಪ್ರಕರಣದಲ್ಲಿ ಅಂತರ ಕಾಯ್ದುಕೊಂಡಿದ್ದ ಬಿಜೆಪಿ ಇದೇ ಮೊದಲ ಬಾರಿಗೆ ಪ್ರಕರಣದಲ್ಲಿ ಪ್ರವೇಶ ಪಡೆದಿದೆ. ಶಾಸಕ ಜೆ.ಎನ್.ಗಣೇಶ್ ವಿರುದ್ಧ ಬಿಡದಿ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಎಫ್ಐಆರ್ ಪ್ರತಿ ಹಾಗೂ ಶಾಸಕ ಆನಂದ್ ಸಿಂಗ್ ಅವರ ಹೇಳಿಕೆಗಳ ಪ್ರತಿಗಾಗಿ ಬಿಜೆಪಿ ಜೊತೆ ಗುರುತಿಸಿಕೊಂಡಿರುವ ವಕೀಲ ವಿನೋದ್ ಕುಮಾರ್ ಅರ್ಜಿ ಸಲ್ಲಿಸಿದ್ದಾರೆ. ಬಿಜೆಪಿಯ ಲೀಗಲ್ ಸೆಲ್ ಸೂಚನೆ ಮೇರೆಗೆ ರಾಮನಗರ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲ ವಿನೋದ್ ಕುಮಾರ್ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.
ಪ್ರಭಾವಿಗಳ ಆಶ್ರಯ ?:
ಹಲ್ಲೆ ಪ್ರಕರಣ ಸಂಬಂಧ ಪೊಲೀಸರಿಂದ ತಪ್ಪಿಸಿಕೊಂಡು ಓಡಾಡುತ್ತಿರುವ ಗಣೇಶ್ ಅವರಿಗೆ ಪ್ರಭಾವಿ ರಾಜಕೀಯ ನಾಯಕರೇ ಆಶ್ರಯ ನೀಡುತ್ತಿದ್ದಾರೆ ಎನ್ನಲಾಗಿದೆ. ಆದ್ದರಿಂದಲೇ ಅವರು ಪೊಲೀಸರಿಂದ ತಪ್ಪಿಸಿಕೊಳ್ಳುವುದು ಸುಲಭವಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.
ಜಾಮೀನಿಗೆ ಸಲ್ಲಿಕೆಯಾಗದ ಅರ್ಜಿ:
ಶಾಸಕ ಗಣೇಶ್ ಅವರು ಶುಕ್ರವಾರವೂ ರಾಮನಗರ ಕೋರ್ಟ್ನಲ್ಲಿ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿಲ್ಲ. ಆನಂದ್ ಸಿಂಗ್ ಜತೆ ಅವರು ರಾಜಿ ಪ್ರಯತ್ನ ನಡೆಸುತ್ತಿದ್ದು, ಅದೇ ಜಾಮೀನಿಗೆ ಅರ್ಜಿ ಸಲ್ಲಿಸದಿರಲು ಕಾರಣ ಎನ್ನಲಾಗುತ್ತಿದೆ.
ಪ್ರಕರಣದಲ್ಲಿ ಬಿಜೆಪಿ ಪ್ರವೇಶ:
ಶಾಸಕರ ಬಡಿದಾಟ ಪ್ರಕರಣದಲ್ಲಿ ಅಂತರ ಕಾಯ್ದುಕೊಂಡಿದ್ದ ಬಿಜೆಪಿ ಇದೇ ಮೊದಲ ಬಾರಿಗೆ ಪ್ರಕರಣದಲ್ಲಿ ಪ್ರವೇಶ ಪಡೆದಿದೆ. ಶಾಸಕ ಜೆ.ಎನ್.ಗಣೇಶ್ ವಿರುದ್ಧ ಬಿಡದಿ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದ ಎಫ್ಐಆರ್ ಪ್ರತಿ ಹಾಗೂ ಶಾಸಕ ಆನಂದ್ ಸಿಂಗ್ ಅವರ ಹೇಳಿಕೆಗಳ ಪ್ರತಿಗಾಗಿ ಬಿಜೆಪಿ ಜೊತೆ ಗುರುತಿಸಿಕೊಂಡಿರುವ ವಕೀಲ ವಿನೋದ್ ಕುಮಾರ್ ಅರ್ಜಿ ಸಲ್ಲಿಸಿದ್ದಾರೆ. ಬಿಜೆಪಿಯ ಲೀಗಲ್ ಸೆಲ್ ಸೂಚನೆ ಮೇರೆಗೆ ರಾಮನಗರ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲ ವಿನೋದ್ ಕುಮಾರ್ ಅರ್ಜಿ ಸಲ್ಲಿಸಿದ್ದಾರೆ ಎನ್ನಲಾಗುತ್ತಿದೆ.