ಆ್ಯಪ್ನಗರ

ಬಿಜೆಪಿ ಸಂಭ್ರಮಾಚರಣೆ, ಬಿಎಸ್‌ವೈ ನಿವಾಸಕ್ಕೆ ಕಾರ್ಯಕರ್ತರ ದಂಡು; ಸರಕಾರ ರಚನೆಗೆ ಸಿದ್ಧತೆ

ಕಾಂಗ್ರೆಸ್‌-ಜೆಡಿಎಸ್‌ ದೋಸ್ತಿ ಸರಕಾರ 14 ತಿಂಗಳ ಅಧಿಕಾರದ ಬಳಿಕ ವಿಶ್ವಾಸಮತ ಕಳೆದುಕೊಂಡು ಮಂಗಳವಾರ ಪತನಗೊಂಡಿದೆ. ಈ ಹಿನ್ನೆಲೆಯಲ್ಲಿ 105 ಸಂಖ್ಯಾಬಲ ಹೊಂದಿರುವ ಬಿಜೆಪಿ ಸರಕಾರ ರಚನೆಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ.

Vijaya Karnataka Web 24 Jul 2019, 12:20 pm
12:05: ನಾನು ಆರೆಸ್ಸೆಸ್‌ ನಿಂದ ಬೆಳೆದು ಬಂದವನು. ಪ್ರತಿಹಂತದಲ್ಲೂ ಆರೆಸ್ಸೆಸ್ ಮಾರ್ಗದರ್ಶನ ಪಡೆಯುವುದು ನಮ್ಮ ಸತ್ಸಂಪ್ರದಾಯ: ಬಿಎಸ್‌. ಯಡಿಯೂರಪ್ಪ
Vijaya Karnataka Web BS Yeddyurappa


12:00: ಚಾಮರಾಜಪೇಟೆಯಲ್ಲಿರುವ ಆರೆಸ್ಸೆಸ್‌ ಕಚೇರಿಗೆ ಹೊರಟಿರುವ ಬಿ.ಎಸ್ ಯಡಿಯೂರಪ್ಪ

11:00: ಮೊದಲು ಯಡಿಯೂರಪ್ಪ ಒಬ್ಬರೇ ಪ್ರಮಾಣವಚನ ಸ್ವೀಕರಿಸಲು ಚಿಂತನೆ. ವಿಶ್ವಾಸಮತ ಯಾಚನೆ ಬಳಿಕ ಸಂಪುಟ ವಿಸ್ತರಣೆ ಸಾಧ್ಯತೆ.

10:50: ರಾಜ್ಯದಲ್ಲಿ ಬಿಜೆಪಿ ಸರಕಾರ ರಚನೆಗೆ ಸಿದ್ಧತೆ; ಹಿಂದೆ ಮಾಡಿದ ತಪ್ಪುಗಳನ್ನು ಮತ್ತೆ ಮಾಡದೆ ಎಚ್ಚರಿಕೆಯಿಂದ ಹೆಜ್ಜೆಯಿಡಲು ಬಿ.ಎಸ್ ಯಡಿಯೂರಪ್ಪ ಚಿಂತನೆ.

ಬೆಂಗಳೂರು: ದೋಸ್ತಿ ಸರಕಾರ ಪತನಗೊಂಡ ಹಿನ್ನೆಲೆಯಲ್ಲಿ ಅತೃಪ್ತ ಶಾಸಕರು ಸಂಭ್ರಮಾಚರಣೆ ನಡೆಸಿದ್ದಾರೆ. ಅದೇ ರೀತಿ ನೂತನ ಸರಕಾರ ರಚಿಸಲು ಸಿದ್ಧರಾಗಿರುವ ಬಿಜೆಪಿ ನಾಯಕ ಬಿ,.ಎಸ್ ಯಡಿಯೂರಪ್ಪ ಅವರ ನಿವಾಸದಲ್ಲಿ ಭಾರೀ ಸಂಭ್ರಮ ನೆಲೆಸಿದೆ.

ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಬಿಎಸ್‌ವೈ ಅವರಿಗೆ ಶುಭಕೋರಲು ಕಾರ್ಯಕರ್ತರ ದಂಡೇ ಅವರ ನಿವಾಸಕ್ಕೆ ಆಗಮಿಸುತ್ತಿದೆ. ಯಡಿಯೂರಪ್ಪ ಅವರ ಪುತ್ರಿ ಅರುಣಾದೇವಿ, ತಮ್ಮ ತಂದೆಗೆ ಶುಭಕೋರಿ ಸಂತಸ ವ್ಯಕ್ತಪಡಿಸಿದ್ದಾರೆ.

ರಾಜ್ಯಾದ್ಯಂತ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಸಿಹಿತಿಂಡಿ ಹಂಚಿ, ಪಟಾಕಿ ಸಿಡಿಸಿ ಖುಷಿ ಪಡುತ್ತಿದ್ದಾರೆ.

ಅತ್ತ ಕಡೆ, ಅಧಿಕಾರ ಕಳೆದುಕೊಂಡಿರುವ ದೋಸ್ತಿ ಪಕ್ಷಗಳ ಪಾಳಯದಲ್ಲಿ ಮೌನ ಆವರಿಸಿದೆ.

ಅನರ್ಹತೆಯಿಂದ ಪಾರಾಗುವುದೇ ಬಂಡಾಯ ಶಾಸಕರಿಗಿರುವ ದೊಡ್ಡ ಸವಾಲು

ಬಿಜೆಪಿ ಸರಕಾರ ಬಹುತೇಕ ನಾಳೆ ರಚನೆಯಾಗುವ ಸಾಧ್ಯತೆಯಿದ್ದು, ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆಯಿದೆ. ಮುಂದಿನ ರಾಜಕೀಯ ಚಟುವಟಿಕೆಗಳ ಬಗ್ಗೆ ಮುಖಂಡರ ಜತೆ ಬಿಎಸ್‌ವೈ ಚರ್ಚೆ ನಡೆಸುತ್ತಿದ್ದಾರೆ. ಬೆಳಗ್ಗೆ 11 ಗಂಟೆಗೆ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಮಹತ್ವದ ಸಭೆ ನಡೆಯಲಿದೆ. ಎಲ್ಲ ಶಾಸಕರೂ ಈ ಸಭೆಯಲ್ಲಿ ಹಾಜರಿದ್ದು ಶಾಸಕಾಂಗ ಪಕ್ಷದ ನಾಯಕನಾಗಿ ಬಿಎಸ್. ಯಡಿಯೂರಪ್ಪ ಅವರನ್ನು ಆಯ್ಕೆ ಮಾಡಲಿದ್ದಾರೆ.

'ವಿಶ್ವಾಸ' ಪರೀಕ್ಷೆ ಸೋತ ಎಚ್‌ಡಿಕೆ, ಗುರುವಾರ ಬಿಎಸ್‌ವೈ ಪ್ರಮಾಣ ವಚನ?


ರಾಷ್ಟ್ರ ನಾಯಕರಿಂದ ಕರೆ ಬರುತ್ತಿದ್ದಂತೆಯೇ ಯಡಿಯೂರಪ್ಪ ಮತ್ತು ಇತರ ಹಿರಿಯ ಮುಖಂಡರು ದಿಲ್ಲಿಗೆ ತೆರಳಿ ಸರಕಾರ ರಚನೆ ಕುರಿತು ಸಮಾಲೋಚನೆ ನಡೆಸಲಿದ್ದಾರೆ.

ಕುಮಾರಸ್ವಾಮಿ 99 ರನೌಟ್‌!

ಜತೆಗೆ ಪುಣೆಯಲ್ಲಿ ವಾಸ್ತವ್ಯ ಹೂಡಿರುವ ಬಂಡಾಯ ಶಾಸಕರನ್ನು ಕರೆಸಿಕೊಂಡು ಅವರನ್ನು ರಕ್ಷಿಸಿಕೊಳ್ಳುವ ಕಾರ್ಯತಂತ್ರಗಳ ಬಗ್ಗೆಯೂ ಸಮಾಲೋಚನೆ ನಡೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ