ಆ್ಯಪ್ನಗರ

ಜೆಡಿಎಸ್‌ ನಾಯಕರಿಂದ ರಾಜ್‌ನಾಥ್‌ ಸಿಂಗ್‌ ಭೇಟಿಗೆ ಬಿಜೆಪಿ ವ್ಯಂಗ್ಯ

ಕೇಂದ್ರ ಗೃಹ ಸಚಿವರರನ್ನು ಭೇಟಿ ಮಾಡಿದ ಎಚ್‌ಡಿಕೆ, ದೇವೇಗೌಡ, ರೇವಣ್ಣ

Vijaya Karnataka Web 5 Oct 2018, 3:53 pm
ಬೆಂಗಳೂರು: ಹೊಸದಿಲ್ಲಿ ಪ್ರವಾಸ ಕೈಗೊಂಡಿರುವ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದಕ್ಕೆ ರಾಜ್ಯ ಬಿಜೆಪಿ ವ್ಯಂಗ್ಯವಾಡಿದೆ.
Vijaya Karnataka Web ರಾಜನಾಥ್‌ ಸಿಂಗ್‌ ಭೇಟಿ ಮಾಡಿದ ಜೆಡಿಎಸ್‌ ನಾಯಕರು
ರಾಜನಾಥ್‌ ಸಿಂಗ್‌ ಭೇಟಿ ಮಾಡಿದ ಜೆಡಿಎಸ್‌ ನಾಯಕರು


ರಾಜನಾಥ್‌ ಸಿಂಗ್‌ ಅವರನ್ನು ಮಾಜಿ ಪ್ರಧಾಜಿ ಎಚ್‌.ಡಿ. ದೇವೇಗೌಡ, ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಲೋಕೋಪಯೋಗಿ ಸಚಿವ ಎಚ್‌.ಡಿ. ರೇವಣ್ಣ ಮಾತ್ರ ಭೇಟಿ ಮಾಡಿರುವುದು ಸಾಕಷ್ಟು ಟೀಕೆಗೆ ಗುರಿಯಾಗಿದೆ.

ಕರ್ನಾಟಕದಲ್ಲಿ ಸಮ್ಮಿಶ್ರ ಸರಕಾರ ಅಪಹಾಸ್ಯಕ್ಕೀಡಾಗಿದೆ ಎಂದು ಬಿಜೆಪಿ ಟೀಕಿಸಿದೆ.


ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪರ-ವಿರೋಧ ಚರ್ಚೆಗಳು ಜೋರಾಗಿ ನಡೆದಿದೆ.

ರಾಜ್ಯದ ಸಮಸ್ಯೆ ಬಗ್ಗೆ ಹಾಗೂ ಪರಿಹಾರ ಬಿಡುಗಡೆ ಮಾಡಿಸಲು ಈ ನಾಯಕರು ಗೃಹ ಸಚಿವರನ್ನು ಭೇಟಿ ಮಾಡಿದ್ದಾರೆ, ಆದರೆ ಬಿಜೆಪಿಯ ಸಂಸದರೊಬ್ಬರೂ ಇಂಥ ಕೆಲಸಕ್ಕೆ ಕೈ ಹಾಕಿಲ್ಲ ಎಂದು ನೆಟ್ಟಿಗರು ಪ್ರತಿಕ್ರಿಯಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ