ಆ್ಯಪ್ನಗರ

ಸೋಮವಾರ ಬೈ ಎಲೆಕ್ಷನ್ ನಾಮಿನೇಷನ್ ಭರಾಟೆ! ಎಂಟಿಬಿಗೆ ಬಿಎಸ್‌ವೈ ಸಾಥ್, ಮಹೇಶ್‌ಗೆ ಸವದಿ ಬಲ..!

ನಾಮಪತ್ರ ಸಲ್ಲಿಕೆಗೆ ಸೋಮವಾರವೇ ಕೊನೆಯ ದಿನವಾದ ಕಾರಣ, ಆಯಾ ಕ್ಷೇತ್ರಗಳ ಉಸ್ತುವಾರಿ ಸಚಿವರು, ಆಯಾ ಜಿಲ್ಲೆಗಳಿಂದ ಆಯ್ಕೆಯಾದ ಬಿಜೆಪಿ ಸಂಸದರು, ಶಾಸಕರು ಅಭ್ಯರ್ಥಿಗಳಿಗೆ ಸಾಥ್ ಕೊಡಲಿದ್ದಾರೆ.

Vijaya Karnataka Web 17 Nov 2019, 8:20 pm
ಬೆಂಗಳೂರು: ಉಪ ಚುನಾವಣಾ ಅಖಾಡ ರಂಗೇರಿದೆ. ಸೋಮವಾರ ನಾಮಪತ್ರ ಸಲ್ಲಿಕೆ ಭರಾಟೆ ಜೋರಾಗಿ ನಡೆಯಲಿದೆ. ನಾಮಪತ್ರ ಸಲ್ಲಿಕೆಗೆ ಸೋಮವಾರವೇ ಕೊನೆಯ ದಿನವಾಗಿದ್ದು, ರಾಜ್ಯಾದ್ಯಂತ ಉಪಚುನಾವಣೆ ನಡೆಯಲಿರುವ ಎಲ್ಲ ಕ್ಷೇತ್ರಗಳಲ್ಲೂ ಬಿಜೆಪಿ ಅಭ್ಯರ್ಥಿಗಳು ತಮ್ಮ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಈಗಾಗಲೇ ಬಿಜೆಪಿ ಅಭ್ಯರ್ಥಿಗಳು ಕಣಕ್ಕಿಳಿದು ಭರದ ಪ್ರಚಾರವನ್ನೂ ಆರಂಭಿಸಿದ್ದಾರೆ.
Vijaya Karnataka Web ಸೋಮವಾರ ಬೈ ಎಲೆಕ್ಷನ್ ನಾಮಿನೇಷನ್ ಭರಾಟೆ! ಎಂಟಿಬಿಗೆ ಬಿಎಸ್‌ವೈ ಸಾಥ್, ಮಹೇಶ್‌ಗೆ ಸವದಿ ಬಲ..!


ಯಡಿಯೂರಪ್ಪ ಟ್ರೆಂಡೂ ಆಗಿಲ್ಲ, ಟ್ರಾಲೂ ಆಗಿಲ್ಲ! ಸಿಎಂ ಆಫೀಸ್ ಸೋಷಿಯಲ್ ಮೀಡಿಯಾ ಸೆಕ್ಷನ್ನೇ ವೀಕು?

ಯಾವ ಕ್ಷೇತ್ರದಿಂದ ಯಾವ ಅಭ್ಯರ್ಥಿ ಕಣಕ್ಕಿಳಿಯುತ್ತಾರೆ, ಅಭ್ಯರ್ಥಿ ಜೊತೆಗೆ ಯಾವೆಲ್ಲಾ ನಾಯಕರು ಭಾಗಿಯಾಗುತ್ತಾರೆ ಎಂಬುದರ ಸಂಪೂರ್ಣ ವಿವರವನ್ನು ರಾಜ್ಯ ಬಿಜೆಪಿ ಪ್ರಕಟಿಸಿದೆ.


ಶರತ್ ಬಚ್ಚೇಗೌಡ ಹಾಗೂ ಎಂಟಿಬಿ ನಾಗರಾಜ್ ನಡುವೆ ಪ್ರತಿಷ್ಠೆಯ ಕಣವಾಗಿರುವ ಹೊಸಕೋಟೆ ವಿಧಾನಸಭಾ ಕ್ಷೇತ್ರದಲ್ಲಿ, ಎಂಟಿಬಿ ನಾಗರಾಜ್ ನಾಮಪತ್ರ ಸಲ್ಲಿಕೆ ವೇಳೆ ಖುದ್ದು ಸಿಎಂ ಯಡಿಯೂರಪ್ಪ ಅವರೇ ಜೊತೆಗಿರಲಿದ್ದಾರೆ. ಈ ಮೂಲಕ, ಬಂಡಾಯ ಅಭ್ಯರ್ಥಿ ಶರತ್ ಬಚ್ಚೇಗೌಡ ಹಾಗೂ ಕ್ಷೇತ್ರದ ಮತದಾರರಿಗೆ ಯಡಿಯೂರಪ್ಪ ನೇರ ಸಂದೇಶ ರವಾನೆ ಮಾಡಲಿದ್ದಾರೆ.

ನಾಮಪತ್ರ ಸಲ್ಲಿಕೆ ವೇಳೆ ಮತ್ತೊಂದು ಅಚ್ಚರಿ ಇರೋದು ಅಥಣಿಯಲ್ಲಿ! ಕಳೆದ ಬಾರಿಯಷ್ಟೇ ಈ ಕ್ಷೇತ್ರದಲ್ಲಿ ಮಹೇಶ್ ಕುಮಟಳ್ಳಿ ಎದುರು ಪರಾಭವಗೊಂಡ ಡಿಸಿಎಂ ಲಕ್ಷ್ಮಣ ಸವದಿ, ಇದೀಗ ಮಹೇಶ್ ಕುಮಟಳ್ಳಿ ಅವರು ನಾಮಪತ್ರ ಸಲ್ಲಿಸುವ ವೇಳೆ ಅವರ ಜೊತೆಗೆ ಇರಲಿದ್ದಾರೆ.

ನಾಮಪತ್ರ ಸಲ್ಲಿಕೆಗೆ ಸೋಮವಾರವೇ ಕೊನೆಯ ದಿನವಾದ ಕಾರಣ, ಆಯಾ ಕ್ಷೇತ್ರಗಳ ಉಸ್ತುವಾರಿ ಸಚಿವರು, ಆಯಾ ಜಿಲ್ಲೆಗಳಿಂದ ಆಯ್ಕೆಯಾದ ಬಿಜೆಪಿ ಸಂಸದರು, ಶಾಸಕರು ಅಭ್ಯರ್ಥಿಗಳಿಗೆ ಸಾಥ್ ಕೊಡಲಿದ್ದಾರೆ. ಈ ಮೂಲಕ, ಬಿಜೆಪಿಯ ಎಲ್ಲಾ ನಾಯಕರು ಮುನಿಸು ಮರೆತು ಒಗ್ಗಟ್ಟಿನಿಂದ ಇದ್ದೇವೆ ಎಂಬ ಸಂದೇಶ ರವಾನೆ ಮಾಡಲಿದ್ಧಾರೆ.

'ಎಲ್ಲ ಅನರ್ಹ ಶಾಸಕರನ್ನೂ ಗೆಲ್ಲಿಸಬೇಕು': ಬಿಜೆಪಿ ನಾಯಕರಿಗೆ, ಕಾರ್ಯಕರ್ತರಿಗೆ ಶ್ರೀರಾಮುಲು ಕರೆ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ