ಆ್ಯಪ್ನಗರ

ಟಿಪ್ಪು ಜಯಂತಿ ಆಚರಿಸಿದ ಸರಕಾರಕ್ಕೆ ಹಂಪಿ ಉತ್ಸವ ಮಾಡಲು ಮಾತ್ರ 'ಬರ': ಬಿಜೆಪಿ ಟೀಕೆ

ಟಿಪ್ಪು ಜಯಂತಿ ಮಾಡಲು ಮಾತ್ರ ರಾಜ್ಯ ಸರಕಾರದ ಬಳಿ ಹಣ ಇತ್ತು ಹಾಗೂ ಎಲ್ಲ ಕಾರಣಗಳು ಇತ್ತು. ಆದರೆ, ಹುಸಿ ಜಾತ್ಯಾತೀತ ಸರಕಾರಕ್ಕೆ ಹಂಪಿ ಉತ್ಸವ ನಡೆಸಲು ಮಾತ್ರ ಬರ ಇದೆ ಎಂಬ ಕಾರಣ ನೀಡುತ್ತದೆ ಎಂದು ಬಿಜೆಪಿ ಟ್ವೀಟ್ ಮೂಲಕ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

Agencies 28 Nov 2018, 3:23 pm
ಬೆಂಗಳೂರು: ರಾಜ್ಯದ 100 ತಾಲೂಕುಗಳಲ್ಲಿ ಬರ ಇರುವುದರಿಂದ ಈ ವರ್ಷ ಹಂಪಿ ಉತ್ಸವ ಆಚರಿಸದೇ ಇರಲು ರಾಜ್ಯ ಸರಕಾರ ನಿರ್ಧರಿಸಿದೆ. ಈ ಹಿನ್ನೆಲೆ ಬಿಜೆಪಿ ಕರ್ನಾಟಕ ಟ್ವೀಟ್ ಮೂಲಕ ರಾಜ್ಯ ಸರಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
Vijaya Karnataka Web hampi utsav


ಟಿಪ್ಪು ಜಯಂತಿ ಮಾಡಲು ಮಾತ್ರ ರಾಜ್ಯ ಸರಕಾರದ ಬಳಿ ಹಣ ಇತ್ತು ಹಾಗೂ ಎಲ್ಲ ಕಾರಣಗಳು ಇತ್ತು. ಆದರೆ, ಹುಸಿ ಜಾತ್ಯಾತೀತ ಸರಕಾರಕ್ಕೆ
ಹಂಪಿ ಉತ್ಸವ ನಡೆಸಲು ಮಾತ್ರ ಬರ ಇದೆ ಎಂಬ ಕಾರಣ ನೀಡುತ್ತದೆ ಎಂದು ಬಿಜೆಪಿ ಕರ್ನಾಟಕ ಟ್ವೀಟ್ ಮಾಡಿದೆ.

ಅಲ್ಲದೆ, ಪರ್ಶಿಯನ್ ಭಾಷೆಯನ್ನು ಜನರಿಗೆ ಹೇರಿದ್ದ ಹಾಗೂ ಮತಾಂಧ ಟಿಪ್ಪು ಕರ್ನಾಟಕದ ಹೆಮ್ಮೆ ಎಂದು ರಾಜ್ಯ ಸರಕಾರಕ್ಕೆ ಅನಿಸುತ್ತದೆ. ಆದರೆ, ವಿಜಯನಗರ ಸಾಮ್ರಾಜ್ಯದ ಸುವರ್ಣ ಯುಗವನ್ನು ಆಚರಣೆ ಮಾಡುವುದು ಮಾತ್ರ ಕುಮಾರಸ್ವಾಮಿ ಸರಕಾರಕ್ಕೆ ಹೊರೆ ಎನಿಸುತ್ತದೆ ಎಂದೂ ಕರ್ನಾಟಕ ಸರಕಾರವನ್ನು ಬಿಜೆಪಿ ಕರ್ನಾಟಕ ಟ್ವಿಟ್ಟರ್ ಅಕೌಂಟ್ ಟ್ವೀಟ್ ಮೂಲಕ ತರಾಟೆ ತೆಗೆದುಕೊಂಡಿದೆ.


ಬಿಜೆಪಿಯ ಟ್ವೀಟ್‌ಗೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಇನ್ನು ಹಲವರು ರೀಟ್ವೀಟ್ ಮಾಡಿಕೊಂಡಿದ್ದಾರೆ. ಅಲ್ಲದೆ, ಕಾಂಗ್ರೆಸ್ - ಜೆಡಿಎಸ್ ಸಮ್ಮಿಶ್ರ ಸರಕಾರದ ಈ ದ್ವಂದ್ವ ನೀತಿಯನ್ನು ಜನ ಸಹ ಟೀಕೆ ಮಾಡಿದ್ದಾರೆ.

ಇನ್ನೊಂದೆಡೆ, ರಾಜ್ಯ ಸರಕಾರದ ನಿರ್ಧಾರವನ್ನು ತರಾಟೆಗೆ ತೆಗೆದುಕೊಂಡ ಶ್ರೀರಾಮುಲು, ''ಬರ ಸಂದರ್ಭದಲ್ಲಿ ಯಾವುದೇ ಉತ್ಸವ ನಡೆಸುವುದಿಲ್ಲ ಎಂದು ಸರಕಾರ ತೀರ್ಮಾನಿಸಿದ್ದರೆ ನಾನು ಸ್ವಾಗತಿಸುತ್ತೇನೆ. ಆದರೆ ಬಳ್ಳಾರಿಯ 8 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ ಬಳಿಕ ಬಳ್ಳಾರಿಯಲ್ಲಿ ಕೋಟ್ಯಂತರ ರೂ. ಖರ್ಚು ಮಾಡಿ ಸರಕಾರ ಕೃತಜ್ಞತಾ ಸಮಾವೇಶ ನಡೆಸಿದ್ದೇಕೆ,'' ಎಂದು ಪ್ರಶ್ನಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ