ಆ್ಯಪ್ನಗರ

'ಭಾಷಾ ವೈವಿಧ್ಯತೆ' ಸಂಗ್ರಹಾಲಯದಲ್ಲಿ ನೋಡುವಂತಾಗಿದೆ: ಬಿ.ಎಲ್. ಸಂತೋಷ್

ಜಗತ್ತು ಚಿಕ್ಕದಾಗುತ್ತಿದೆ, ನಾವು ವೈವಿಧ್ಯತೆಯನ್ನು ಕಳೆದುಕೊಳ್ಳುತ್ತಿದ್ದೇವೆ. ವಿವಿಧತೆಯನ್ನು ಸಂಗ್ರಹಾಲಯದಲ್ಲಿ ನೋಡುವ ದಿನಗಳು ಹತ್ತಿರವಾಗುತ್ತಿವೆ ಎಂದು ಹೇಳಿದ್ದಾರೆ ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್.

Vijaya Karnataka Web 22 Sep 2019, 6:16 pm
ಹೊಸ ದಿಲ್ಲಿ: ಭಾಷೆ, ಭೌಗೋಳಿಕ, ಮತಪಂಥ, ಸಂಸ್ಕೃತಿಗಳ ಸಾಮಾರಸ್ಯವನ್ನು ದ. ರಾ. ಬೇಂದ್ರೆ ಅವರ ಸಾಹಿತ್ಯದಲ್ಲಿ ಕಾಣುತ್ತೇವೆ ಎಂದು ಬಿಜೆಪಿ ರಾಷ್ಟ್ರೀಯ ಪ್ರದಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ನುಡಿದರು. ಸಮಾಜ ಹಿಂಸೆಯೆಡೆಗೆ ವಾಲುತ್ತಿರುವ ಸಂದರ್ಭದಲ್ಲಿ ಬೇಂದ್ರೆ ಅವರ ಸಾಮರಸ್ಯದ ಕವಿತೆಗಳು ಸಮಾಜಕ್ಕೆ ಸೂಕ್ತ ಮಾರ್ಗದರ್ಶನ ಎಂದು ಬಿ.ಎಲ್. ಸಂತೋಷ ಹೇಳಿದ್ದಾರೆ.
Vijaya Karnataka Web b l santosh program


‘ಮಗಳ ದಿನ’ದಂದೇ ಶಾಕಿಂಗ್ ನ್ಯೂಸ್!: ತಾಯಿ ಮುಚ್ಚಿಟ್ಟರೂ ತಂದೆಗೆ ಶಿಕ್ಷೆ ಕೊಡಿಸಿದ ರೇಪ್ ಸಂತ್ರಸ್ತೆ

ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಹಾಗೂ ದಿಲ್ಲಿ ಕರ್ನಾಟಕ ಸಂಘ ವತಿಯಿಂದ ದಿಲ್ಲಿ ಕರ್ನಾಟಕ ಸಂಘದಲ್ಲಿ ಕಳೆದೆರೆಡು ದಿನಗಳಿಂದ ದ.ರಾ ಬೇಂದ್ರೆ- ಆಧುನಿಕ ಭಾರತೀಯ ಕಾವ್ಯ ಪರಂಪರೆ ವಿಷಯ ಕುರಿತು ರಾಷ್ಟ್ರೀಯ ವಿಚಾರ ಸಂಕಿರಣ ನಡೆಯಿತು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಂತೋಷ್ ಭಾಗವಹಿಸಿದ್ದರು.

ಮಗಳು ನಿಮ್ಮ ಮಡಿಲಿನಾಚೆ ಬೆಳೆಯಬಹುದು. ಆದ್ರೆ, ಹೃದಯದಾಚೆಯಲ್ಲ!

ಬೇಂದ್ರೆ ಸಾಹಿತ್ಯ ಮತ್ತು ಆಧುನಿಕ ದಿನಗಳಲ್ಲಿ ಬೇಂದ್ರೆ ಸಾಹಿತ್ಯದ ಪ್ರಸ್ತುತತೆ ಕುರಿತು ಮಾತನಾಡಿದ ಅವರು, ದ.ರಾ. ಬೇಂದ್ರೆ ಅವರದ್ದು ಸರ್ವಕಾಲಿಕ ಸಾಹಿತ್ಯ. ಅವರ ಕವಿತೆಗಳು ಜಗತ್ತಿನ ಇತರೆ ಭಾಷೆಗಳಿಗೆ ಭಾಷಾಂತರ ಆಗಿದ್ದಲ್ಲಿ ಅವರನ್ನು ಜಗತ್ತಿಗೆ ಪರಿಚಯಿಸಿದಂತೆ ಎಂದರು.

ಜಗತ್ತು ಚಿಕ್ಕದಾದಂತೆ ವೈವಿಧ್ಯತೆಯನ್ನು ಕಳೆದುಕೊಳ್ಳುತ್ತಿದೆ. ವಿವಿಧತೆಯನ್ನು ಸಂಗ್ರಹಾಲಯದಲ್ಲಿ ನೋಡುವ ದಿನಗಳು ಸನ್ನಿಹಿತ ಆಗುತ್ತಿದೆ. ಸಾಹಿತ್ಯ, ಭಾಷೆಗಳ ಕುರಿತು ಹೆಚ್ಚಿನ ಸಂಶೋಧನೆ ನಡೆಯಬೇಕಿದೆ ಎಂದರು.

‘ಶಾರನ್ನು ಭೇಟಿಯಾಗಿದ್ದು ನೆರೆಪರಿಹಾರಕ್ಕಲ್ಲ, ಅನರ್ಹರ ಬಚಾವ್‌ಗಾಗಿ’: ಬಿಎಸ್‌ವೈಗೆ ಎಚ್ಡಿಕೆ ಚಾಟಿ

ಜನಪದ ಸಾಹಿತ್ಯದ ಕುರಿತು ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ ಅವರು ಬೇಂದ್ರೆ ಬಳಸಿದ ಜನಪದ ಪದಗಳು ಮತ್ತು ಜನಪದ ಪ್ರೌಢಿಮೆಯನ್ನು ಇತರೆ ಸಾಹಿತಿಗಳು ಬಳಸಿಕೊಂಡಿಲ್ಲ ಎಂಬುದು ನನ್ನ ಅಭಿಪ್ರಾಯ ಎಂದು ತಿಳಿಸಿದರು.

ದ.ರಾ. ಬೇಂದ್ರೆ ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ಅಧ್ಯಕ್ಷ ಡಿ.ಎಂ ಹಿರೇಮಠ ಅಧ್ಯಕ್ಷೀಯ ನುಡಿಗಳನ್ನಾಡಿದರು. ಸಿಎಂ ಬಿಎಸ್ ಯಡಿಯೂರಪ್ಪ ಅವರು ಅನುದಾನ ನೀಡಿದಷ್ಟು ಇತರೆ ಮುಖ್ಯಮಂತ್ರಿಗಳಾರು ಸಾಹಿತ್ಯ ಪರಿಷತ್ತಿಗೆ ಅನುದಾನ ನೀಡಿಲ್ಲ. ಕನ್ನಡ ಭಾಷೆ ಸಾಹಿತ್ಯದ ಬೆಳವಣಿಗೆಗೆ ಹಣಕಾಸಿನ ಅವಶ್ಯವಿದ್ದು, ಸದ್ಯಕ್ಕೆ ತುಂಬಾ ಸಂಕಷ್ಟದ ಸ್ಥಿತಿ ಅನುಭವಿಸುತ್ತಿದ್ದೇವೆ ಎಂದರು. ಈ ಸಂದರ್ಭದಲ್ಲಿ ದಿಲ್ಲಿ ಕರ್ನಾಟಕ ಸಂಘ ಮತ್ತು ಬೇಂದ್ರೆ ಟ್ರಸ್ಟ್ ವತಿಯಿಂದ ಬಿ.ಎಲ್. ಸಂತೋಷ ಅವರನ್ನು ಸನ್ಮಾನಿಸಲಾಯಿತು.

ಸಮಾರಂಭದಲ್ಲಿ ಇಂದಿರಾಗಾಂಧಿ ರಾಷ್ಟ್ರೀಯ ಆದಿವಾಸಿ ವಿವಿ ಪ್ರೊ. ತೇಜಸ್ವಿ ಕಟ್ಟಿಮನಿ, ಬೇಂದ್ರೆ ಟ್ರಸ್ಟ್ ಅದ್ಯಕ್ಷ ಡಿ.ಎಂ ಹಿರೇಮಠ, ದಿಲ್ಲಿ ಕರ್ನಾಟಕ ಸಂಘದ ಅಧ್ಯಕ್ಷ ವೆಂಕಟಾಚಲ ಹೆಗಡೆ ಹಾಗೂ ಕಾರ್ಯದರ್ಶಿ ಸಿಎಂ ನಾಗರಾಜ್ ಉಪಸ್ಥಿತಿ ಇದ್ದರು. ಡಾ. ಬಸವರಾಜ ಡೋಣೂರ ವರದಿ ಮಂಡಿಸಿದರು.

‘ಪಾಕ್ ಆಕ್ರಮಿತ ಕಾಶ್ಮೀರ ಸೃಷ್ಟಿಗೆ ನೆಹರು ಕಾರಣ’: ಇತಿಹಾಸ ಕೆದಕಿ ಮಾತಲ್ಲೇ ತಿವಿದ ಶಾ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ