ಆ್ಯಪ್ನಗರ

ಕೃಷಿ ಕಾನೂನು ಚರ್ಚೆಗೆ ಬನ್ನಿ: 'ಟ್ವಿಟ್ಟರ್ ಟ್ರೋಲ್' ರಾಹುಲ್ ಗಾಂಧಿಗೆ ಸಿಟಿ ರವಿ ಓಪನ್ ಚಾಲೆಂಜ್!

ಕೃಷಿ ಕಾನೂನುಗಳ ಕುರಿತು ಬಹಿರಂಗ ಚರ್ಚೆಗೆ ಬರುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸವಾಲು ಹಾಕಿರುವ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ, ರಾಹುಲ್ ಗಾಂಧಿ ಅವರಿಗೆ ಕೃಷಿ ಕಾನೂನುಗಳ ಕುರಿತು ಜ್ಞಾನವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

Vijaya Karnataka Web 8 Dec 2020, 5:34 pm
ಬೆಂಗಳೂರು: ಕೇಂದ್ರದ ಕೃಷಿ ಕಾನೂನುಗಳ ಜಾರಿ ವಿರೋಧಿಸಿ ರೈತ ಸಂಘಟನೆಗಳು ನೀಡಿರುವ ಭಾರತ್ ಬಂದ್ ಕರೆಗೆ, ಕಾಂಗ್ರೆಸ್ ಬೆಂಬಲ ನೀಡಿರುವುದನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿಟಿ ರವಿ ಟೀಕಿಸಿದ್ದಾರೆ.
Vijaya Karnataka Web CT Ravi
ಸಂಗ್ರಹ ಚಿತ್ರ


ಅಲ್ಲದೇ ಕೃಷಿ ಕಾನೂನುಗಳ ಕುರಿತು ಬಹಿರಂಗ ಚರ್ಚೆಗೆ ಬರುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಸವಾಲು ಹಾಕಿರುವ ಸಿಟಿ ರವಿ, ರಾಹುಲ್ ಗಾಂಧಿ ಅವರಿಗೆ ಕೃಷಿ ಕಾನೂನುಗಳ ಕುರಿತು ಜ್ಞಾನವಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಕೃಷಿ ಕಾನೂನುಗಳ ಕುರಿತು ಯಾವುದೇ ಜ್ಞಾನವಿಲ್ಲದ ರಾಹುಲ್ ಗಾಂಧಿ, ನೆಪ ಮಾತ್ರಕ್ಕೆ ಭಾರತ್ ಬಂದ್‌ ಕರೆಯನ್ನು ಬೆಂಬಲಿಸುತ್ತಿದ್ದಾರೆ ಎಂದು ಸಿಟಿ ರವಿ ಹರಿಹಾಯ್ದಿದ್ದಾರೆ.

ಕೃಷಿ ಕಾನೂನು ಚರ್ಚೆ ವೇಳೆ ರಾಹುಲ್ ಸದನದಲ್ಲಿ ಹಾಜರಿದ್ದಿದ್ದರೆ ಹೀಗಾಗುತ್ತಿರಲಿಲ್ಲ: ಸ್ಮೃತಿ ಇರಾನಿ!


ಕೇಂದ್ರ ಸರ್ಕಾರ ಜಾರಿ ಮಾಡಿರುವ ಮೂರು ಕೃಷಿ ಕಾನೂನುಗಳ ದೇಶದ ರೈತ ಸಮುದಾಯದ ಪರ ಇದೆ ಎಂದಿರುವ ಸಿಟಿ ರವಿ, ರಾಹುಲ್ ಗಾಂಧಿ ತಮ್ಮೊಂದಿಗೆ ಬಹಿರಂಗ ಚರ್ಚೆಗೆ ಬಂದರೆ ಇವುಗಳನ್ನು ನಾನು ಸಾಬೀತುಪಡಿಸಬಲ್ಲೆ ಎಂದು ಸವಾಲು ಹಾಕಿದ್ದಾರೆ.

ಅವರು ಕೃಷಿ ಸಚಿವರಾಗಿದ್ದಾಗ ಬರೆದ ಪತ್ರದಲ್ಲಿ ಏನಿತ್ತು?: ಪ್ರಸಾದ್ ಪ್ರಶ್ನೆಗೆ ಪವಾರ್ ಉತ್ತರವೇನು?

ರಾಹುಲ್ ಗಾಂಧಿ ತಮ್ಮೊಂದಿಗೆ ಹಿರಂಗ ಚರ್ಚೆಗೆ ಬರಲಿ. ಅವರು ಕೃಷಿ ಕಾನೂನುಗಳು ಹೇಗೆ ಅಂಬಾನಿ ಹಾಗೂ ಅದಾನಿ ಅವರಂತ ಉದ್ಯಮಿಗಳ ಪರ ಇದೆ ಎಂಬುದನ್ನು ಸಾಬೀತುಪಡಿಸಲಿ. ನಾನು ಈ ಕಾನೂನುಗಳು ಹೇಗೆ ಕೃಷಿಕರ ಪರವಾಗಿವೆ ಎಂಬುದನ್ನು ಸಾಬೀತುಪಡಿಸುತ್ತೇನೆ ಎಂದು ಸಿಟಿ ರವಿ ಟ್ವೀಟ್ ಮಾಡಿದ್ದಾರೆ.

ಸಿಟಿ ರವಿ ತಮ್ಮ ಟ್ವೀಟ್ ಕೊನೆಯಲ್ಲಿ ರಾಹುಲ್ ಗಾಂಧಿ ಅವರನ್ನು ಅಮೇಥಿ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಎಂದು ಬಣ್ಣಿಸಿದ್ದು, ಅವರು ನನ್ನ ಆಹ್ವಾನವನ್ನು ಸ್ವೀಕರಿಸುತ್ತಾರೆ ಎಂಬ ಭರವಸೆ ಇದೆ ಎಂದು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ