ಆ್ಯಪ್ನಗರ

ಗೋಹತ್ಯೆ ನಿಷೇಧಕ್ಕೆ ಬಿಜೆಪಿ ಕಾರ್ಯಕರ್ತರಿಂದ ಜಾಲತಾಣದಲ್ಲಿ ಹೆಚ್ಚಿದ ಒತ್ತಡ: ಕಾಯಿದೆ ಜಾರಿಗೆ ಸರಕಾರ ಧೃಡ ನಿರ್ಧಾರ?

ಸರಕಾರ ಅಧಿಕಾರಕ್ಕೆ ಬಂದರೆ ಗೋ ಹತ್ಯಾ ನಿಷೇಧ ಕಾಯಿದೆ ಜಾರಿಗೆ ತರಲಾಗುವುದು ಎಂದು 2018ರ ವಿಧಾನಸಭಾ ಚುನಾವಣೆಗೆ ಮುನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿತ್ತು. ಒಂದು ವರ್ಷ ಕಳೆದರೂ ಕಾಯಿದೆ ಜಾರಿಯಾಗಿಲ್ಲ ಎಂದು ಇದೀಗ ಬಿಜೆಪಿ ಕಾರ್ಯಕರ್ತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Vijaya Karnataka Web 21 Nov 2020, 7:15 am
ಬೆಂಗಳೂರು: ಅಧಿಕಾರಕ್ಕೆ ಬಂದು ಒಂದೂವರೆ ವರ್ಷವಾದರೂ ಪ್ರಣಾಳಿಕೆಯಲ್ಲಿ ನೀಡಿದಂತೆ ಗೋಹತ್ಯಾ ನಿಷೇಧದ ಬಗ್ಗೆ ಚಕಾರವೆತ್ತದ್ದಕ್ಕೆ ಆಕ್ರೋಶಗೊಂಡ ಬಿಜೆಪಿ ಕಾರ್ಯಕರ್ತರು ಸರಕಾರದ ಮೇಲೆ ಒತ್ತಡ ತರಲು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಅಭಿಯಾನ ಆರಂಭಿಸಿದ್ದಾರೆ. ಇದರಿಂದ ಮುಜುಗರಕ್ಕೆ ಈಡಾದ ಸರಕಾರ ಗೋಮಾತೆ ರಕ್ಷಣೆಗಾಗಿ ಅಧಿವೇಶನದಲ್ಲಿ ವಿಧೇಯಕ ಮಂಡನೆಯ ಭರವಸೆ ನೀಡಿದೆ.
Vijaya Karnataka Web cows


ಸರಕಾರ ಅಧಿಕಾರಕ್ಕೆ ಬಂದರೆ ಗೋ ಹತ್ಯಾ ನಿಷೇಧ ಕಾಯಿದೆ ಜಾರಿಗೆ ತರಲಾಗುವುದು ಎಂದು 2018ರ ವಿಧಾನಸಭಾ ಚುನಾವಣೆಗೆ ಮುನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿತ್ತು. ಒಂದು ವರ್ಷ ಕಳೆದರೂ ಕಾಯಿದೆ ಜಾರಿಯಾಗಿಲ್ಲ ಎಂದು ಕಾರ್ಯರ್ಕತರು ಆಕ್ರೋಶಗೊಂಡಿದ್ದಾರೆ. ಪಕ್ಷದ ಶಾಸಕರು, ಸಚಿವರ ಫೆಸ್‌ಬುಕ್‌, ವಾಟ್ಸ್ಯಾಪ್‌‌, ಟ್ವೀಟರ್‌ನಲ್ಲಿಈ ಬಗ್ಗೆ ಪ್ರಶ್ನೆ ಕೇಳುವ ಮೂಲಕ ಮುಜುಗುರಕ್ಕೆ ಸಿಲುಕಿಸುತ್ತಿದ್ದಾರೆ.

ಈ ಮಧ್ಯೆ ಬಾಗಲಕೋಟೆಯಲ್ಲಿ ಮಾತನಾಡಿದ ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್‌ ,''ಗೋಮಾತೆ ರಕ್ಷಣೆಗಾಗಿ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೊಳಿಸುವುದು ನಿಶ್ಚಿತ''ಎಂದು ಸ್ಪಷ್ಟನೆ ನೀಡಿದ್ದಾರೆ. ''2011ರಲ್ಲಿ ಬಿಜೆಪಿ ಸರಕಾರ ಕಾಯಿದೆ ಜಾರಿಗೊಳಿಸಿತ್ತು. ಆಗ ಕೇಂದ್ರದಲ್ಲಿ ನಮ್ಮ ಸರಕಾರವಿರಲಿಲ್ಲ, ನಂತರ ಕಾಂಗ್ರೆಸ್‌ ಸರಕಾರ ರದ್ದುಗೊಳಿಸಿತ್ತು. ಈಗ ಕೇಂದ್ರದಲ್ಲಿ ನಮ್ಮ ಸರಕಾರವಿದೆ, ಕಾಯಿದೆ ಜಾರಿ ಬಿಜೆಪಿ ಅಜೆಂಡಾ ಆಗಿದೆ. ನೂರಕ್ಕೆ ನೂರರಷ್ಟು ಜಾರಿ ಮಾಡುತ್ತೇವೆ'' ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಹಿಂದಿಯಲ್ಲಿ ದೀಪಾವಳಿ ಶುಭ ಕೋರಿದ ರಾಜ್ಯಪಾಲ ವಜೂಭಾಯಿ ವಾಲಾ ನಡೆಗೆ ಆಕ್ಷೇಪ

ಬಿಜೆಪಿ ಅಧಿಕೃತ ಸ್ಪಷ್ಟನೆ!

''ಗೋಹತ್ಯೆ ನಿಷೇಧ ಜಾರಿಗೊಳಿಸಲು ಸರಕಾರ ಈಗಾಗಲೇ ನಿರ್ಧರಿಸಿದೆ. ಮುಂದಿನ ಅಧಿವೇಶನದಲ್ಲಿ ಕಾಯಿದೆ ಜಾರಿಗೊಳಿಸಲು ಸರಕಾರ ವಿಧೇಯಕ ಮಂಡಿಸಲಿದೆ,'' ಎಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಭರವಸೆ ನೀಡಿದ್ದಾರೆ.

''ಅಕ್ಬರ್‌ ಕಾಲದಲ್ಲೂ ಗೋಹತ್ಯೆ ನಿಷೇಧವಾಗಿದ್ದರ ಬಗ್ಗೆ ಪ್ರಸ್ತಾಪವಿದೆ. ಈಗಿರುವ ಕಾಯಿದೆ ಕಠಿಣವಾಗಿಲ್ಲ. ಇದರಿಂದ ಗೋಹತ್ಯೆ ನಿಷೇಧ ಸಾಕಾರವಾಗುವುದಿಲ್ಲ. 59, 100 ರೂ. ದಂಡ ಹಾಕಿ ಆರೋಪಿಗಳನ್ನು ಕಳುಹಿಸಲಾಗುತ್ತದೆ. ಕಠಿಣ ಕಾಯಿದೆ ಜಾರಿಗೆ ತರುವ ಅಗತ್ಯವಿದೆ. ಉತ್ತರ ಪ್ರದೇಶ ಸೇರಿದಂತೆ ಅನ್ಯ ರಾಜ್ಯಗಳಲ್ಲಿ ಇರುವ ಕಾಯಿದೆ ನೋಡಿಕೊಂಡು ನಮ್ಮಲ್ಲೂ ಜಾರಿಗೆ ತರಬೇಕು,'' ಎಂದು ಒತ್ತಾಯಿಸಿದರು.

ಸಿದ್ದು ಕಟುಕರ ವಂಶದಿಂದ ಬಂದವರಲ್ಲ!

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಇದೇ ಸಂದರ್ಭದಲ್ಲಿ ವಾಗ್ದಾಳಿ ನಡೆಸಿ,'' ನೀವು ಕಟುಕರ ವಂಶದಿಂದ ಬಂದವರಲ್ಲ. ನೀವ್ಯಾಕೆ ಕಾಯಿದೆ ವಿರೋಧಿಸುತ್ತೀರಿ? ನಾನು ಹಸು, ಎಮ್ಮೆ ಮೇಯಿಸಿದ್ದೇನೆ ಎಂದು ಸಿದ್ದರಾಮಯ್ಯ ಹೇಳಿಕೆ ನೀಡುತ್ತಾರೆ. ಹೀಗಾಗಿ ಅವರು ವಿಧೇಯಕಕ್ಕೆ ವಿರೋಧ ಮಾಡುವುದಿಲ್ಲ ಎಂದು ಭಾವಿಸಿಕೊಂಡಿದ್ದೇನೆ,'' ಎಂದು ಸಿಟಿ ರವಿ ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ