ಆ್ಯಪ್ನಗರ

ಸಿಎಂ ಕಾರ್ಯಾಲಯದ ಮೇಲೆ ‘ಪಕ್ಷ-ಸಂಘ’ದ ಹಿಡಿತ?; ಬಿಎಸ್‌ವೈ ಅವಧಿಯ 19 ಸಿಬ್ಬಂದಿಗೆ ಗೇಟ್‌ಪಾಸ್‌!

ಮುಖ್ಯಮಂತ್ರಿಯವರ ವಿವೇಚನೆಯಂತೆ ಅವರ ಕಚೇರಿಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ/ ಪ್ರಧಾನ ಕಾರ್ಯದರ್ಶಿಯನ್ನು ನೇಮಿಸಿಕೊಳ್ಳಲಾಗುತ್ತಿದೆ. ಈ ವಿಚಾರದಲ್ಲೂ ಪಕ್ಷದಿಂದ ಸೂಚನೆ ಬಂದಿದ್ದು, ಸರಕಾರದ ವರ್ಚಸ್ಸು ಹೆಚ್ಚಿಸುವ ಅಧಿಕಾರಿಗಳನ್ನು ನಿಯೋಜಿಸಿಕೊಳ್ಳಬೇಕು. ಪರಿಣಿತರು, ತಜ್ಞರನ್ನು ಮಾತ್ರ ಪರಿಗಣಿಸಬೇಕು ಎಂಬ ಸೂಚನೆ ಕೊಡಲಾಗಿದೆ ಎನ್ನಲಾಗಿದೆ.

Vijaya Karnataka 3 Aug 2021, 10:50 am
ಬೆಂಗಳೂರು: ಬಿಜೆಪಿ ವರಿಷ್ಠರ ಸೂಚನೆ ಅನುಸಾರ ಮುಖ್ಯಮಂತ್ರಿಯವರ ಆಪ್ತ ಕಾರ್ಯಾಲಯದ ಮೇಲೆ ಪಕ್ಷ ಮತ್ತು ಸಂಘ ಪರಿವಾರ ಹಿಡಿತ ಸಾಧಿಸುವ ನಿರೀಕ್ಷೆಯಿದೆ.
Vijaya Karnataka Web Bommai BSY


ಯಡಿಯೂರಪ್ಪ ಅವಧಿಯಲ್ಲಿ ಸಿಎಂ ಕಾರ್ಯಾಲಯದಲ್ಲಿದ್ದ 19 ಸಿಬ್ಬಂದಿಯನ್ನು ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಬಿಡುಗಡೆಗೊಳಿಸಿದ್ದಾರೆ. ಇವರಲ್ಲಿ ನಿಕಟಪೂರ್ವ ಸಿಎಂ ಅವರ ಸಲಹೆಗಾರರ ಹುದ್ದೆಯಲ್ಲಿದ್ದವರೂ ಇದ್ದರು. ಹೊರಗುತ್ತಿಗೆ ಸಿಬ್ಬಂದಿ ಸೇರಿ ಸಿಎಂ ಕಚೇರಿಯಲ್ಲೂ 100ಕ್ಕೂ ಹೆಚ್ಚು ನೌಕರರು ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಲ್ಲಿ ಯಾರನ್ನು ಮುಂದುವರಿಸಬೇಕು ಎಂಬ ಬಗ್ಗೆ ಪಕ್ಷ ಮತ್ತು ಸಂಘದ ಕಡೆಯಿಂದ ನಿರ್ದೇಶನ ಬರುವ ಸಾಧ್ಯತೆಯಿದೆ.
ಸಿಂದಗಿ ಉಪಚುನಾವಣೆಗೆ ವಿಜಯೇಂದ್ರ ಸ್ಪರ್ಧೆ? ಕಮಲ ಪಾಳಯದಲ್ಲಿ ನಡೀತಿದೆ ಗೆಲುವಿನ ಲೆಕ್ಕಾಚಾರ!
ಈ ಸಂಬಂಧ ಪಕ್ಷದಿಂದ ಪರಾಮರ್ಶೆ ನಡೆಸಲಾಗಿದೆ. ಅದರಂತೆಯೇ ಮುಂದಿನ ಪ್ರಕ್ರಿಯೆ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಮುಖ್ಯಮಂತ್ರಿಯವರ ವಿವೇಚನೆಯಂತೆ ಅವರ ಕಚೇರಿಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ/ ಪ್ರಧಾನ ಕಾರ್ಯದರ್ಶಿಯನ್ನು ನೇಮಿಸಿಕೊಳ್ಳಲಾಗುತ್ತಿದೆ. ಈ ವಿಚಾರದಲ್ಲೂ ಪಕ್ಷದಿಂದ ಸೂಚನೆ ಬಂದಿದ್ದು, ಸರಕಾರದ ವರ್ಚಸ್ಸು ಹೆಚ್ಚಿಸುವ ಅಧಿಕಾರಿಗಳನ್ನು ನಿಯೋಜಿಸಿಕೊಳ್ಳಬೇಕು. ಪರಿಣಿತರು, ತಜ್ಞರನ್ನು ಮಾತ್ರ ಪರಿಗಣಿಸಬೇಕು ಎಂಬ ಸೂಚನೆ ಕೊಡಲಾಗಿದೆ ಎನ್ನಲಾಗಿದೆ.

ಮುಖ್ಯಮತ್ರಿ ಕಾರ್ಯಾಲಯದಲ್ಲಿ ಬಿಜೆಪಿ ಪರವಾಗಿರುವವರು ಇದ್ದರೆ ಆಡಳಿತದಲ್ಲಿನ ಲೋಪದೋಷಗಳನ್ನ ತಿಳಿದುಕೊಳ್ಳಲು ಸಾಧ್ಯ ಹಾಗೂ ಮಾಹಿತಿಗಳು ಪ್ರತಿಪಕ್ಷಗಳ ಮುಖಂಡರಿಗೆ ಸೋರಿಕೆ ಆಗುವುದನ್ನು ತಡೆಯಲು ಸಾಧ್ಯ ಎನ್ನಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ