ಆ್ಯಪ್ನಗರ

ಮಂತ್ರಿಮಂಡಲಕ್ಕೆ ಹೈಕಮಾಂಡ್‌ನಿಂದ 6 ತಿಂಗಳ ಟಾಸ್ಕ್‌; ಕೆಲಸ ಮಾಡದಿದ್ದರೆ ಸಚಿವರ ತಲೆದಂಡ ಪಕ್ಕಾ..!

ಸಚಿವರುಗಳು ಯಾವುದೇ ನೆಪ ಹೇಳದೆ ಕೆಲಸ ಮಾಡಬೇಕಾಗುತ್ತದೆ. ತಾವು ನಿರ್ವಹಿಸುವ ಇಲಾಖೆಯ ಯೋಜನೆಗಳ ಕ್ಷಿಪ್ರ ಅನುಷ್ಠಾನಕ್ಕೆ ಮುತುವರ್ಜಿ ವಹಿಸಬೇಕಾಗುತ್ತದೆ. ಈ ಮಾನದಂಡದ ಆಧಾರದಲ್ಲೆ ಸಚಿವರ ಕಾರ್ಯವೈಖರಿ ಮೌಲ್ಯಮಾಪನವಾಗಲಿದೆ. ಸಚಿವರ ಕಾರ್ಯಕ್ಷಮತೆ ಬಗ್ಗೆ ರಾಜ್ಯ ಉಸ್ತುವಾರಿ ಸಿಂಗ್‌ ಖುದ್ದು ನಿಗಾ ವಹಿಸಲಿದ್ದಾರೆ.

Vijaya Karnataka Web 14 Jan 2021, 6:46 am
ಬೆಂಗಳೂರು: ಸಚಿವ ಸಂಪುಟ ವಿಸ್ತರಣೆ ಬೆನ್ನಿಗೇ ಸಚಿವರುಗಳಿಗೆ ಬಿಜೆಪಿ ಹೈಕಮಾಂಡ್‌ 6 ತಿಂಗಳ ಟಾಸ್ಕ್‌ ನೀಡಿದೆ. ಅಂದರೆ ಮುಂದಿನ 6 ತಿಂಗಳಲ್ಲಿ ದಕ್ಷ ಕಾರ್ಯ ನಿರ್ವಹಣೆ ತೋರಿದವರು ಮಾತ್ರ ಮಂತ್ರಿಗಳಾಗಿ ಮುಂದುವರಿಯಲಿದ್ದಾರೆ.
Vijaya Karnataka Web New ministers of karnataka


ಈ ಸರಕಾರ ರಚನೆ ಬಳಿಕ ಪ್ರಾರಂಭದಲ್ಲಿ ಭಾರೀ ಪ್ರವಾಹ ಬಂದಿತ್ತು. ನಂತರ ಕೊರೊನಾದಿಂದಾಗಿ ಸಚಿವರುಗಳ ಕಾರ್ಯವೈಖರಿ ಮೌಲ್ಯಮಾಪನ ಸಾಧ್ಯವಾಗಿಲ್ಲ. ಈಗ ಆರ್ಥಿಕ ಸ್ಥಿತಿ ಚೇತರಿಕೆ ಕಾಣುತ್ತಿದೆ. ಹೊಸ ಬಜೆಟ್‌ ಮಂಡನೆಯೂ ಹಣಕಾಸು ಖಾತೆ ಹೊಂದಿರುವ ಸಿಎಂ ಯಡಿಯೂರಪ್ಪ ಸಿದ್ಧತೆ ಪ್ರಾರಂಭಿಸಿದ್ದಾರೆ.

‘ನೀವು ಯಾರ ಭಿಕ್ಷೆಯಿಂದ ಅಧಿಕಾರ ಬಂದಿದ್ದೀರಾ ಅನ್ನೋದನ್ನು ಅರ್ಥ ಮಾಡಿಕೊಳ್ಳಿ’; ವಿಶ್ವನಾಥ್‌ ಕಿಡಿ
ಈ ಹಿನ್ನೆಲೆಯಲ್ಲಿ ಸಚಿವರುಗಳು ಯಾವುದೇ ನೆಪ ಹೇಳದೆ ಕೆಲಸ ಮಾಡಬೇಕಾಗುತ್ತದೆ. ತಾವು ನಿರ್ವಹಿಸುವ ಇಲಾಖೆಯ ಯೋಜನೆಗಳ ಕ್ಷಿಪ್ರ ಅನುಷ್ಠಾನಕ್ಕೆ ಮುತುವರ್ಜಿ ವಹಿಸಬೇಕಾಗುತ್ತದೆ. ಈ ಮಾನದಂಡದ ಆಧಾರದಲ್ಲೆ ಸಚಿವರ ಕಾರ್ಯವೈಖರಿ ಮೌಲ್ಯಮಾಪನವಾಗಲಿದೆ. ಸಚಿವರ ಕಾರ್ಯಕ್ಷಮತೆ ಬಗ್ಗೆ ರಾಜ್ಯ ಉಸ್ತುವಾರಿ ಸಿಂಗ್‌ ಖುದ್ದು ನಿಗಾ ವಹಿಸಲಿದ್ದಾರೆ. ಹಾಗಾಗಿ 6 ತಿಂಗಳ ಬಳಿಕ ಮಂತ್ರಿಮಂಡಲದಲ್ಲಿ ಮೇಜರ್‌ ಸರ್ಜರಿ ನಿರೀಕ್ಷಿತ ಎಂದು ಹೇಳಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ