ಆ್ಯಪ್ನಗರ

ರೇವಣ್ಣ ನಿಂಬೆಹಣ್ಣು, ಬರಿಗಾಲ ಪೂಜೆ ಫಲಿಸಲಿಲ್ಲ: ಎ. ಮಂಜು ಲೇವಡಿ

ದೋಸ್ತಿ ಸರಕಾರದ ಬಿಕ್ಕಟ್ಟು ಆರಂಭವಾದ ಬಳಿಕ ಹೋದಲ್ಲೆಲ್ಲ ನಿಂಬೆ ಹಣ್ಣು ಹಿಡಿದುಕೊಂಡು ಹೋಗುತ್ತಿದ್ದ ಜೆಡಿಎಸ್ ಮುಖಂಡ, ಮಾಜಿ ಸಚಿವ ಎಚ್‌.ಡಿ ರೇವಣ್ಣ ಅವರ ನಡೆಯನ್ನು ಬಿಜೆಪಿ ನಾಯಕ ಎ. ಮಂಜು ಲೇವಡಿ ಮಾಡಿದ್ದಾರೆ.

Vijaya Karnataka Web 24 Jul 2019, 11:22 am
ಮೈಸೂರು: ಎಚ್‌.ಡಿ ರೇವಣ್ಣ ಅವರ ನಿಂಬೆಹಣ್ಣು, ಬರಿಗಾಲು ಪೂಜೆ ಫಲಿಸಲಿಲ್ಲ. ದೇವೇಗೌಡರ ಕುಟುಂಬಕ್ಕೆ 9ರ ಕಂಟಕ ಇದೆ ಎಂದು ಮುಂಚಿತವಾಗಿಯೇ ಹೇಳಿದ್ದೆ. ಬರಿಗಾಲಿನಲ್ಲಿ ನಡೆದರೆ, ನಿಂಬೆಹಣ್ಣು ಹಿಡಿದುಕೊಂಡು ಹೋದರೆ ನಮ್ಮ ಫ್ಯಾಮಿಲಿಗೆ ಒಳ್ಳೇದಾಗುತ್ತದೆ ಅಂದುಕೊಂಡ್ರು, ಆದರೆ ಅದು ಸಾಧ್ಯವಾಗಲಿಲ್ಲ ಎಂದು ಬಿಜೆಪಿ ನಾಯಕ ಎ. ಮಂಜು ಲೇವಡಿ ಮಾಡಿದ್ದಾರೆ.
Vijaya Karnataka Web A Manju


ಚಾಮುಂಡೇಶ್ವರಿ ದೇವಿಯ ದರ್ಶನದ ಬಳಿಕ ಮಾತನಾಡಿದ ಎ. ಮಂಜು ಸಂಖ್ಯಾಶಾಸ್ತ್ರದ ಶಕುನದ ಲೆಕ್ಕಾಚಾರಗಳನ್ನು ಮುಂದಿಡುತ್ತ, '1999, 2009, 2019 ಗೌಡರ ಕುಟುಂಬಕ್ಕೆ ಆಗೋದಿಲ್ಲ ಎಂದಿದ್ದೆ. ಎಲ್ಲರಿಗೂ ದೇವರು ಇರುತ್ತದೆ. ಮಂಗಳವಾರ ವಿಶ್ವಾಸಮತ ಮುಂದೂಡಿದರೆ ಒಳ್ಳೇದಾಗುತ್ತದೆ ಎಂದು ಮುಂದೂಡಲು ಮುಂದಾಗಿದ್ರು ರೇವಣ್ಣ. ಈಗ ಅವರ ನಿಂಬೆ ಹಣ್ಣಿಗೆ ತಕ್ಕ ಉತ್ತರ ದೊರೆತಿದೆ' ಎಂದು ಲೇವಡಿ ಮಾಡಿದರು.

'ರಾಜ್ಯದಲ್ಲಿ ರೈತರು ಸಂಕಷ್ಟದಲ್ಲಿದ್ದಾರೆ. ರಾಜ್ಯಕ್ಕೆ, ಯಡಿಯೂರಪ್ಪ ಹಾಗೂ ಮೋದಿ ಅವರಿಗೆ ಒಳ್ಳೆದಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ. ಕಳೆದ 10 ದಿನಗಳಲ್ಲಿ ನಡೆಯುತ್ತಿದ್ದ ರಾಜಕೀಯ ಬೆಳವಣಿಗೆಗೆ ತೆರೆ ಬಿದ್ದಿದೆ. ಮೈತ್ರಿ ಸರ್ಕಾರವನ್ನು ಯಾರೂ ಬೀಳಿಸಿಲ್ಲ, ಅವರೇ ಬೀಳಿಸಿಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯ ಸುಭಿಕ್ಷವಾಗಿ ಸಾಗಲಿ ಎಂದು ದೇವರಲ್ಲಿ ಪ್ರಾರ್ಥಿಸಿದ್ದೇನೆ' ಎಂದು ಮಂಜು ನುಡಿದರು.

ಲೋಕಸಭೆ ಚುನಾವಣೆ ವಿಚಾರದಲ್ಲಿ ಈಗಾಗಲೇ ನ್ಯಾಯಾಲಯದ ಮೊರೆ ಹೋಗಿದ್ದೇನೆ. ಮೂರ್ನಾಲ್ಕು ತಿಂಗಳಲ್ಲಿ ನನಗೆ ಜಯ ಸಿಗಲಿದೆ. ನಮ್ಮ ಸರ್ಕಾರ ಯಶಸ್ವಿಯಾಗಿ ನಡೆಯಲಿದೆ ಎನ್ನುವ ವಿಶ್ವಾಸವಿದೆ. ಸದ್ಯ ನಾನು ಸಂಪುಟ ಸೇರಿಕೊಳ್ಳುವ ಪ್ರಯತ್ನ ನಡೆಸಿಲ್ಲ ಎಂದು ಮಂಜು ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ