ಪಿಎಫ್ಐ ನಿಷೇಧ ಮಾಡಿರೋದು ಕೇವಲ ಟ್ರೈಲರ್ ಮಾತ್ರ, ಪಿಕ್ಚರ್ ಅಭೀ ಬಾಕಿ ಹೈ: ಸಿಟಿ ರವಿ
ಪಿಎಫ್ಐ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗೆ ಸಂಚು ರೂಪಿಸಿತ್ತು. ಭಾರತದ ಆಂತರಿಕ ಸುರಕ್ಷತೆಗೆ ಸಮಯೋಚಿತವಾದ ತೀರ್ಮಾನವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ ಎಂದ ಸಿ.ಟಿ ರವಿ ಅವರು ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಕರ್ನಾಟಕ ಸೇರಿ ದೇಶದ ಉದ್ದಗಲದಲ್ಲಿ ಹಲವು ಕೊಲೆ, ಶಾಂತಿಭಂಗ ಕೃತ್ಯಗಳಲ್ಲಿ ಪಿಎಫ್ಐ ಭಾಗಿ ಯಾಗಿತ್ತು. ಕೇರಳದಲ್ಲಿ ಉಪನ್ಯಾಸಕರೊಬ್ಬರನ್ನು ವಿದ್ಯಾರ್ಥಿಗಳೆದುರೇ ಕೊಂದು ಹಾಕ್ತಾರೆ. ಆಗಿನ ಕಾಂಗ್ರೆಸ್ ಸರ್ಕಾರ ಹಲವರ ಹತ್ಯೆಗೆ ಪಿಎಫ್ಐ ಕಾರಣವಾಗಿದೆ, ನಿಷೇಧ ಮಾಡಿ ಅಂತ ಅಂತ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ರು ಎಂದು ತಿಳಿಸಿದರು.
Authored byಇರ್ಷಾದ್ ಉಪ್ಪಿನಂಗಡಿ | Edited byAvinash Kadeshivalaya | Vijaya Karnataka Web 28 Sep 2022, 6:33 pm
ಹೈಲೈಟ್ಸ್:
- ಪಿಎಫ್ಐ ನಿಷೇಧ ಟ್ರೈಲರ್ ಮಾತ್ರ, ಪಿಕ್ಚರ್ ಅಭೀ ಬಾಕಿ ಹೈ
- ಪಿಎಫ್ಐ ಬ್ಯಾನ್ ಅನ್ನು ಕಾಂಗ್ರೆಸ್ ಪಕ್ಷದವರು ಸ್ವಾಗತಿಸಲಿ
- ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿಕೆ
ಬೆಂಗಳೂರು: ಪಿಎಫ್ಐ ನಿಷೇಧ ಟ್ರೈಲರ್ ಮಾತ್ರ, ಪಿಕ್ಚರ್ ಅಭೀ ಬಾಕಿ ಹೈ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದರು. ಪಿಎಫ್ಐ ನಿಷೇಧದ ಹಿನ್ನಲೆಯಲ್ಲಿ ಮಾತನಾಡಿದ ಅವರು, ಪಿಎಫ್ಐ ಬ್ಯಾನ್ ಅನ್ನು ಕಾಂಗ್ರೆಸ್ನವರು ಸ್ವಾಗತಿಸಲಿ. ಹಿಂದೆ ಅವರು ಪಿಎಫ್ಐ ಕಾರ್ಯಕರ್ತರ ಮೇಲಿನ ಕೇಸ್ ವಾಪಸ್ ಪಡೆದಿದ್ದಕ್ಕೆ ಕ್ಷಮೆ ಕೇಳಲಿ ಎಂದು ಆಗ್ರಹಿಸಿದರು. ಬಿಜೆಪಿ ಕಚೇರಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2047 ರೊಳಗೆ ಭಾರತವನ್ನು ಮೊಗಲ್ಸ್ಥಾನ್ ಮಾಡುವ ಕಲ್ಪನೆಯ ಮೂಲಕ ಭಾರತ ವಿಭಜನೆಯ ಸಂಚನ್ನು ಪಿಎಫ್ಐ ರೂಪಿಸಿತ್ತು. ಆ ಮೂಲಕ ಭಾರತಕ್ಕೆ ವಿಷವುಣಿಸುವ ಸಂಚನ್ನು ಪಿಎಫ್ಐ ಮತ್ತು ಅದರ ಅಂಗಸಂಸ್ಥೆಗಳು ಮಾಡಿದ್ದವು ಎಂದು ಆರೋಪಿಸಿದರು. ಈ ಹಿಂದೆಯೇ 2001 ರಲ್ಲಿ ಭಾರತದಲ್ಲಿ ಸಿಮಿ ಬ್ಯಾನ್ ಆಗಿತ್ತು. ವಾಜಪೇಯಿ ಸರ್ಕಾರ ಸಿಮಿಯನ್ನು ಬ್ಯಾನ್ ಮಾಡಿತ್ತು. ನಂತರ ಸಿಮಿಯ ಹೊಸ ಅವತಾರವಾಗಿ ಪಿಎಫ್ಐ ಹುಟ್ಟಿಕೊಂಡಿದೆ ಎಂದರು.
ಪಿಎಫ್ಐ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗೆ ಸಂಚು ರೂಪಿಸಿತ್ತು. ಭಾರತದ ಆಂತರಿಕ ಸುರಕ್ಷತೆಗೆ ಸಮಯೋಚಿತವಾದ ತೀರ್ಮಾನವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ ಎಂದ ಸಿ.ಟಿ ರವಿ ಅವರು ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಕರ್ನಾಟಕ ಸೇರಿ ದೇಶದ ಉದ್ದಗಲದಲ್ಲಿ ಹಲವು ಕೊಲೆ, ಶಾಂತಿಭಂಗ ಕೃತ್ಯಗಳಲ್ಲಿ ಪಿಎಫ್ಐ ಭಾಗಿ ಯಾಗಿತ್ತು. ಕೇರಳದಲ್ಲಿ ಉಪನ್ಯಾಸಕರೊಬ್ಬರನ್ನು ವಿದ್ಯಾರ್ಥಿಗಳೆದುರೇ ಕೊಂದು ಹಾಕ್ತಾರೆ. ಆಗಿನ ಕಾಂಗ್ರೆಸ್ ಸರ್ಕಾರ ಹಲವರ ಹತ್ಯೆಗೆ ಪಿಎಫ್ಐ ಕಾರಣವಾಗಿದೆ, ನಿಷೇಧ ಮಾಡಿ ಅಂತ ಅಂತ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ರು.ಬಿಹಾರದಲ್ಲಿ ಮೋದಿಯವರ ಹತ್ಯೆಗೆ ಸಂಚು ಮಾಡಿದ್ರು ಅಂತ ತನಿಖೆಯಿಂದ ಗೊತ್ತಾಗಿದೆ. ರಾಷ್ಟ್ರಭಕ್ತರನ್ನು ಗುರಿಯಾಗಿಸಿಕೊಂಡು ಹತ್ಯೆ ನಡೆಸುವ ಸಂಚು ನಡೆಸಿದ್ರು ಎಂದು ಆರೋಪಿಸಿದರು.
ರಾಜ್ಯದಲ್ಲಿ 32ಕ್ಕೂ ಹಿಂದೂ ಕಾರ್ಯಕರ್ತರ ಹತ್ಯೆಯ ಹಿಂದೆ ಪಿಎಫ್ಐ ಕೈವಾಡ ಇದೆ ಅಂತ ತನಿಖೆಯಿಂದ ಗೊತ್ತಾಗಿದೆ. ಹೀಗೇ ಬಿಟ್ಟಿದ್ರೆ ಭಾರತ ಆಂತರಿಕ ಯುದ್ಧ ಎದುರಿಸಬೇಕಾಗಿತ್ತು.ಅನಗತ್ಯ ಭಯ ಬಿತ್ತಿ ಮುಸಲ್ಮಾನರನ್ನು ದೇಶದ ವಿರುದ್ಧ ಎತ್ತಿ ಕಟ್ಟುವ ಸಂಚು ನಡೆಸುತ್ತಿದ್ದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿರುದ್ಧ ಅಪಪ್ರಚಾರ ಮಾಡುವ ಕಾರ್ಯದಲ್ಲೂ ತೊಡಗಿದ್ದರು ಎಂದು ಆರೋಪಿಸಿದರು.
ಸರ್ಕಾರದ ಆಯಕಟ್ಟಿನ ಜಾಗಗಳಲ್ಲಿ, ಪೊಲೀಸ್, ಸೈನ್ಯ, ನ್ಯಾಯಾಂಗ ವ್ಯವಸ್ಥೆ ಒಳಗೆ ತಮ್ಮ ಬೆಂಬಲಿಗರನ್ನು ವ್ಯವಸ್ಥಿತವಾಗಿ ಕೂರಿಸಬೇಕು ಅಂತ ಸಂಚು ಮಾಡಿದ್ರು.ಭಾರತೀಯತೆ ನಾಶ ಮಾಡುವ ಉದ್ದೇಶ ಪಿಎಫ್ ಐಗೆ ಇತ್ತು. ಇಷ್ಟಾದ್ರೂ ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಉಗ್ರ ಭಾಗ್ಯ ಯೋಜನೆ ಕೊಟ್ಟಿದ್ದು ಈ ನಾಡಿನ ದುರಂತ. ಉಗ್ರಭಾಗ್ಯ ಯೋಜನೆ ಮೂಲಕ 175 ಪಿಎಫ್ಐ, ಕೆ ಎಫ್ ಡಿ ಕಾರ್ಯಕರ್ತರ ಮೇಲಿನ ಮೊಕದ್ದಮೆ ವಾಪಸ್ ಪಡೆದಿದ್ರು. ಉಗ್ರಭಾಗ್ಯ ಯೋಜನೆಯಿಂದಾನೇ 32 ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಕೊಲೆ ಆಯ್ತು ಎಂದು ಆರೋಪಿಸಿದರು.
ಪಿಎಫ್ಐ ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗೆ ಸಂಚು ರೂಪಿಸಿತ್ತು. ಭಾರತದ ಆಂತರಿಕ ಸುರಕ್ಷತೆಗೆ ಸಮಯೋಚಿತವಾದ ತೀರ್ಮಾನವನ್ನು ಕೇಂದ್ರ ಸರ್ಕಾರ ಕೈಗೊಂಡಿದೆ ಎಂದ ಸಿ.ಟಿ ರವಿ ಅವರು ಕೇಂದ್ರ ಸರ್ಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಕರ್ನಾಟಕ ಸೇರಿ ದೇಶದ ಉದ್ದಗಲದಲ್ಲಿ ಹಲವು ಕೊಲೆ, ಶಾಂತಿಭಂಗ ಕೃತ್ಯಗಳಲ್ಲಿ ಪಿಎಫ್ಐ ಭಾಗಿ ಯಾಗಿತ್ತು. ಕೇರಳದಲ್ಲಿ ಉಪನ್ಯಾಸಕರೊಬ್ಬರನ್ನು ವಿದ್ಯಾರ್ಥಿಗಳೆದುರೇ ಕೊಂದು ಹಾಕ್ತಾರೆ. ಆಗಿನ ಕಾಂಗ್ರೆಸ್ ಸರ್ಕಾರ ಹಲವರ ಹತ್ಯೆಗೆ ಪಿಎಫ್ಐ ಕಾರಣವಾಗಿದೆ, ನಿಷೇಧ ಮಾಡಿ ಅಂತ ಅಂತ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿದ್ರು.ಬಿಹಾರದಲ್ಲಿ ಮೋದಿಯವರ ಹತ್ಯೆಗೆ ಸಂಚು ಮಾಡಿದ್ರು ಅಂತ ತನಿಖೆಯಿಂದ ಗೊತ್ತಾಗಿದೆ. ರಾಷ್ಟ್ರಭಕ್ತರನ್ನು ಗುರಿಯಾಗಿಸಿಕೊಂಡು ಹತ್ಯೆ ನಡೆಸುವ ಸಂಚು ನಡೆಸಿದ್ರು ಎಂದು ಆರೋಪಿಸಿದರು.
ರಾಜ್ಯದಲ್ಲಿ 32ಕ್ಕೂ ಹಿಂದೂ ಕಾರ್ಯಕರ್ತರ ಹತ್ಯೆಯ ಹಿಂದೆ ಪಿಎಫ್ಐ ಕೈವಾಡ ಇದೆ ಅಂತ ತನಿಖೆಯಿಂದ ಗೊತ್ತಾಗಿದೆ. ಹೀಗೇ ಬಿಟ್ಟಿದ್ರೆ ಭಾರತ ಆಂತರಿಕ ಯುದ್ಧ ಎದುರಿಸಬೇಕಾಗಿತ್ತು.ಅನಗತ್ಯ ಭಯ ಬಿತ್ತಿ ಮುಸಲ್ಮಾನರನ್ನು ದೇಶದ ವಿರುದ್ಧ ಎತ್ತಿ ಕಟ್ಟುವ ಸಂಚು ನಡೆಸುತ್ತಿದ್ದರು. ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿರುದ್ಧ ಅಪಪ್ರಚಾರ ಮಾಡುವ ಕಾರ್ಯದಲ್ಲೂ ತೊಡಗಿದ್ದರು ಎಂದು ಆರೋಪಿಸಿದರು.
ಸರ್ಕಾರದ ಆಯಕಟ್ಟಿನ ಜಾಗಗಳಲ್ಲಿ, ಪೊಲೀಸ್, ಸೈನ್ಯ, ನ್ಯಾಯಾಂಗ ವ್ಯವಸ್ಥೆ ಒಳಗೆ ತಮ್ಮ ಬೆಂಬಲಿಗರನ್ನು ವ್ಯವಸ್ಥಿತವಾಗಿ ಕೂರಿಸಬೇಕು ಅಂತ ಸಂಚು ಮಾಡಿದ್ರು.ಭಾರತೀಯತೆ ನಾಶ ಮಾಡುವ ಉದ್ದೇಶ ಪಿಎಫ್ ಐಗೆ ಇತ್ತು. ಇಷ್ಟಾದ್ರೂ ಸಿಎಂ ಆಗಿದ್ದಾಗ ಸಿದ್ದರಾಮಯ್ಯ ಉಗ್ರ ಭಾಗ್ಯ ಯೋಜನೆ ಕೊಟ್ಟಿದ್ದು ಈ ನಾಡಿನ ದುರಂತ. ಉಗ್ರಭಾಗ್ಯ ಯೋಜನೆ ಮೂಲಕ 175 ಪಿಎಫ್ಐ, ಕೆ ಎಫ್ ಡಿ ಕಾರ್ಯಕರ್ತರ ಮೇಲಿನ ಮೊಕದ್ದಮೆ ವಾಪಸ್ ಪಡೆದಿದ್ರು. ಉಗ್ರಭಾಗ್ಯ ಯೋಜನೆಯಿಂದಾನೇ 32 ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಕೊಲೆ ಆಯ್ತು ಎಂದು ಆರೋಪಿಸಿದರು.