ಆ್ಯಪ್ನಗರ

ಜೈಲಿಗೆ ಹೋಗಿ ಬಂದವರು ಬಂಡೆಯಲ್ಲ, ಅವರದ್ದು ಭಂಡತನವಷ್ಟೇ; ಡಿಕೆಶಿಗೆ ಸಿಟಿ ರವಿ ಟಾಂಗ್

ಜೈಲಿಗೆ ಹೋಗಿ ಬಂದವರೆಲ್ಲ ಬಂಡೆಯಲ್ಲ. ಅಷ್ಟಕ್ಕೂ ಡಿಕೆ ಶಿವಕುಮಾರ್‌ ಸ್ವಾತಂತ್ರ್ಯ ಹೋರಾಟ ನಡೆಸಿ ಜೈಲಿಗೆ ಹೋಗಿ ಬಂದಿದ್ದಾರಾ? ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ. ಜೈಲಿಗೆ ಹೋಗಿ ಬಂದವರು ಬಂಡೆ ಎನ್ನುತ್ತಾರೆ. ಅಂಥವರು ಬಂಡೆಯಲ್ಲ. ಅವರದ್ದು ಭಂಡತನವಷ್ಟೇ ಎಂದು ಸಿಟಿ ರವಿ ಕಿಡಿಕಾರಿದರು.

Vijaya Karnataka Web 19 Oct 2020, 6:23 am
ಬೆಂಗಳೂರು: ರಾಜ್ಯದಲ್ಲಿ ಎದುರಾಗಿರೋ ಉಪಚುನಾವವಣೆಯ ಪ್ರಚಾರ ಕಣದಲ್ಲಿ ಬಿಜೆಪಿ ಕಾಂಗ್ರೆಸ್‌ ನಾಯಕರು ಫುಲ್ ಬ್ಯುಸಿಯಾಗಿದ್ದಾರೆ. ಶಿರಾ ಮತ್ತು ಆರ್‌ಆರ್‌ ನಗರ ಕ್ಷೇತ್ರವನ್ನು ಗೆಲ್ಲಲೇಬೇಕೆಂದು ಮೂರೂ ಪಕ್ಷಗಳು ಕಾಲಿಗೆ ಚಕ್ರ ಕಟ್ಕೊಂಡವರಂತೆ ತಿರುಗಾಡುತ್ತಿವೆ.
Vijaya Karnataka Web CT Ravi


ಜಾತಿ ಗಣತಿ ವರದಿ ಜಾರಿಗೆ ನಮ್ಮ ಸರಕಾರ ಬದ್ಧ: ಕೆ.ಎಸ್‌.ಈಶ್ವರಪ್ಪ ಭರವಸೆ

ಮತದಾರರನ್ನು ಸೆಳೆಯಲು ಎಚ್‌ಡಿಕೆ ಮತ್ತು ಡಿಕೆ ಶಿವಕುಮಾರ್ ಅವರು ರಾಜಕೀಯ ಆರೋಪ ಪ್ರತ್ಯಾರೋಪಗಳು ಮಾಡುತ್ತಿರುವ ಬೆನ್ನಲ್ಲೇ ಇತ್ತೀಚೆಗಷ್ಟೇ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಸಿಟಿ ರವಿ ಅವರು ಕೂಡ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರವಾಹಕ್ಕೆ ಉ.ಕರ್ನಾಟಕ ತತ್ತರ: ಕೇಂದ್ರದ ನೆರವಿಗೆ ಸುರ್ಜೇವಾಲಾ ಒತ್ತಾಯ

ಭಾನುವಾರ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೈಲಿಗೆ ಹೋಗಿ ಬಂದವರೆಲ್ಲ ಬಂಡೆಯಲ್ಲ. ಅಷ್ಟಕ್ಕೂ ಡಿಕೆ ಶಿವಕುಮಾರ್‌ ಸ್ವಾತಂತ್ರ್ಯ ಹೋರಾಟ ನಡೆಸಿ ಜೈಲಿಗೆ ಹೋಗಿ ಬಂದಿದ್ದಾರಾ? ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ. ಜೈಲಿಗೆ ಹೋಗಿ ಬಂದವರು ಬಂಡೆ ಎನ್ನುತ್ತಾರೆ. ಅಂಥವರು ಬಂಡೆಯಲ್ಲ. ಅವರದ್ದು ಭಂಡತನವಷ್ಟೇ ಎಂದು ಕಿಡಿಕಾರಿದರು.

ಕೇವಲ ಬಾಯಿ ಚಪಲಕ್ಕೆ ಕೊರೊನಾ ವಾರಿಯರ್‌ಗಳಿಗೆ ಸರಕಾರದಿಂದ ಭೇಷ್‌: ಕುಮಾರಸ್ವಾಮಿ ಕಿಡಿ

ಇನ್ನು ಜೈಲಿಗೆ ಹೋಗಿ ಬರುವಾಗ ಮೆರವಣಿಗೆ ಮಾಡಿಸಿಕೊಳ್ಳುತ್ತಾರೆ. ಇದು ಭಂಡತನವಲ್ಲದೇ ಮತ್ತಿನ್ನೇನು? ಎಂದು ಪ್ರಶ್ನಿಸಿದ ಸಿಟಿ ರವಿ, ಜಾತಿ ರಾಜಕಾರಣ ಮಾಡಬಾರದು. ನಾನೂ ಒಕ್ಕಲಿಗ. ನಮ್ಮ ಅಶೋಕಣ್ಣ ಒಕ್ಕಲಿಗರಲ್ಲವಾ? ನಾಯಕರನ್ನು ಮುಗಿಸಿ ಬೆಳೆಯುತ್ತೇನೆ ಎನ್ನುವುದು ಸರಿಯಲ್ಲ. ಡಿಕೆಶಿ ಇತರರಿಗೆ ಬೆಳೆಯಲು ಬಿಡುತ್ತಿದ್ದರೆ ಸೋಮಶೇಖರ್‌, ಸುಧಾಕರ್‌, ಯೋಗೇಶ್ವರ್‌ ಯಾಕೆ ಕಾಂಗ್ರೆಸ್‌ ತೊರೆಯುತ್ತಿದ್ದರು? ಎಂದು ಪ್ರಶ್ನಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ