ಆ್ಯಪ್ನಗರ

'ಸೋಲಾರ್‌ ಹಗರಣ'ದ ವೇಣು ವಿರುದ್ಧ ಬಿಜೆಪಿ ವಾಗ್ದಾಳಿ

ಸೋಲಾರ್‌ ಪ್ರಕರಣದಲ್ಲಿ ವೇಣುಗೋಪಾಲ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಯಾವಾಗ ಬೇಕಾದರೂ ಅವರ ಬಂಧನವಾಗಬಹುದು. ಆದಾಗಿಯೂ ರಾಜ್ಯ ಕಾಂಗ್ರೆಸ್‌ ಮುಖಂಡರು ಸೋಲಾರ್‌ ಸುಂದರಿಯನ್ನು ಮುಂದಿಟ್ಟುಕೊಂಡು ರಾಜಕಾರಣ ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

Vijaya Karnataka 24 Oct 2018, 10:44 am
ಬೆಂಗಳೂರು: ರಾಜ್ಯ ಕಾಂಗ್ರೆಸಿಗರು 'ಸೋಲಾರ್‌ ಸುಂದರಿ'ಯನ್ನು ಮುಂದಿಟ್ಟುಕೊಂಡು ರಾಜಕಾರಣ ನಡೆಸುತ್ತಿದ್ದಾರೆ ಎಂದು ಬಿಜೆಪಿ ವಕ್ತಾರ ಗೋ.ಮಧುಸೂದನ್‌ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ಕೆ.ಸಿ.ವೇಣುಗೋಪಾಲ್‌ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ.
Vijaya Karnataka Web go madhusudhan


ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇರಳದ ಸೋಲಾರ್‌ ಹಗರಣ ಸಂಬಂಧ ಸರಿತಾ ನಾಯರ್‌ ಎಂಬುವರು ದಾಖಲಿಸಿರುವ ಅತ್ಯಾಚಾರ ಪ್ರಕರಣವನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಅವರು, ''ಸೋಲಾರ್‌ ಪ್ರಕರಣದಲ್ಲಿ ವೇಣುಗೋಪಾಲ್‌ ವಿರುದ್ಧ ಎಫ್‌ಐಆರ್‌ ದಾಖಲಾಗಿದೆ. ಯಾವಾಗ ಬೇಕಾದರೂ ಅವರ ಬಂಧನವಾಗಬಹುದು. ಆದಾಗಿಯೂ ರಾಜ್ಯ ಕಾಂಗ್ರೆಸ್‌ ಮುಖಂಡರು ಸೋಲಾರ್‌ ಸುಂದರಿಯನ್ನು ಮುಂದಿಟ್ಟುಕೊಂಡು ರಾಜಕಾರಣ ನಡೆಸುತ್ತಿದ್ದಾರೆ,'' ಎಂದು ವ್ಯಂಗ್ಯವಾಡಿದರು.

''ಸಿದ್ದರಾಮಯ್ಯ ಜತೆಯಲ್ಲಿ ಓಡಾಡಿಕೊಂಡಿರುವ ಎಲ್ಲ ಅಲ್ಪಸಂಖ್ಯಾತ ನಾಯಕರೂ ವಕ್ಪ್‌ ಆಸ್ತಿ ಪ್ರಕರಣದ ಆರೋಪಿಗಳೇ ಆಗಿದ್ದಾರೆ. ವಕ್ಫ್ ಆಸ್ತಿ ಕಾಂಗ್ರೆಸಿಗರಿಗೆ ಎಟಿಎಂ ಆಗಿದೆ. ಬಸವಣ್ಣನ ವಚನ ಹೇಳಿ ಉದ್ದುದ್ದ ಭಾಷಣ ಬಿಗಿಯುವ ಸಿ.ಎಂ.ಇಬ್ರಾಹಿಂ ವಕ್ಫ್ ಆಸ್ತಿಯ ಬಾಡಿಗೆ ಹಣದಲ್ಲೇ ಊಟ ಮಾಡುತ್ತಿದ್ದಾರೆ,'' ಎಂದು ಟೀಕಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ