ಆ್ಯಪ್ನಗರ

ನಾನೇನು ಡಿಸಿಎಂ ಆಕಾಂಕ್ಷಿಯಲ್ಲ - ಕೆ.ಎಸ್ ಈಶ್ವರಪ್ಪ

ನಾನೇನು ಡಿಸಿಎಂ ಹುದ್ದೆ ಆಕಾಂಕ್ಷಿಯಲ್ಲ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು ಡಿಸಿಎಂ ಹುದ್ದೆ ಕೊಡಿ ಎಂದು ಕೇಳಲು ಹೋಗುವುದಿಲ್ಲ ಅದಕ್ಕೆ ಇದು ಸಕಾಲವೂ ಅಲ್ಲ ಎಂದರು.

Vijaya Karnataka Web 12 Dec 2019, 2:35 pm
ಬೆಂಗಳೂರು: ನಾನು ಡಿಸಿಎಂ ಆಕಾಂಕ್ಷಿಯಲ್ಲ, ಈಗಿನ ಪರಿಸ್ಥಿತಿಯಲ್ಲಿ ಕೊಡಿ ಎಂದು ಕೇಳೋದಕ್ಕೆ ಹೋಗುವುದಿಲ್ಲ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಸರಕಾರ ಮುಂದುವರಿಯಲು ಪೂರ್ಣ ಸಹಕಾರ ಕೊಡಬೇಕು ಎಂದರು.
Vijaya Karnataka Web bjp minister ks eshwarappa says i am not dcm aspirate
ನಾನೇನು ಡಿಸಿಎಂ ಆಕಾಂಕ್ಷಿಯಲ್ಲ - ಕೆ.ಎಸ್ ಈಶ್ವರಪ್ಪ


ಉಪಚುನಾವಣೆ ಫಲಿತಾಂಶದಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಸಂತೋಷ ಪಟ್ಟಿದ್ದಾರೆ. ಹೀಗಾಗಿ ಸರಕಾರ ಸುಭದ್ರತೆಗೆ ಮೊದಲ ಆದ್ಯತೆ. ಸಂಪುಟ ವಿಸ್ತರಣೆ ಯಾವಾಗ ಬೇಕಾದರೂ ಆದರೂ ಎಲ್ಲರಿಗೂ ಅವಕಾಶ ಸಿಗುತ್ತದೆ ಎಂದರು.

ಸಂಪುಟ ವಿಸ್ತರಣೆ ಯಾವಾಗ ಆಗುತ್ತದೋ ಗೊತ್ತಿಲ್ಲ. ಒಂದು ವೇಳೆ ವಿಳಂಬವಾದರೂ ಎಲ್ಲವೂ ಸರಿಯೋಗುತ್ತದೆ ಎಂದ ಅವರು, ರಾಮನಗರಕ್ಕೆ ಕೊಟ್ಟ ಅನುದಾನ ವಾಪಸ್ ಪಡೆದ ವಿಚಾರವಾಗಿ ಪ್ರತಿಕ್ರಿಯಿಸಿ ಅನುದಾನ ವಿಚಾರದಲ್ಲಿ ಕಾಂಗ್ರೆಸ್,ಜೆಡಿಎಸ್ ಅಂತ ನಾವು ಎಲ್ಲೂ ನೋಡಿಲ್ಲ ಬದಲಾಗಿ ರಾಜ್ಯದ ಅಭಿವೃದ್ಧಿಯಷ್ಟೇ ನಮಗೆ ಮುಖ್ಯ. ಪಕ್ಷಾತೀತವಾಗಿ ಎಲ್ಲ ಶಾಸಕರಿಗೂ ನಾವು ನೆರವು ಕೊಟ್ಟಿದ್ದೇವೆ ಎಂದಿದ್ದಾರೆ.

ಉಪಚುನಾವಣೆ ಸೋಲಿಗೆ ಸಿದ್ದು, ದಿನೇಶ್ ಕಾರಣರಲ್ಲ -ಆರ್.ವಿ ದೇಶಪಾಂಡೆ

ಭತ್ತ, ರಾಗಿ, ಜೋಳ ಖರೀದಿಗೆ ನಿರ್ಧಾರ - ಬೊಮ್ಮಾಯಿ

ಡಿಕೆ ಶಿವಕುಮಾರ್‌ಗೆ ಕೆಪಿಸಿಸಿ ಸಾರಥ್ಯ ಒಲಿವುದು ಅಷ್ಟು ಸುಲಭವಲ್ಲ!

ರಾಜ್ಯಕ್ಕೆ ಅಗತ್ಯವಾದ ಭಕ್ತ, ರಾಗಿ ಹಾಗೂ ಜೋಳ ಖರೀದಿಗೆ ವಿಧಾನಸೌಧದಲ್ಲಿ ನಡೆದ ಸಂಪುಟ ಉಪಸಮಿತಿ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಈ ಕುರಿತಾಗಿ ಮಾಹಿತಿ ನೀಡಿದ ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ರಾಜ್ಯ ಸರಕಾರಕ್ಕೆ 1.80 ಲಕ್ಷ ಮೆಟ್ರಿಕ್ ಟನ್ ಭತ್ತ, 2.15. ಲಕ್ಷ ಮೆಟ್ರಿಕ್ ಟನ್ ರಾಗಿ ಖರೀದಿ ಗುರಿ ಇದೆ. ಕೇಂದ್ರ ಸರ್ಕಾರದ ಮಾನದಂಡಗಳಡಿಯಲ್ಲಿ ಖರೀದಿ ಮಾಡಲಾಗುವುದು. ಜನವರಿಯಿಂದ ಖರೀದಿ ಆರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ