ಆ್ಯಪ್ನಗರ

Basanagouda Patil Yatnal: ಕಲಾಪದಿಂದ ದೂರವಾಗಿ ‘ಉರಿ’ ಹೆಚ್ಚಿಸಿದ್ದ ಬಸನಗೌಡ ಪಾಟೀಲ ಯತ್ನಾಳ್‌

ಬಜೆಟ್‌ ಅಧಿವೇಶನದಲ್ಲಿ ಪಾಲ್ಗೊಳ್ಳದೆ ಬಿಜೆಪಿ ಪಾಳಯದಲ್ಲಿ ಆತಂಕ ಸೃಷ್ಟಿಸಿದ್ದ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಬೆಂಬಲಿಗರ ಜತೆ 'ಉರಿ' ಚಿತ್ರ ನೋಡುತ್ತಿದ್ದರಂತೆ. ಈ ವಿಚಾರ ತಿಳಿದ ಬಿಜೆಪಿಗರು ಕೂಲ್‌ ಆಗಿದ್ದಾರಂತೆ.

Vijaya Karnataka Web 7 Feb 2019, 9:55 am
ವಿಜಯಪುರ: ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಬಜೆಟ್‌ ಅಧಿವೇಶನದಲ್ಲಿ ಪಾಲ್ಗೊಳ್ಳದೆ ಇರುವುದು ಬಿಜೆಪಿಯವರಲ್ಲಿ ಕೆಲಹೊತ್ತು ಆತಂಕವನ್ನುಂಟು ಮಾಡಿತ್ತು.
Vijaya Karnataka Web Basanagowda Yatnal


ಆದರೆ 'ಯತ್ನಾಳ್‌ ಬೆಂಬಲಿಗರೊಂದಿಗೆ ಸರ್ಜಿಕಲ್‌ ಸ್ಟ್ರೈಕ್‌ ಕುರಿತ ಬಾಲಿವುಡ್‌ನ 'ಉರಿ' ಚಿತ್ರ ವೀಕ್ಷಿಸುತ್ತಿದ್ದಾರೆ. ರಾತ್ರಿ ವೇಳೆಗೆ ಬೆಂಗಳೂರಿಗೆ ಹೊರಟು ಬರಲಿದ್ದಾರೆ' ಎಂಬುದನ್ನು ತಿಳಿದು ಬಿಜೆಪಿ ಮುಖಂಡರು ಒಂದು ಕ್ಷಣ ನಿಟ್ಟುಸಿರು ಬಿಟ್ಟರು.

ಎಲ್ಲಿ ಯತ್ನಾಳರೂ ರಿವರ್ಸ್‌ ಆಪರೇಷನ್‌ಗೆ ಬಲಿಯಾದರೋ ಎಂಬ ಮಾತುಗಳು ವಿಧಾನಸೌಧದಲ್ಲಿ ಕೆಲಹೊತ್ತು ಬಿಜೆಪಿಯವರಿಂದಲೇ ಕೇಳಿಬಂದವು. ಅಷ್ಟೇ ಅಲ್ಲ ಯಾವ ಯಾವ ಶಾಸಕರು ಬಂದಿಲ್ಲ ಎಂದು ಅಧಿವೇಶನದಲ್ಲಿ ಚೀಟಿ ಮೂಲಕ ಯಡಿಯೂರಪ್ಪ ಅವರಿಗೆ ಬರೆದು ಕೊಡಲಾಯಿತು. ಕೊನೆಗೆ ಫೋನ್‌ ಮೂಲಕ ಅವರ ಸಂಪರ್ಕ ನಡೆಸುವ ಕೆಲಸವೂ ನಡೆಯಿತು. ಅವರೆಲ್ಲಿಗೂ ಹೋಗಲ್ಲ, ನಮ್ಮ ಜತೆಗೆ ಇರುತ್ತಾರೆ ಎಂಬುದು ಗೊತ್ತಾದ ತಕ್ಷಣವೇ ಪಕ್ಷದ ಮುಖಂಡರು ನಿರುಮ್ಮಳಾದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ