ಆ್ಯಪ್ನಗರ

ನೀವು ಮಾಡಿದರೆ ಗರತೀತನ, ಬೇರೆಯವರು ಮಾಡಿದರೆ ಮಾತ್ರ ಹಾದರವೇ: ಸಿದ್ದರಾಮಯ್ಯ ಪ್ರಶ್ನಿಸಿದ ಯತ್ನಾಳ್

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಾ ಪಕ್ಷಾಂತರ ಮಾಡಿಯೇ ಕಾಂಗ್ರೆಸ್ ಪಕ್ಷವನ್ನು ಸೇರಿದ್ದನ್ನು ಮರೆಯಬಾರದು ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ತಿರುಗೇಟು ನೀಡಿದ್ದಾರೆ.

Vijaya Karnataka Web 19 Jul 2019, 4:16 pm
ಬೆಂಗಳೂರು: 'ನೀವು ಮಾಡಿದೆ ಗರತೀತನ, ಬೇರೆಯವರು ಮಾಡಿದರೆ ಮಾತ್ರ ಹಾದರವೇ' ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಖಾರವಾಗಿ ಪ್ರಶ್ನಿಸಿದ್ದಾರೆ.
Vijaya Karnataka Web basanagouda-patil-yatnal


ಈ ಕುರಿತು ಫೇಸ್‌ಬುಕ್ ಪೋಸ್ಟ್ ಹಾಕಿಕೊಂಡಿರುವ ಯತ್ನಾಳ್, 'ಮಾನ್ಯ ಬಾದಾಮಿ ಶಾಸಕ @siddaramaiahನವರು ಕೂಡ ಪಕ್ಷಾಂತರ ಮಾಡಿಯೇ @INCKarnataka ಸೇರಿದ್ದೆಂದು ಮರೆಯಬಾರದು. ಹಾಗೇ ನೀವು ಮುಖ್ಯಮಂತ್ರಿ ಆಗಿದ್ದಾಗ 7ಜನ ಜೆಡಿಎಸ್ ಶಾಸಕರನ್ನು ರಾಜೀನಾಮೆ ಕೊಡಿಸಿದ ಸಿದ್ದ ಪುರುಷ ನೀವೇ. ನೀವು ಮಾಡಿದರೆ ಗರತೀತನ ಬೇರೆ ಅವರು ಮಾಡಿದರೆ ಮಾತ್ರ ಹಾದರವೇ?' ಎಂದಿದ್ದಾರೆ.

ಪಕ್ಷಾಂತರದ ಪಿಡುಗು ಪ್ರಜಾಪ್ರಭುತ್ವ ವ್ಯಸ್ಥೆಯ ಅಡಿಗಲ್ಲನ್ನೇ ಅಲ್ಲಾಡಿಸುತ್ತದೆ: ಸಿದ್ದರಾಮಯ್ಯ

ನಿನ್ನೆ (ಗುರುವಾರ) ಸದನದಲ್ಲಿ ಕ್ರಿಯಾಲೋಪ ಎತ್ತಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಪಕ್ಷಾಂತರದ ಪಿಡುಗು ಪ್ರಜಾಪ್ರಭುತ್ವ ವ್ಯಸ್ಥೆಯ ಅಡಿಗಲ್ಲನ್ನೇ ಅಲ್ಲಾಡಿಸುತ್ತದೆ ಎಂದು ಹೇಳಿದರು.

1967ರಲ್ಲಿ ಗಯಾ ಲಾಲ್ ಮೂರು ಭಾರಿ ಪಕ್ಷಾಂತರ ಮಾಡುತ್ತಾರೆ. ಒಂದೇ ದಿನದಲ್ಲಿ 3 ಭಾರಿ ಪಕ್ಷಾತಂರ ಮಾಡುತ್ತಾರೆ. ಆಗ ಪಕ್ಷಾಂತರದ ಬಗ್ಗೆ ಗಂಭೀರ ಚರ್ಚೆ ನಡೆಯುತ್ತದೆ. ಇದನ್ನು ತಪ್ಪಿಸಲು ಪಕ್ಷಾಂತರ ನಿಷೇಧ ಕಾಯ್ದೆ ಜಾರಿಯಾಯಿತು. ಪಕ್ಷಾಂತರ ಪಿಡುಗು ಪ್ರಜಾಪ್ರಭುತ್ವದ ಅಡ್ಡಿಗಲು ಅಲ್ಲಾಡಿಸುತ್ತೆ. ಪ್ರಜಾಪ್ರಭುತ್ವ ಶುದ್ದೀಕರಣಕ್ಕೆ ಪಕ್ಷಾಂತರ ಪಿಡುಗಿಗೆ ಕಡಿವಾಣ ಹಾಕಲೇಬೇಕಿದೆ ಎಂದು ಸಿದ್ದರಾಮಯ್ಯ ಹೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ