ಗೂಂಡಾಗಿರಿ ಖಂಡಿಸಿ ರಾಜ್ಯಪಾಲರಿಗೆ ದೂರು
ಜೆಡಿಎಸ್ ಗೂಂಡಾಗಳು ಬಿಜೆಪಿ ಶಾಸಕ ಪ್ರೀತಂಗೌಡರ ಮನೆ ಮೇಲೆ ಕಲ್ಲುತೂರಿ ದಾಂದಲೆ ನಡೆಸಿ, ಪ್ರಾಣ ಬೆದರಿಕೆಯೊಡ್ಡಿರುವುದನ್ನು ಖಂಡಿಸಿ ಬಿಜೆಪಿಯ 104 ಶಾಸಕರು ಗುರುವಾರ ರಾಜ್ಯಪಾಲರಿಗೆ ಮನವಿ ಸಲ್ಲಿಸುವ ಜತೆಗೆ ರಾಜ್ಯದಾದ್ಯಂತ ಪಕ್ಷ ಪ್ರತಿಭಟನೆ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
Vijaya Karnataka 14 Feb 2019, 5:00 am
ಹಾಸನ :ಜೆಡಿಎಸ್ ಗೂಂಡಾಗಳು ಬಿಜೆಪಿ ಶಾಸಕ ಪ್ರೀತಂಗೌಡರ ಮನೆ ಮೇಲೆ ಕಲ್ಲುತೂರಿ ದಾಂದಲೆ ನಡೆಸಿ, ಪ್ರಾಣ ಬೆದರಿಕೆಯೊಡ್ಡಿರುವುದನ್ನು ಖಂಡಿಸಿ ಬಿಜೆಪಿಯ 104 ಶಾಸಕರು ಗುರುವಾರ ರಾಜ್ಯಪಾಲರಿಗೆ ಮನವಿ ಸಲ್ಲಿಸುವ ಜತೆಗೆ ರಾಜ್ಯದಾದ್ಯಂತ ಪಕ್ಷ ಪ್ರತಿಭಟನೆ ನಡೆಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಪ್ರೀತಂ ಗೌಡರ ನಿವಾಸಕ್ಕೆ ಬುಧವಾರ ರಾತ್ರಿ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿದ ಬಳಿಕ ಅವರು ಮಾತನಾಡಿದರು. ''ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ತೋಳ್ಬಲದ ಸರಕಾರ ಶಾಶ್ವತವಲ್ಲ. ಈ ಗೂಂಡಾ ಪ್ರವೃತ್ತಿಯನ್ನು ಬಿಜೆಪಿ ಸಹಿಸುವುದಿಲ್ಲ. ಕಾರ್ಯಕರ್ತರು ನಾಲ್ಕೈದು ದಿನ ಶಾಂತವಾಗಿರಿ. ಈ ಸರಕಾರಕ್ಕೆ ಬುದ್ಧಿ ಕಲಿಸುವುದು ತಿಳಿದಿದೆ. ನಿಮ್ಮನ್ನು ರಕ್ಷಿಸಿಕೊಳ್ಳುವ ಜವಾಬ್ದಾರಿ 104 ಶಾಸಕರದ್ದಾಗಿದೆ'' ಎಂದು ಭರವಸೆ ನೀಡಿದರು.
ಬಳಿಕ ಆಸ್ಪತ್ರೆಗೆ ಭೇಟಿ ನೀಡಿ ರಾಹುಲ್ಕಿಣಿ ಅವರ ಆರೋಗ್ಯ ವಿಚಾರಿಸಿದರು. ಶಾಸಕರಾದ ಆರ್.ಅಶೋಕ್, ರೇಣುಕಾಚಾರ್ಯ, ಬೋಪಯ್ಯ ಮತ್ತಿತರರಿದ್ದರು.
ಪ್ರೀತಂ ಗೌಡರ ನಿವಾಸಕ್ಕೆ ಬುಧವಾರ ರಾತ್ರಿ ಭೇಟಿ ನೀಡಿ ಕುಟುಂಬಕ್ಕೆ ಧೈರ್ಯ ತುಂಬಿದ ಬಳಿಕ ಅವರು ಮಾತನಾಡಿದರು. ''ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ತೋಳ್ಬಲದ ಸರಕಾರ ಶಾಶ್ವತವಲ್ಲ. ಈ ಗೂಂಡಾ ಪ್ರವೃತ್ತಿಯನ್ನು ಬಿಜೆಪಿ ಸಹಿಸುವುದಿಲ್ಲ. ಕಾರ್ಯಕರ್ತರು ನಾಲ್ಕೈದು ದಿನ ಶಾಂತವಾಗಿರಿ. ಈ ಸರಕಾರಕ್ಕೆ ಬುದ್ಧಿ ಕಲಿಸುವುದು ತಿಳಿದಿದೆ. ನಿಮ್ಮನ್ನು ರಕ್ಷಿಸಿಕೊಳ್ಳುವ ಜವಾಬ್ದಾರಿ 104 ಶಾಸಕರದ್ದಾಗಿದೆ'' ಎಂದು ಭರವಸೆ ನೀಡಿದರು.
ಬಳಿಕ ಆಸ್ಪತ್ರೆಗೆ ಭೇಟಿ ನೀಡಿ ರಾಹುಲ್ಕಿಣಿ ಅವರ ಆರೋಗ್ಯ ವಿಚಾರಿಸಿದರು. ಶಾಸಕರಾದ ಆರ್.ಅಶೋಕ್, ರೇಣುಕಾಚಾರ್ಯ, ಬೋಪಯ್ಯ ಮತ್ತಿತರರಿದ್ದರು.