ಆ್ಯಪ್ನಗರ

ಕಾರ್ಯಕರ್ತರ "ನಿಸ್ವಾರ್ಥ" ತ್ಯಾಗದ ಮುಂದೆ ಬೇರೆ ಯಾವ ತ್ಯಾಗವೂ ದೊಡ್ಡದಲ್ಲ! ಸಿ.ಟಿ ರವಿ ಟಾಂಗ್ ಯಾರಿಗೆ?

ಕಾರ್ಯಕರ್ತರ "ನಿಸ್ವಾರ್ಥ" ತ್ಯಾಗದ ಮುಂದೆ ಬೇರೆ ಯಾವ ತ್ಯಾಗವೂ ದೊಡ್ಡದಲ್ಲ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ. ರಾಜ್ಯ ಬಿಜೆಪಿಯಲ್ಲಿ ತಲೆಧೋರಿರುವ ಸದ್ಯದ ಪರಿಸ್ಥಿತಿಯಲ್ಲಿ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

Vijaya Karnataka Web 15 Jan 2021, 10:52 am
ಬೆಂಗಳೂರು: ಕಾರ್ಯಕರ್ತರ "ನಿಸ್ವಾರ್ಥ" ತ್ಯಾಗದ ಮುಂದೆ ಬೇರೆ ಯಾವ ತ್ಯಾಗವೂ ದೊಡ್ಡದಲ್ಲ! ಹೀಗಂತ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳುವ ಮೂಲಕ ‘ತ್ಯಾಗದ’ದ ಮಾತನ್ನಾಡುವವರಿಗೆ ಟಾಂಗ್‌ ಕೊಟ್ಟಿದ್ದಾರಾ ಎಂಬ ಕುತೂಹಲ ಕೆರಳಿದೆ.
Vijaya Karnataka Web CT Ravi


ಟ್ವಿಟ್ಟರ್‌ನಲ್ಲಿ ಟ್ವೀಟ್‌ ಮಾಡಿರುವ ಸಿ.ಟಿ ರವಿ, ತನ್ನ ಬೂತನ್ನು ಗೆಲ್ಲಿಸುವುದು ಹೇಗೆ ಎಂಬುದನ್ನು ಯೋಚಿಸುತ್ತಾ, ಕಾರ್ಯತತ್ಪರನಾಗಿರುತ್ತಾನೆ. ಕಾರ್ಯಕರ್ತರ "ನಿಸ್ವಾರ್ಥ" ತ್ಯಾಗದ ಮುಂದೆ ಬೇರೆ ಯಾವ ತ್ಯಾಗವೂ ದೊಡ್ಡದಲ್ಲ. ಇವತ್ತು ನಾವೇನೇ ಆಗಿದ್ದರೂ ಅದು ನಮ್ಮ ತಳಮಟ್ಟದ ಕಾರ್ಯಕರ್ತ ಕೊಟ್ಟ ಭಿಕ್ಷೆಯೇ ಹೊರತು ಬೇರೆ ಏನೂ ಅಲ್ಲ ಎಂದಿದ್ದಾರೆ.

ಅಮಿತ್ ಶಾ ಮುಂದೆ 'ಆರೋಪ ಪಟ್ಟಿ' ಮಂಡಿಸಲು ಕಮಲ ಅತೃಪ್ತರ ಸಿದ್ಧತೆ! ಬಿಎಸ್‌ವೈ ಪ್ರತಿತಂತ್ರ ಏನು?

ಅಲ್ಲದೆ, ಅಧಿಕಾರದಲ್ಲಿರುವವರನ್ನು ನೋಡಿಯೂ ಇರದ, ನೋಡುವ ಇಚ್ಚೆಯೂ ಇರದ ಕೋಟ್ಯಾಂತರ ಕಾರ್ಯಕರ್ತರ ತ್ಯಾಗದ ಫಲಸ್ವರೂಪ ನಾವಿಂದು ಇಲ್ಲಿ ನಿಂತಿದ್ದೇವೆ. ಆ ಕಾರ್ಯಕರ್ತ ಅಧಿಕಾರದಲ್ಲಿರುವವರ ಮನೆ, ಕಚೇರಿ, ವಾಹನದ ಹಿಂದೆ ಮುಂದೆ ಎಲ್ಲೂ ಕಾಣಸಿಗುವುದಿಲ್ಲ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ ತಮ್ಮ ತ್ಯಾಗದಿಂದ ಬಿಜೆಪಿ ಅಧಿಕಾರಕ್ಕೆ ಬಂತು ಎಂದು ವಲಸಿಗ ಶಾಸಕರು ಪದೇ ಪದೇ ಹೇಳಿಕೆ ನೀಡುತ್ತಿದ್ದಾರೆ. ಮತ್ತೊಂದು ಕಡೆಯಲ್ಲಿ ಸಚಿವ ಸ್ಥಾನ ಕೈತಪ್ಪಿದ ಅತೃಪ್ತರು ಬಹಿರಂಗವಾಗಿ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ತ್ಯಾಗಕ್ಕೆ ಸೂಕ್ತ ಸ್ಥಾನಮಾನ ಸಿಕ್ಕಿಲ್ಲ ಎಂಬ ಆರೋಪಳು ಬಿಜೆಪಿ ಪಾಳಯದಲ್ಲಿ ಅಶಾಂತಿ ಸೃಷ್ಟಿಸಿದೆ.


ಇಂತಹ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ನೀಡಿರುವ ಹೇಳಿಕೆ ಸಾಕಷ್ಟು ಕುತೂಹಲ ಕೆರಳಿಸಿದೆ. ಕಾರ್ಯಕರ್ತರ ತ್ಯಾಗವನ್ನು ಮುಂದಿಟ್ಟುಕೊಂಡು ಸಿ.ಟಿ ರವಿ ಯಾರನ್ನು ಅತೃತ್ತರನ್ನು ಹಾಗೂ ವಲಸಿಗರನ್ನು ಪರೋಕ್ಷವಾಗಿತರಾಟೆಗೆ ತೆಗೆದುಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ