ಆ್ಯಪ್ನಗರ

ಜೆಡಿಎಸ್‌ ಶಾಸಕರಿಗೆ 60 ಕೋಟಿ ರೂ., ಸಚಿವ ಸ್ಥಾನ ಆಫರ್‌ ಕೊಟ್ಟಿದ್ದಾರೆ ಶೆಟ್ಟರ್: ಶಾಸಕ ಶಿವಲಿಂಗೇಗೌಡ

ಬಿಜೆಪಿಯವರು ನಾಚಿಕೆ ಇಲ್ಲದೇ ಈ ರೀತಿಯ ದಂಧೆಗೆ ಇಳಿಯುತ್ತಿದ್ದಾರೆ. ಆದರೆ ಜೆಡಿಎಸ್‌ನ ಯಾವೊಬ್ಬ ಶಾಸಕ ಕೂಡ ಪಕ್ಷ ಬಿಟ್ಟು ಹೋಗುವುದಿಲ್ಲ. ಈ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ ಎಂದಿದ್ದಾರೆ ಜೆಡಿಎಸ್‌ ಶಾಸಕರು

Vijaya Karnataka Web 16 Jan 2019, 5:44 pm
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಕುದುರೆ ವ್ಯಾಪಾರ ಜೋರಾಗಿ ನಡೆಯುತ್ತಿದೆ. ಇದಕ್ಕಾಗಿ ಬಿಜೆಪಿಯವರು ದುಡ್ಡಿನ ಸುರಿಮಳೆಗರೆಯುತ್ತಿದ್ದಾರೆ ಎಂದು ಅರಸಿಕರೆ ಶಾಸಕ ಕೆ.ಎಸ್‌. ಶಿವಲಿಂಗೇಗೌಡ ಆರೋಪಿಸಿದ್ದಾರೆ.
Vijaya Karnataka Web ಶಿವಲಿಂಗೇಗೌಡ
ಶಿವಲಿಂಗೇಗೌಡ


ಸುದ್ದಿಗಾರರೊಂದಿಗೆ ಮಾತನಾಡಿದ ಶಿವಲಿಂಗೇಗೌಡ, ಜೆಡಿಎಸ್‌ ಶಾಸಕರಿಗೆ ಬಿಜೆಪಿಯವರು 60 ಕೋಟಿ ರೂ., ಸಚಿವ ಸ್ಥಾನದ ಆಮಿಷ ಒಡ್ಡುತ್ತಿದ್ದಾರೆ ಎಂದು ಆರೋಪಿಸಿದರು.

ತುಮಕೂರು ಗ್ರಾಮಾಂತರ ಶಾಸಕರೇ ಖುದ್ದಾಗಿ ನನ್ನ ಬಳಿ ಈ ಕುರಿತು ಹೇಳಿಕೊಂಡಿದ್ದಾರೆ. ಬಿಜೆಪಿಯ ಮಾಜಿ ಮುಖ್ಯಮಂತ್ರಿ ಜಗದೀಶ್‌ ಶೆಟ್ಟರ್‌ ಅವರೇ ಕರೆ ಮಾಡಿ ಇಷ್ಟೊಂದು ಆಫರ್‌ ಮಾಡಿದರು ಎಂದು ಮಾಹಿತಿ ನೀಡಿದ್ದರು ಎಂದರು.

ಆದರೆ 60 ಕೋಟಿ ರೂ. ಅಲ್ಲ, 500 ಕೋಟಿ ರೂ. ಕೊಟ್ಟರು ಜೆಡಿಎಸ್‌ ಬಿಟ್ಟು ಬರೋಲ್ಲ ಎಂದು ಖಡಾಖಂಡಿತವಾಗಿ ನಿರಾಕರಿಸಿಬಿಟ್ಟೇ ಎಂದೂ ತುಮಕೂರು ಗ್ರಾಮಾಂತರ ಶಾಸಕರು ತಿಳಿಸಿದ್ದಾರೆ ಎಂದು ಶಿವಲಿಂಗೇಗೌಡ ಹೇಳಿದರು.

ಬಿಜೆಪಿಯವರು ನಾಚಿಕೆ ಇಲ್ಲದೇ ಈ ರೀತಿಯ ದಂಧೆಗೆ ಇಳಿಯುತ್ತಿದ್ದಾರೆ. ಆದರೆ ಜೆಡಿಎಸ್‌ನ ಯಾವೊಬ್ಬ ಶಾಸಕ ಕೂಡ ಪಕ್ಷ ಬಿಟ್ಟು ಹೋಗುವುದಿಲ್ಲ. ಈ ವಿಷಯದಲ್ಲಿ ಯಾವುದೇ ಗೊಂದಲವಿಲ್ಲ ಎಂದರು.

ಸಮ್ಮಿಶ್ರ ಸರಕಾರಕ್ಕೆ ಯಾವುದೇ ರೀತಿಯ ಅಭದ್ರತೆ ಇಲ್ಲ. ಸರಕಾರ ಕುಸಿಯುವುದು ಇಲ್ಲ. ಆಪರೇಷನ್‌ ಕಮಲ ಎಲ್ಲವೂ ಠುಸ್‌ ಆಗಿದೆ ಎಂದು ಶಿವಲಿಂಗೇಗೌಡ ವಿಶ್ವಾಸದಿಂದ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ