ಆ್ಯಪ್ನಗರ

ಡಿಸಿಎಂ ಪಟ್ಟ ಕೈ ತಪ್ಪಿದ್ದಕ್ಕೆ ಮುನಿಸು? ಸಿಎಂ ನೇತೃತ್ವದ ಸಭೆಗೆ ಶ್ರೀರಾಮುಲು ಗೈರು

ಡಿಸಿಎಂ ಪಟ್ಟ ಕೈ ತಪ್ಪಿದ ಕಾರಣಕ್ಕಾಗಿ ಸಚಿವ ಬಿ. ಶ್ರೀರಾಮುಲು ಮುನಿಸಿಕೊಂಡಿದ್ದು ಸಿಎಂ ನೇತೃತ್ವದ ಸಭೆಗೂ ಗೈರು ಹಾಜರಾಗಿದ್ದಾರೆ. ಉಪಚುನಾವಣೆ ಬಳಿಕ ಪ್ರಮುಖ ಸ್ಥಾನದ ನಿರೀಕ್ಷೆ ಹೊಂದಿದ್ದ ಅವರಿಗೆ ನಿರಾಶೆಯಾಗಿದೆ ಎನ್ನಲಾಗಿದೆ.

Vijaya Karnataka 13 Dec 2019, 10:59 pm
ಬೆಂಗಳೂರು : ಬಿಜೆಪಿ ಸರಕಾರದಲ್ಲಿ ಮಹತ್ವದ ಜವಾಬ್ದಾರಿಯ ನಿರೀಕ್ಷೆಯಲ್ಲಿದ್ದ ಸಚಿವ ಬಿ.ಶ್ರೀರಾಮುಲು ಉಪ ಚುನಾವಣೆ ನಂತರದ ಬೆಳವಣಿಗೆಯನ್ನು ಊಹಿಸಿಕೊಂಡು ಅಸಮಾಧಾನಗೊಂಡಿದ್ದಾರೆ.
Vijaya Karnataka Web bjp sriramulu not attended cm bs yeddyurappa meeting
ಡಿಸಿಎಂ ಪಟ್ಟ ಕೈ ತಪ್ಪಿದ್ದಕ್ಕೆ ಮುನಿಸು? ಸಿಎಂ ನೇತೃತ್ವದ ಸಭೆಗೆ ಶ್ರೀರಾಮುಲು ಗೈರು


ಕಳೆದ ವಿಧಾನಸಭೆ ಚುನಾವಣೆಯಲ್ಲಿಯಡಿಯೂರಪ್ಪ ನಂತರದ ಸ್ಟಾರ್‌ ಕ್ಯಾಂಪೇನರ್‌ ಎಂದು ರಾಮುಲು ಬಿಂಬಿತಗೊಂಡಿದ್ದರು. ಬಿಜೆಪಿ ವರಿಷ್ಠರೂ ಶ್ರೀರಾಮುಲು ಅವರಿಗೆ ಬೆನ್ನು ತಟ್ಟಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದರೆ ರಾಮುಲು ಡಿಸಿಎಂ ಆಗುವುದು ಖಚಿತವೆಂಬ ಮಾತುಗಳು ಕೇಳಿ ಬಂದಿದ್ದವು.

ದೋಸ್ತಿ ಸರಕಾರ ಪತನಗೊಂಡು ಮತ್ತೆ ಬಿಜೆಪಿ ಸರಕಾರ ರಚನೆಯಾಗುವಾಗ ರಾಮುಲು ಮಹತ್ವ ಕಡಿಮೆಯಾಗಿತ್ತು. ಯಾರೂ ನಿರೀಕ್ಷಿಸದ ರೀತಿಯಲ್ಲಿಡಾ.ಸಿ.ಎನ್‌.ಅಶ್ವತ್ಥನಾರಾಯಣ, ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ ಅವರಿಗೂ ಡಿಸಿಎಂ ಪಟ್ಟ ಕಟ್ಟಲಾಯಿತು.

ಸಚಿವ ಸ್ಥಾನಕ್ಕಾಗಿ ಆತುರ ಪಡಲ್ಲಎಂದ್ರು ಶಾಸಕ ನಾರಾಯಣ ಗೌಡ

ವಾಲ್ಮೀಕಿ ಸಮುದಾಯದ ಪ್ರಬಲ ನಾಯಕ ರಾಮುಲು ಅವರಿಗೆ ಪ್ರಭಾವಿ ಖಾತೆಯೂ ದೊರಕಲಿಲ್ಲ. ಆಗಲೇ ಬೇಸರ ಮಾಡಿಕೊಂಡಿದ್ದ ಅವರು, ಉಪ ಚುನಾವಣೆ ಫಲಿತಾಂಶದ ಬಳಿಕ ಮತ್ತಷ್ಟು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

ಸಿಎಂ ಸಭೆಗೂ ಗೈರು

ಈ ಬಾರಿ ಸಂಪುಟ ವಿಸ್ತರಣೆ ಬಳಿಕ ವಾಲ್ಮೀಕಿ ಸಮುದಾಯದವರೇ ಆದ ರಮೇಶ್‌ ಜಾರಕಿಹೊಳಿ ಡಿಸಿಎಂ ಆಗುವ ಸಾಧ್ಯತೆ ದಟ್ಟವಾಗಿದೆ. ಇದರೊಂದಿಗೆ ಸಮಾಜದ ಕೋಟಾ ಭರ್ತಿಯಾದಂತಾಗಲಿದೆ. ತಾವು ಆರೋಗ್ಯ ಖಾತೆಗೆ ಸೀಮಿತ ಇರಬೇಕಾಗುತ್ತದೆ.

ಬಿಎಸ್‌ವೈ ಹಾಗೂ ಡಿಕೆಶಿಗೆ ಸಂಕಷ್ಟ ! ಡಿನೋಟಿಫಿಕೇಷನ್‌ ಕೇಸ್ ವಿಚಾರಣೆಗೆ ಸುಪ್ರೀಂ ಅಸ್ತು

ವಾಲ್ಮೀಕಿ ಸಮಾಜದ ಮತಗಳು ಬಿಜೆಪಿಯತ್ತ ವಾಲಲು ತಮ್ಮ ಶ್ರಮ ಪ್ರಧಾನವಾಗಿದ್ದರೂ ಕಡೆಗಣಿಸಲಾಗುತ್ತಿದೆ ಎಂಬ ಅತೃಪ್ತಿ ರಾಮುಲು ಅವರದ್ದಾಗಿದೆ. ಇದೇ ಕಾರಣದಿಂದ ಬುಧವಾರ ನಡೆದ ಸಂಪುಟ ಸಭೆ, ಗುರುವಾರ ನಡೆದ ನಾನಾ ಇಲಾಖೆ ಮುಖ್ಯಸ್ಥರ ಸಭೆಯಿಂದ ದೂರವುಳಿದರು ಎಂದು ಹೇಳಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ