ಆ್ಯಪ್ನಗರ

ಫಲಿತಾಂಶ 'ಆಯಾ ರಾಂ, ಗಯಾ ರಾಂ': ಖರ್ಗೆ

ಈಶಾನ್ಯ ರಾಜ್ಯಗಳ ಚುನಾವಣೆ ಫಲಿತಾಂಶದ ಬಗ್ಗೆ ದಾವಣಗೆರೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಸಂಸದ ಮಲ್ಲಿಕಾರ್ಜುನ್ ಖರ್ಗೆ ಫಲಿತಾಂಶವು 'ಆಯಾ ರಾಂ, ಗಯಾ ರಾಂ' ರೀತಿ ಇದೆ ಎಂದಿದ್ದಾರೆ.

Vijaya Karnataka Web 3 Mar 2018, 7:41 pm
ದಾವಣೆಗೆರೆ: ಈಶಾನ್ಯ ರಾಜ್ಯಗಳ ಚುನಾವಣೆ ಫಲಿತಾಂಶದ ಬಗ್ಗೆ ದಾವಣಗೆರೆಯಲ್ಲಿ ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಹಾಗೂ ಸಂಸದ ಮಲ್ಲಿಕಾರ್ಜುನ್ ಖರ್ಗೆ ಫಲಿತಾಂಶವು 'ಆಯಾ ರಾಂ, ಗಯಾ ರಾಂ' ರೀತಿ ಇದೆ ಎಂದಿದ್ದಾರೆ.
Vijaya Karnataka Web bjp targetting congress not siddaramaiah mallikarjun kharge
ಫಲಿತಾಂಶ 'ಆಯಾ ರಾಂ, ಗಯಾ ರಾಂ': ಖರ್ಗೆ


ತ್ರಿಪುರಾದಲ್ಲಿ ಕಮ್ಯುನಿಷ್ಟ್ ಇತ್ತು. ಅದು ಈಗ ಬಿಜೆಪಿ ಪಾಲಾಗಿದೆ. ಮೇಘಾಲಯದಲ್ಲಿ ಹೆಚ್ಚಿನ ಸ್ಥಾನ ನಮಗೆ ಬಂದಿವೆ. ಇಲ್ಲಿ ದೊಡ್ಡ ಪಕ್ಷ ನಮ್ಮದು ಎಂದರು.

ಮೈತ್ರಿಗೆ ನಮಗೆ ಮೊದಲ ಆದ್ಯತೆ ನೀಡಬೇಕು. ಈಶಾನ್ಯ ರಾಜ್ಯಗಳ ಚುನಾವಣೆ ಫಲಿತಾಂಶ 'ಆಯಾ ರಾಂ, ಗಯಾ ರಾಂ' ರೀತಿ ಇದೆ. ಇದರಿಂದ ಕರ್ನಾಟಕ ಚುನಾವಣೆ ಮೇಲೆ ಯಾವುದೇ ಪರಿಣಾಮವಿಲ್ಲ ಎಂದು ಸೇರಿಸಿದರು.

ರಾಜ್ಯದಲ್ಲಿ ಬಿಜೆಪಿ ಟಾರ್ಗೆಟ್ ಮಾಡುತ್ತಿರುವುದು ಕಾಂಗ್ರೆಸ್ ಪಕ್ಷವನ್ನ, ಸಿದ್ದರಾಮಯ್ಯನನ್ನ ಅಲ್ಲ. ಇಂತ ಟಾರ್ಗೆಟ್ ಗಳನ್ನ ಸಹಿಸಿಕೊಳ್ಲುವ ಶಕ್ತಿ ನಮ್ಮಲ್ಲಿದೆ ಎಂದು ಹೇಳಿದರು.

ಬಿಜೆಪಿಯವರು ಎಷ್ಟು ಓಡಾಡುತ್ತಾರೆ ಓಡಾಡಲಿ. ರಾಜ್ಯದಲ್ಲಿ ಹೊಸ ವಾತಾವರಣವಿದೆ. ಈ ಬಾರಿ ರಾಜ್ಯದಲ್ಲಿ ಮತ್ತೆ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಅದೇ ಹೊತ್ತಿಗೆ ರಾಜ್ಯದಲ್ಲಿ ಮುಂಬರುವ ಚುನಾವಣಾ ದೃಷ್ಟಿಕೋನದಲ್ಲಿಟ್ಟುಕೊಂಡು ಶೀಘ್ರದಲ್ಲೇ ಟಿಕೆಟ್ ಘೋಷಣೆ ಮಾಡುತ್ತೇವೆ ಎಂದು ಖರ್ಗೆ ಹೇಳಿದರು.

ಸಿದ್ಧರಾಮಯ್ಯ ಮುಂದಾಳತ್ವದಲ್ಲಿ ಚುನಾವಣೆ...

ಮುಂದಿನ ಸಿ ಎಂ ಅಭ್ಯರ್ಥಿ ಆಯ್ಕೆ ನನ್ನ ಕೈ ಯಲ್ಲಿ ಇಲ್ಲ. ಸಿದ್ಧರಾಮಯ್ಯ ಮುಂದಾಳತ್ವದಲ್ಲಿ ಚುನಾವಣೆ ನಡೆಯುತ್ತೆ.ಖರ್ಗೆ ಹೇಳಿಕೆ. ಮಾಧ್ಯಮದವರು ಹಾಗೂ ಬಿಜೆಪಿ ಯವರು ಹೊಸ ಸುದ್ದಿಗಳನ್ನ ಹುಟ್ಟುಹಾಕಿ ನಮ್ಮಲ್ಲಿ ವ್ಯತ್ಯಾಸಗಳನ್ನ ತರುತ್ತಿದ್ದಾರೆ. ನಮ್ಮಲ್ಲಿ ಓಡಕು ತರುವ ಪ್ರಯತ್ನ ಬಿಜೆಪಿಯವರು ಮಾಡುತ್ತಿದ್ದಾರೆ. ಬಿಜೆಪಿ ಯವರು ಎಷ್ಟೇ ಪ್ರಯತ್ನ ಮಾಡಿದ್ರು ಕಾಂಗ್ರೆಸ್‌ ನಿಂದ ಯಾರು ಎಲ್ಲಿ ಹೋಗಲ್ಲ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ