ಆ್ಯಪ್ನಗರ

ಬೈ ಎಲೆಕ್ಷನ್‌ಗೆ ಬಿಜೆಪಿ ಟೀಂ ರೆಡಿ! ಲಿಂಬಾವಳಿ ಸಾರಥ್ಯದಲ್ಲಿ 15 ಕ್ಷೇತ್ರಗಳಿಗೂ ಉಸ್ತುವಾರಿ ನೇಮಕ

ಎಲ್ಲಾ 15 ಕ್ಷೇತ್ರಗಳಿಗೆ ಸಚಿವರುಗಳ ಮೇಲುಸ್ತುವಾರಿಯಲ್ಲಿ ತಂಡಗಳನ್ನು ರಚಿಸಲಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಸಚಿವರ ಜೊತೆಗೆ ಆಯಾ ಜಿಲ್ಲೆಗಳ ಸಂಸದರು, ಜಿಲ್ಲೆಯ ಎಲ್ಲಾ ಚುನಾಯಿತ ಶಾಸಕರು, ಮಾಜಿ ಶಾಸಕರು, ಮಾಜಿ ಸಂಸದರು ಹಾಗೂ ಎಲ್ಲ ಪರಾಜಿತ ಅಭ್ಯರ್ಥಿಗಳೂ ಕೈಜೋಡಿಸಬೇಕಾಗಿದೆ.

Vijaya Karnataka Web 13 Nov 2019, 8:01 pm
ಬೆಂಗಳೂರು: ಸುಪ್ರೀಂ ಕೋರ್ಟ್‌ನಲ್ಲಿ ಅನರ್ಹರ ಶಾಸಕರ ಪ್ರಕರಣದ ತೀರ್ಪು ಹೊರಬೀಳುತ್ತಿದ್ದಂತೆಯೇ ಬಿಜೆಪಿಯಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಅನರ್ಹರಾಗಿರುವ ಶಾಸಕರು ಗುರುವಾರ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಇದರ ಬೆನ್ನಲ್ಲೇ, ಉಪಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನೂ ಸಿದ್ದಪಡಿಸಲಾಗಿದ್ದು, ಅದೂ ಕೂಡಾ ಗುರುವಾರವೇ ಬಿಡುಗಡೆಯಾಗಲಿದೆ. ಬಹುತೇಕ ಎಲ್ಲ ಅನರ್ಹ ಶಾಸಕರೂ ಬಿಜೆಪಿಯಿಂದ ಟಿಕೆಟ್ ಪಡೆಯುವ ಸಾಧ್ಯತೆ ದಟ್ಟವಾಗಿದೆ.
Vijaya Karnataka Web bjp team ready for karnataka assembly by election
ಬೈ ಎಲೆಕ್ಷನ್‌ಗೆ ಬಿಜೆಪಿ ಟೀಂ ರೆಡಿ! ಲಿಂಬಾವಳಿ ಸಾರಥ್ಯದಲ್ಲಿ 15 ಕ್ಷೇತ್ರಗಳಿಗೂ ಉಸ್ತುವಾರಿ ನೇಮಕ


ಗುರುವಾರ ಅನರ್ಹ ಶಾಸಕರು ಬಿಜೆಪಿಗೆ ಸೇರ್ಪಡೆ : ಸಿಎಂ ಬಿಎಸ್‌ವೈ ಘೋಷಣೆ

ಈ ನಡುವೆ ಉಪಚುನಾವಣೆಯ ಉಸ್ತುವಾರಿಯನ್ನಾಗಿ ರಾಜ್ಯ ಬಿಜೆಪಿ ಪ್ರಧಾನಿ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಅವರನ್ನು ನೇಮಕ ಮಾಡಲಾಗಿದೆ. ಅಷ್ಟೇ ಅಲ್ಲ ಎಲ್ಲಾ 15 ಕ್ಷೇತ್ರಗಳಿಗೂ ಪ್ರತ್ಯೇಕವಾಗಿ ಉಸ್ತುವಾರಿಗಳನ್ನು ನೇಮಿಸಲಾಗಿದೆ.

1 - ಅಥಣಿ: ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಸಚಿವ ಕೆ. ಎಸ್. ಈಶ್ವರಪ್ಪ

2 - ಕಾಗವಾಡ: ಸಚಿವ ಕೆ. ಎಸ್. ಈಶ್ವರಪ್ಪ, ಸಿ. ಸಿ. ಪಾಟೀಲ್

3 - ಗೋಕಾಕ್: ಕೇಂದ್ರ ಸಚಿವ ಸುರೇಶ್ ಅಂಗಡಿ

4 - ಯಲ್ಲಾಪುರ: ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ

5 - ಹಿರೇಕೆರೂರು: ಸಚಿವ ಬಸವರಾಜ ಬೊಮ್ಮಾಯಿ

6 - ರಾಣೆಬೆನ್ನೂರು: ಸಚಿವ ಜಗದೀಶ್ ಶೆಟ್ಟರ್, ಪ್ರಭು ಚವ್ಹಾಣ್

7 - ವಿಜಯನಗರ: ಡಿಸಿಎಂ ಗೋವಿಂದ ಕಾರಜೋಳ

8 - ಚಿಕ್ಕಬಳ್ಳಾಪುರ: ಕೇಂದ್ರ ಸಚಿವ ಸದಾನಂದ ಗೌಡ, ಸಚಿವ ಸಿ. ಟಿ. ರವಿ

9 - ಕೆ. ಆರ್. ಪುರಂ: ಸಚಿವ ಆರ್. ಅಶೋಕ್, ಕೇಂದ್ರ ಸಚಿವ ಸದಾನಂದ ಗೌಡ

10 - ಯಶವಂತಪುರ: ಸಚಿವ ಆರ್. ಅಶೋಕ್, ಕೇಂದ್ರ ಸಚಿವ ಸದಾನಂದ ಗೌಡ

11 - ಮಹಾಲಕ್ಷ್ಮಿ ಲೇಔಟ್: ಸಚಿವರಾದ ವಿ. ಸೋಮಣ್ಣ ಹಾಗೂ ಎಸ್. ಸುರೇಶ್ ಕುಮಾರ್

12 - ಶಿವಾಜಿ ನಗರ: ಬಿಜೆಪಿ ರಾಜ್ಯ ಉಪಾಧ್ಯಕ್ಷ ನಿರ್ಮಲ್ ಕುಮಾರ್ ಸುರಾನಾ

13 - ಹೊಸಕೋಟೆ: ಡಿಸಿಎಂ ಡಾ. ಅಶ್ವಥ್ ನಾರಾಯಣ್

14 - ಕೆ. ಆರ್. ಪೇಟೆ: ಸಚಿವ ಮಾಧುಸ್ವಾಮಿ

15 - ಹುಣಸೂರು: ಸಚಿವ ಶ್ರೀರಾಮುಲು

ಎಲ್ಲಾ 15 ಕ್ಷೇತ್ರಗಳಿಗೆ ಸಚಿವರುಗಳ ಮೇಲುಸ್ತುವಾರಿಯಲ್ಲಿ ತಂಡಗಳನ್ನು ರಚಿಸಲಾಗಿದೆ. ಎಲ್ಲಾ ಕ್ಷೇತ್ರಗಳಲ್ಲೂ ಸಚಿವರ ಜೊತೆಗೆ ಆಯಾ ಜಿಲ್ಲೆಗಳ ಸಂಸದರು, ಜಿಲ್ಲೆಯ ಎಲ್ಲಾ ಚುನಾಯಿತ ಶಾಸಕರು, ಮಾಜಿ ಶಾಸಕರು, ಮಾಜಿ ಸಂಸದರು ಹಾಗೂ ಎಲ್ಲ ಪರಾಜಿತ ಅಭ್ಯರ್ಥಿಗಳೂ ಕೈಜೋಡಿಸಬೇಕಾಗಿದೆ. ಎಲ್ಲಾ 15 ಕ್ಷೇತ್ರಗಳಲ್ಲೂ ಗೆಲುವಿಗಾಗಿ ರಣತಂತ್ರ ರೂಪಿಸಿರುವ ಬಿಜೆಪಿ, ಒಟ್ಟಾರೆ ಹೊಣೆಗಾರಿಕೆಯನ್ನು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಅವರಿಗೆ ನೀಡಲಾಗಿದೆ.

ಇದು ಪಕ್ಷ ನಿಷ್ಠರು V/S ಪಕ್ಷ ದ್ರೋಹಿಗಳ ನಡುವಣ ಉಪ ಚುನಾವಣಾ 'ಸಮರ': ಉಗ್ರಪ್ಪ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ