ಆ್ಯಪ್ನಗರ

2/3 ದಿನದಲ್ಲಿ ಬಿಕ್ಕಟ್ಟು ಶಮನ ಈಶ್ವರಪ್ಪಗೆ ಖಡಕ್‌ ಸಂದೇಶ ರವಾನೆ ಸಾಧ್ಯತೆ

ಪಕ್ಷದ ವರ್ಚಸ್ಸಿಗೆ ದಕ್ಕೆಯಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ವಿರುದ್ಧ ಪಕ್ಷದ ವರಿಷ್ಠರು ಅತಿ ಶೀಘ್ರದಲ್ಲೇ ಶಿಸ್ತು ಕ್ರಮ ಜರುಗಿಸುವ ಸಾಧ್ಯತೆಗಳಿವೆ.

ವಿಕ ಸುದ್ದಿಲೋಕ 13 Jan 2017, 8:32 am

ಬೆಂಗಳೂರು: ಪಕ್ಷದ ವರ್ಚಸ್ಸಿಗೆ ದಕ್ಕೆಯಾಗುವ ರೀತಿಯಲ್ಲಿ ನಡೆದುಕೊಳ್ಳುತ್ತಿರುವ ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕ ಕೆ.ಎಸ್‌.ಈಶ್ವರಪ್ಪ ವಿರುದ್ಧ ಪಕ್ಷದ ವರಿಷ್ಠರು ಅತಿ ಶೀಘ್ರದಲ್ಲೇ ಶಿಸ್ತು ಕ್ರಮ ಜರುಗಿಸುವ ಸಾಧ್ಯತೆಗಳಿವೆ.

ಸಭೆಯಲ್ಲಿ ಈಶ್ವರಪ್ಪ ನಡವಳಿಕೆ ಬಗ್ಗೆ ಸೂಚ್ಯವಾಗಿ ಪ್ರಸ್ತಾಪಿಸಿದ ಯಡಿಯೂರಪ್ಪ ಅವರು, ''ಎಲ್ಲವನ್ನು ಪಕ್ಷದ ವರಿಷ್ಠರು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ವರಿಷ್ಠರ ಗಮನಕ್ಕೆ ತರಲಾಗಿದೆ. ಸದ್ಯದಲ್ಲಿಯೇ ಬಿಕ್ಕಟ್ಟು ಬಗೆಹರಿಯಲಿದೆ,'' ಎಂಬ ವಿಶ್ವಾಸ ವ್ಯಕ್ತಪಡಿಸಿದರೆಂದು ಉನ್ನತ ಮೂಲಗಳು ತಿಳಿಸಿವೆ.

ಮತ್ತೊಂದು ಮೂಲದ ಪ್ರಕಾರ, ಈಶ್ವರಪ್ಪರಿಗೆ ಸಂಗೊಳ್ಳಿ ರಾಯಣ್ಣ ಬ್ರಿಗೇಡ್‌ನಿಂದ ದೂರ ಉಳಿಯಬೇಕು ಇಲ್ಲವೇ ಪ್ರತಿಪಕ್ಷ ಸ್ಥಾನ ತ್ಯಜಿಸಬೇಕೆಂಬ ಸೂಚನೆ ರವಾನಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

Vijaya Karnataka Web bjp to take action against k s eshwarappa soon
2/3 ದಿನದಲ್ಲಿ ಬಿಕ್ಕಟ್ಟು ಶಮನ ಈಶ್ವರಪ್ಪಗೆ ಖಡಕ್‌ ಸಂದೇಶ ರವಾನೆ ಸಾಧ್ಯತೆ


ಆಹ್ವಾನ ಬಂದಿದ್ದು ತಡವಾಗಿದ್ದರಿಂದ ಸಭೆಗೆ ಹೋಗಿಲ್ಲ: ಈಶ್ವರಪ್ಪ

ಶಿವಮೊಗ್ಗ: ಯಡಿಯೂರಪ್ಪ ಕರೆದಿರುವ ಎಂ.ಎಲ್‌.ಸಿ ಸಭೆಗೆ ನನಗೆ ಆಹ್ವಾನ ಬಂದಿರುವುದು ತಡವಾಗಿದ್ದ ಕಾರಣ ಸಭೆಗೆ ಹೋಗಲು ಸಾಧ್ಯವಾಗಿಲ್ಲ ಎಂದು ವಿಧಾನ ಪರಿಷತ್‌ ವಿಪಕ್ಷ ನಾಯಕ ಕೆ.ಎಸ್‌. ಈಶ್ವರಪ್ಪ ಹೇಳಿದ್ದಾರೆ.

ಗುರುವಾರ ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು , ನಾನು ಶಿವಮೊಗ್ಗದಲ್ಲಿ ಇದ್ದ ಕಾರಣ ಸಭೆಗೆ ಹೋಗಲು ಆಗಲಿಲ್ಲ. ಇದನ್ನು ಬೇರೆ ರೀತಿ ಅರ್ಥೈಸುವ ಅಗತ್ಯವಿಲ್ಲ . ಬೇರೆ ಸದಸ್ಯರಿಗೆ ಸಭೆಯ ವಿಷಯನ್ನು ಬುಧವಾರವೇ ತಿಳಿಸಲಾಗಿತ್ತು. ತಮಗೆ ಮಾತ್ರ ಗುರುವಾರ ಆಹ್ವಾನ ಬಂದಿದೆ. ನಾನು ಶೃಂಗೇರಿಗೆ ಹೋಗಬೇಕಿದ್ದ ಕಾರಣ ಯಡಿಯೂರಪ್ಪ ಕರೆದ ಸಭೆಗೆ ಹೋಗಲು ಸಾಧ್ಯವಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಯಾವುದೇ ಕಾರಣಕ್ಕೂ ಸಂಗೊಳ್ಳಿರಾಯಣ್ಣ ಬ್ರಿಗೇಡ್‌ ಸಂಘಟನೆ ನಿಲ್ಲುವುದಿಲ್ಲ. ಯಡಿಯೂರಪ್ಪ, ಪ್ರಹ್ಲಾದ ಜೋಷಿ, ಅನಂತಕುಮಾರ್‌ ಎಲ್ಲರೂ ಅವರ ಜಾತಿ ಸಭೆಯಲ್ಲಿ ಭಾಗವಹಿಸುತ್ತಾರೆ. ಇದಕ್ಕೆ ನನ್ನ ವಿರೋಧ ವಿಲ್ಲ. ಆದರೆ ಹಿಂದ ಸಂಘಟನೆಗೆ ಏಕೆ ವಿರೋಧವಾಗುತ್ತಿದೆ ಎಂಬುದು ಗೊತ್ತಿಲ್ಲ. ಜನವರಿಯಲ್ಲಿ ಕೂಡಲ ಸಂಗಮದಲ್ಲಿ ನಡೆಯುವ ಸಂಗೊಳ್ಳಿರಾಯಣ್ಣ ಬ್ರಿಗೇಡ್‌ ಸಮಾವೇಶಕ್ಕೆ ಎರಡು ಲಕ್ಷ ಕ್ಕೂ ಅಧಿಕ ಜನರು ಸೇರಲಿದ್ದಾರೆ.ಅದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ಎಂದರು.

ಬಿಎಸ್‌ ವೈ ಮತ್ತು ನಾನು ಅಣ್ಣತಮ್ಮಂದಿರಂತೆ .ನಮ್ಮನ್ನು ಬೇರೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ ಎಂದ ಈಶ್ವರಪ್ಪ ಕತ್ತು ಕೊಯ್ದರೂ ಬಿಜೆಪಿ ಪಕ್ಷ ತೊರೆಯುವುದಿಲ್ಲ. ಬಿಜೆಪಿ ಪಕ್ಷ ತಾಯಿ ಇದ್ದಂತೆ.ಸತ್ತರೂ ಇದೇ ಪಕ್ಷ ದಲ್ಲಿ ಸಾಯುತ್ತೇನೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ