ಆ್ಯಪ್ನಗರ

ಪ್ರಬಲ ಪ್ರತಿಪಕ್ಷವಾಗಿ ಕೆಲಸ: ಬಿಎಸ್‌ವೈ

ಪ್ರಬಲ ಪ್ರತಿಪಕ್ಷವಾಗಿ ಕೆಲಸ ಮಾಡುತ್ತೇವೆ. ಸದನದಲ್ಲಿ ಬಿಜೆಪಿ ಶಾಸಕರು ಎದ್ದು ನಿಂತರೆ ಕಾಂಗ್ರೆಸ್‌-ಜೆಡಿಎಸ್‌ ಬಲ ಉಡುಗಿ ಹೋಗಲಿದೆ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

Vijaya Karnataka 10 Jun 2018, 5:00 am
ಬೆಂಗಳೂರು: ಪ್ರಬಲ ಪ್ರತಿಪಕ್ಷವಾಗಿ ಕೆಲಸ ಮಾಡುತ್ತೇವೆ. ಸದನದಲ್ಲಿ ಬಿಜೆಪಿ ಶಾಸಕರು ಎದ್ದು ನಿಂತರೆ ಕಾಂಗ್ರೆಸ್‌-ಜೆಡಿಎಸ್‌ ಬಲ ಉಡುಗಿ ಹೋಗಲಿದೆ ಎಂದು ಬಿಜೆಪಿಯ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.
Vijaya Karnataka Web 0906-2-2-10


ಬಿಜೆಪಿ ಯುವ ಮೋರ್ಚಾ ಕಾರ್ಯಕಾರಣಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿ,''ಸಂಪುಟ ರಚನೆ ಗೊಂದಲದಿಂದ ಕೆಲಸಗಳು ಕುಂಠಿತವಾಗಿವೆ,'' ಎಂದರು.

''2019ರ ಲೋಕಸಭಾ ಚುನಾವಣೆಯಲ್ಲಿ ಮತ್ತೊಮ್ಮೆ ಮೋದಿ ಪ್ರಧಾನಿಯನ್ನಾಗಿಸಲು ಯುವಮೋರ್ಚಾ ಸನ್ನದ್ಧವಾಗಬೇಕು,'' ಎಂದು ಕರೆ ನೀಡಿದರು. ಯುವ ಶಾಸಕರಿಗೆ ಅಭಿನಂದನೆ ಸಲ್ಲಿಸಲಾಯಿತು. ಶಾಸಕ ಅರವಿಂದ ಲಿಂಬಾವಳಿ, ಪ್ರಧಾನ ಕಾರ್ಯದರ್ಶಿಗಳಾದ ತಮ್ಮೇಶಗೌಡ, ಬಿ ವೈ.ವಿಜಯೇಂದ್ರ, ತೇಜಸ್ವಿ ಸೂರ್ಯ, ಚಂದ್ರಶೇಖರ್‌ ಮತ್ತಿತರರು ಇದ್ದರು.

ಕಾಯೋಣ: ಬಿಎಸ್‌ವೈ

ರೈತರ ಸಾಲ ಮನ್ನಾ ವಿಚಾರದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯವರು 'ನದಿ ದಾಟಿದ ಮೇಲೆ ಅಂಬಿಗನ ಹಂಗೇಕೆ ಎಂಬಂತಾಗಿದೆ' ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ವ್ಯಂಗ್ಯವಾಡಿದ್ದಾರೆ.

''ಕುಮಾರಸ್ವಾಮಿ ಬಜೆಟ್‌ ಮಂಡನೆ ಮಾಡುವವರೆಗೆ ಕಾಯೋಣ. ಆ ಬಳಿಕ ಮಾಡಿದಿದ್ದರೆ ಅಧಿಕಾರದಿಂದ ತೊಲಗುವ ತನಕ ಹೋರಾಟ ಮಾಡೋಣ. ಅಪ್ಪ-ಮಕ್ಕಳಿಗೆ ನಿಜವಾಗಲೂ ರೈತರ ಬಗ್ಗೆ ಕಾಳಜಿ ಇದ್ದಿದ್ದರೆ ರೈತರ ಸಾಲ ಮನ್ನಾ ವಿಚಾರದಲ್ಲಿ ಕಾಂಗ್ರೆಸ್‌ಗೆ ಷರತ್ತು ಹಾಕಬೇಕಿತ್ತು. ಆದರೆ ಈಗ ನದಿ ದಾಟಿದ ಮೇಲೆ ಅಂಬಿಗನ ಹಂಗೇಕೆ ಎಂಬಂತೆ ನಡುವಳಿಕೆ ತೋರಿಸುತ್ತಿದ್ದಾರೆ,''ಎಂದು ಆಕ್ರೋಶ ವ್ಯಕ್ತಪಡಿಸಿದರು.

''ಹಾಲಿನ ದರವನ್ನು ಎರಡು ರೂಪಾಯಿ ಕಡಿತಗೊಳಿಸಿ ರಾಜ್ಯದ ಜನರಿಗೆ ಅನ್ಯಾಯ ಮಾಡಿದ್ದಾರೆ. ಮುಂದಿನ ದಿನದಲ್ಲಿ ರಾಜ್ಯ ಬಿಜೆಪಿ ಘಟಕ ರೈತ ಹೋರಾಟ ನಡೆಸುತ್ತದೆ,''ಎಂದು ಹೇಳಿದರು.

''ಖಾಸಗಿಯಲ್ಲೂ ರೈತರ ಸಾಲ ಮನ್ನಾ ಮಾಡುವುದಾಗಿ ಧರ್ಮಸ್ಥಳದಲ್ಲಿ ಹೇಳಿಕೆ ನೀಡಿದ್ದಾರೆ. ಆ ಧರ್ಮಸ್ಥಳ ಮಂಜುನಾಥನೇ ಕುಮಾರಸ್ವಾಮಿಗೆ ಆ ಶಕ್ತಿ ನೀಡಲಿ,'' ಎಂದು ವ್ಯಂಗ್ಯವಾಡಿದರು.

ವಚನಭ್ರಷ್ಟ

ಮುಖ್ಯಮಂತ್ರಿ ಕುಮಾರಸ್ವಾಮಿಗೆ ವಚನ ಭ್ರಷ್ಟ ಎಂಬ ಶಾಪ ಇದೆ. ಈ ಶಾಪದಿಂದ ವಿಮೋಚನೆ ಪಡೆಯಬೇಕಿದ್ದರೆ, ಷರತ್ತಿಲ್ಲದ ರೈತರ ಸಾಲ ಮನ್ನಾ ಮಾಡಬೇಕು.

ಲಕ್ಷ್ಮಣ ಸವದಿ, ರೈತ ಮೋರ್ಚಾ ಅಧ್ಯಕ್ಷ


ಮೋದಿ ಹತ್ಯೆಗೆ ಸಂಚು ಬಹಿರಂಗ

''ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟಿಷರೊಂದಿಗೆ ಸ್ವಾತಂತ್ರ್ಯ ನಂತರ ಚೀನಾದೊಂದಿಗೆ ಕೈ ಜೋಡಿಸಿರುವ ಕಮ್ಯುನಿಸ್ಟ್‌ರು ಪ್ರಧಾನಿ ಮೋದಿ ಹತ್ಯೆಗೆ ಸಂಚು ರೂಪಿಸಿದ್ದಾರೆ,'' ಎಂದು ಸಂಸದ ಪ್ರತಾಪ್‌ ಸಿಂಹ ಆರೋಪಿಸಿದರು. ''ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರದಿದ್ದರೂ ರಾಜ್ಯದಲ್ಲಿ ಯಡಿಯೂರಪ್ಪ , ಪ್ರಧಾನಿ ಮೋದಿ ಅಲೆಯಿದೆ,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ