ಆ್ಯಪ್ನಗರ

ಭಂಡತನದ ಸರ್ಕಾರಕ್ಕೆ ನಾಚಿಕೆ ಎಂಬುವುದು ಇದ್ಯಾ? ಬಿ.ಕೆ ಹರಿಪ್ರಸಾದ್ ಕಿಡಿ

ಭಂಡತನದ ಸರ್ಕಾರಕ್ಕೆ ನಾಚಿಕೆ ಎಂಬುವುದು ಇದ್ಯಾ? ಎಂದು ವಿಧಾನಪರಿಷತ್‌ ಪ್ರತಿಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ. ಈ ಕುರಿತಾಗಿ ಗುರುವಾರ ಟ್ವೀಟ್ ಮಾಡಿರುವ ಅವರು ಏನು ಹೇಳಿದ್ದಾರೆ ಎಂಬ ವಿವರ ಇಲ್ಲಿದೆ.

Vijaya Karnataka Web 30 Jun 2022, 11:02 am

ಹೈಲೈಟ್ಸ್‌:

  • ಭಂಡತನದ ಸರ್ಕಾರಕ್ಕೆ ನಾಚಿಕೆ ಎಂಬುವುದು ಇದ್ಯಾ?
  • ಪರಿಷತ್‌ ಪ್ರತಿಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಕಿಡಿ
  • ಟ್ವೀಟ್‌ ಮೂಲಕ ಕಿಡಿಕಾರಿದ ಬಿ.ಕೆ ಹರಿಪ್ರಸಾದ್
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web bk hariprasad
ಬೆಂಗಳೂರು: ಸರ್ಕಾರದ ದುರಾಳಿಡತ, ಭಷ್ಟಾಚಾರದ ಬಗ್ಗೆ ಹೈಕೋರ್ಟ್ ಛೀಮಾರಿ ಹಾಕುತ್ತಿದೆ. ಭಂಡತನದ ಸರ್ಕಾರಕ್ಕೆ ನಾಚಿಕೆ ಎಂಬುವುದು ಇದ್ಯಾ? ಎಂದು ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ ಹರಿಪ್ರಸಾದ್ ಕಿಡಿಕಾರಿದ್ದಾರೆ.


ಈ ಕುರಿತಾಗಿ ಟ್ವೀಟ್ ಮಾಡಿರುವ ಬಿ.ಕೆ ಹರಿಪ್ರಸಾದ್ “ನಾ ಖಾವೂಂಗಾ,ನಾ ಖಾನೇ ದೂಂಗಾ ಎಂದು ಅಧಿಕಾರ ಹಿಡಿದ"ಚೌಕಿದಾರರು"ಈಗ ಮೌನಿದಾರರಾಗುವ ಜೊತೆಗೆ ಪಾಲುದಾರರಾಗಿದ್ದಾರೆ. ಸರ್ಕಾರ 40% ಕಮಿಷನ್ ಪಡೆಯುತ್ತಿದ್ದ ರೆ,ಇಲಾಖೆಗಳು ಕಮಿಷನ್ ಪಡೆಯುವ ಸೆಂಟರ್ ಗಳಾಗಿವೆ.ಸರ್ಕಾರದ ದುರಾಳಿಡತ, ಭಷ್ಟಾಚಾರದ ಬಗ್ಗೆ ಹೈಕೋರ್ಟ್ ಛೀಮಾರಿ ಹಾಕುತ್ತಿದೆ. ಭಂಡತನದ ಸರ್ಕಾರಕ್ಕೆ ನಾಚಿಕೆ ಎಂಬುವುದು ಇದ್ಯಾ?” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ದಿ ಕಾಶ್ಮೀರ್ ಫೈಲ್ಸ್' ಜೊತೆ ಗುಜರಾತ್‌ ಹತ್ಯಾಕಾಂಡದ 'ಪರ್ಜಾನಿಯಾ' ತೋರಿಸಿ: ಬಿಕೆ ಹರಿಪ್ರಸಾದ್
ಭ್ರಷ್ಟಾಚಾರ ನಿಗ್ರಹ ದಳಕ್ಕೆ (ಎಸಿಬಿ) ಭ್ರಷ್ಟಾಚಾರವೇ ದಂಧೆಯಾಗಿ ಪರಿಣಮಿಸಿದೆ. ಸ್ವಯಂ ಎಸಿಬಿ ಭ್ರಷ್ಟರ ಕೂಪವಾಗಿದೆ ಎಂದು ಹೈಕೋರ್ಟ್ ನ್ಯಾಯಾಧೀಶರು ಚಾಟಿ ಬೀಸಿದ್ದಾರೆ. ಇದರ ಮುಖ್ಯಸ್ಥ ಎಡಿಜಿಪಿಯೇ ಕಳಂಕಿತ ಅಧಿಕಾರಿಯಾಗಿದ್ದಾರೆ.

ಎಸಿಬಿ ಕಚೇರಿಗಳೆಲ್ಲಾ ಕಲೆಕ್ಷನ್ ಸೆಂಟರ್‌ಗಳಾಗಿವೆ, ದೊಡ್ಡ ದೊಡ್ಡ ಐಪಿಎಸ್‌, ಐಎಎಸ್ ಅಧಿಕಾರಿಗಳನ್ನು ಹಿಡಿಯೋದರ ಬದಲಾಗಿ ಬಾಲಂಗೋಚಿಗಳನ್ನು ಹಿಡಿದುಕೊಂಡು ಕೋರ್ಟ್‌ಗೆ ಬರುತ್ತೀರಿ ಎಂದು ನ್ಯಾಯಮೂರ್ತಿ ಎಚ್‌.ಪಿ ಸಂದೇಶ್ ಎಸಿಬಿ ವಿರುದ್ಧ ಕೆಂಡಕಾರಿದ್ದಾರೆ. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಬಿ.ಕೆ ಹರಿಪ್ರಸಾದ್ ಅವರು ರಾಜ್ಯ ಸರ್ಕಾರದ ವಿರುದ್ಧ ಟ್ವೀಟ್ ಮೂಲಕ ಕಿಡಿಕಾರಿದ್ದಾರೆ.

ಲಂಚ ಪ್ರಕರಣದಲ್ಲಿ ಆರೋಪಿಯಾಗಿರೋ ಬೆಂಗಳೂರು ನಗರ ಜಿಲ್ಲಾಧಿಕಾರಿ ಪಿಎಸ್‌ ಮಹೇಶ್‌ ಅವರು ಸಲ್ಲಿಸಿರುವ ಜಾಮೀನು ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ್ದ ನ್ಯಾಯಾಧೀಶರು ಅರ್ಜಿದಾರರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಎ.ಎಸ್ ಪೊನ್ನಣ್ಣ ಅವರು ವಿವರಣೆ ನೀಡಲು ಮುಂದಾಗುವ ಸಂದರ್ಭದಲ್ಲಿ ಎಸಿಬಿ ಪರರ ವಕೀಲರಾದ ಪಿ.ಎನ್ ಮನಮೋಹನ್‌ ಅವರನ್ನು ಉದ್ದೇಶಿಸಿ ಎಸಿಬಿ ಏಕ ರಚನೆಯಾಗಿದೆ ಗೊತ್ತಾ?ಇವತ್ತು ಎಸಿಬಿಯೇ ಭ್ರಷ್ಟಾಚಾರದ ದಂಧೆ ನಡೆಸುತ್ತಿದೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ