ಆ್ಯಪ್ನಗರ

ಕಪ್ಪು-ಬಿಳಿ ದಂಧೆ: ಎಎಸ್‌ ಅಧಿಕಾರಿ ಭೀಮಾ ನಾಯಕ್‌ ಸಸ್ಪೆಂಡ್‌

ಕಪ್ಪು ಹಣವನ್ನು ಅಧಿಕೃತ ಮಾಡುವ ದಂಧೆಯಲ್ಲಿತೊಡಗಿದ್ದ ಆರೋಪಕ್ಕೆ ಗುರಿಯಾಗಿರುವ ಬೆಂಗಳೂರು ನಗರ ಜಿಲ್ಲೆಯ ವಿಶೇಷ ಭೂ ಸ್ವಾಧೀನಾಧಿಕಾರಿಯಾದ ಕೆಎಎಸ್‌ ಅಧಿಕಾರಿ ಎಲ್‌. ಭೀಮಾ ನಾಯಕ್‌ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಸರಕಾರ ಆದೇಶ ಹೊರಡಿಸಿದೆ.

ವಿಕ ಸುದ್ದಿಲೋಕ 13 Dec 2016, 1:47 pm
ಬೆಂಗಳೂರು: ಕಪ್ಪು ಹಣವನ್ನು ಅಧಿಕೃತ ಮಾಡುವ ದಂಧೆಯಲ್ಲಿತೊಡಗಿದ್ದ ಆರೋಪಕ್ಕೆ ಗುರಿಯಾಗಿರುವ ಬೆಂಗಳೂರು ನಗರ ಜಿಲ್ಲೆಯ ವಿಶೇಷ ಭೂ ಸ್ವಾಧೀನಾಧಿಕಾರಿಯಾದ ಕೆಎಎಸ್‌ ಅಧಿಕಾರಿ ಎಲ್‌. ಭೀಮಾ ನಾಯಕ್‌ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಿ ಸರಕಾರ ಆದೇಶ ಹೊರಡಿಸಿದೆ.
Vijaya Karnataka Web blackmoney kas officer bheema nayak suspend
ಕಪ್ಪು-ಬಿಳಿ ದಂಧೆ: ಎಎಸ್‌ ಅಧಿಕಾರಿ ಭೀಮಾ ನಾಯಕ್‌ ಸಸ್ಪೆಂಡ್‌


ಸರಕಾರಿ ಸೇವೆಗೆ ಗೈರು ಹಾಜರಿ ಹಾಗೂ ವಾಹನ ಚಾಲಕ ರಮೇಶ್‌ಆತ್ಮಹತ್ಯೆ ಪ್ರಕರಣದ ಸಂಬಂಧ ಮಂಡ್ಯ ಪೊಲೀಸ್‌ಠಾಣೆಯಲ್ಲಿಭೀಮಾ ನಾಯಕ್‌ವಿರುದ್ಧ ಕ್ರಿಮಿನಲ್‌ಮೊಕದ್ದಮೆ ದಾಖಲಾಗಿರುವುದರಿಂದ ಸರಕಾರ ಈ ಕ್ರಮ ಕೈಗೊಂಡಿದೆ.

ಅಧಿಕಾರಿಯು ಅಮಾನತಿನ ಅವಧಿಯಲ್ಲಿಜೀವನಾಧಾರ ಭತ್ಯೆ ಪಡೆಯಲು ಅರ್ಹರಾಗಿದ್ದಾರೆ. ಆದರೆ ಅಮಾನತಿನ ಅವಧಿಯಲ್ಲಿಸಕ್ಷಮ ಪ್ರಾಧಿಕಾರದ ಪೂರ್ವಾನುಮತಿ ಪಡೆಯದೇ ಕೇಂದ್ರ ಸ್ಥಾನ ಬಿಡವಂತಿಲ್ಲಎಂದು ಆದೇಶದಲ್ಲಿಸ್ಪಷ್ಟಪಡಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ