ಆ್ಯಪ್ನಗರ

ಹೆಚ್ಚು ಅಂಕ ಗಳಿಕೆಗೆ ಬ್ಲೂ ಪ್ರಿಂಟ್‌: ವಿದ್ಯಾರ್ಥಿಗಳಿಗೆ ತಜ್ಞರ ಸಲಹೆ

ಪರೀಕ್ಷೆ ಸಿದ್ಧತೆಯಲ್ಲಿತೊಡಗಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಗಳಿಸಲು ಪಿಯು ಮಂಡಳಿ ರೂಪಿಸಿರುವ ಬ್ಲೂ ಪ್ರಿಂಟ್‌ ಹಾಗೂ ಎನ್‌ಸಿಇಆರ್‌ಟಿ ಪಠ್ಯ ಪುಸ್ತಕ ಅನುಸರಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.

Vijaya Karnataka Web 18 Feb 2018, 7:37 am
ಬೆಂಗಳೂರು: ಪರೀಕ್ಷೆ ಸಿದ್ಧತೆಯಲ್ಲಿತೊಡಗಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಹೆಚ್ಚಿನ ಅಂಕಗಳನ್ನು ಗಳಿಸಲು ಪಿಯು ಮಂಡಳಿ ರೂಪಿಸಿರುವ ಬ್ಲೂ ಪ್ರಿಂಟ್‌ ಹಾಗೂ ಎನ್‌ಸಿಇಆರ್‌ಟಿ ಪಠ್ಯ ಪುಸ್ತಕ ಅನುಸರಿಸಬೇಕು ಎಂದು ತಜ್ಞರು ಸಲಹೆ ನೀಡಿದ್ದಾರೆ.
Vijaya Karnataka Web blueprint and learning
ಹೆಚ್ಚು ಅಂಕ ಗಳಿಕೆಗೆ ಬ್ಲೂ ಪ್ರಿಂಟ್‌: ವಿದ್ಯಾರ್ಥಿಗಳಿಗೆ ತಜ್ಞರ ಸಲಹೆ


ಪಿಯು ಕಾಲೇಜುಗಳ ಪ್ರಾಂಶುಪಾಲಕರ ಸಂಘ ಹಾಗೂ ಉಪನ್ಯಾಸಕರ ಫೋರಂಗಳು ಸಿದ್ಧಪಡಿಸಿರುವ ಹ್ಯಾಂಡ್‌ ಬುಕ್‌ ಉಪಯುಕ್ತವಾಗಿದೆ. ಈ ಹ್ಯಾಂಡ್‌ ಬುಕ್‌ನಲ್ಲಿಮಾದರಿ ಪ್ರಶ್ನೆಗಳು ಹಾಗೂ ಯಾವ ಪ್ರಶ್ನೆಗೆ ಎಷ್ಟು ಉತ್ತರ ಬರೆಯಬೇಕು ಎಂಬ ವಿವರಣೆ ನೀಡಲಾಗಿದೆ. ಇದು ಪರೀಕ್ಷೆ ಸಿದ್ಧತೆ ಮಾಡಿಕೊಳ್ಳಲು ಅನುಕೂಲ ಆಗಲಿದೆ. ಆದರೆ ಇಷ್ಟೇ ಸಾಲದು. ಪಿಯು ಮಂಡಳಿ ಸಿದ್ಧಪಡಿಸಿರುವ ಬ್ಲೂ ಪ್ರಿಂಟ್‌ ಪ್ರಕಾರ ಎಲ್ಲ ವಿಷಯಗಳನ್ನು ಓದಿಕೊಂಡರೆ ಅತಿ ಹೆಚ್ಚು ಅಂಕಗಳನ್ನು ಪಡೆಯಲು ಸಹಾಯವಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟರು.



ದ್ವಿತೀಯ ಪಿಯುಸಿ ಪರೀಕ್ಷೆ ಸಿದ್ಧತೆ ಕುರಿತು 'ವಿಜಯ ಕರ್ನಾಟಕ 'ದ ಬೆಂಗಳೂರಿನ ಕಚೇರಿಯಲ್ಲಿಶನಿವಾರ ಏರ್ಪಡಿಸಿದ್ದ ನೇರ ಫೋನ್‌ ಇನ್‌ ಕಾರ್ಯಕ್ರಮದಲ್ಲಿರಾಜ್ಯದ ನಾನಾ ಭಾಗದಿಂದ ನೂರಾರು ವಿದ್ಯಾರ್ಥಿಗಳು ಕರೆ ಮಾಡಿ ಹ್ಯಾಂಡ್‌ ಬುಕ್‌ ಬಗ್ಗೆ ಇರುವ ಗೊಂದಲಕ್ಕೆ ಉತ್ತರ ಪಡೆದುಕೊಂಡರು. ಕರೆ ಮಾಡಿದ ಬಹುತೇಕರು ಹ್ಯಾಂಡ್‌ ಬುಕ್‌ ಪಿಯು ಮಂಡಳಿ ಸಿದ್ಧಪಡಿಸಿದೆಯೇ? ಅದನ್ನು ಅನುಸರಿಸಬೇಕೇ ಎಂದು ಪ್ರಶ್ನೆ ಕೇಳಿದರು.

ಎಂಥ ಮಾದರಿ ಪ್ರಶ್ನೆಗಳು ಬರಲಿವೆ ಎಂಬುದನ್ನು ನೋಡಿಕೊಂಡು ವಿದ್ಯಾರ್ಥಿಗಳು ಸ್ವತಂತ್ರವಾಗಿ ಆಲೋಚಿಸಲು ಅನುಕೂಲ ಆಗಲಿ ಎಂಬ ಸದುದ್ದೇಶದಿಂದ ಪ್ರಾಂಶುಪಾಲರ ಸಂಘವು ಹ್ಯಾಂಡ್‌ ಬುಕ್‌ ಸಿದ್ಧಪಡಿಸಿದೆ. ಹ್ಯಾಂಡ್‌ ಬುಕ್‌ ಹಾಗೂ ಬ್ಲೂ ಪ್ರಿಂಟ್‌ ನಡುವೆ ಯಾವುದೇ ಗೊಂದಲ ಬೇಡ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಕೆ.ಆರ್‌.ಮಂಜುನಾಥ್‌ ವಿದ್ಯಾರ್ಥಿಗಳಿಗೆ ಸ್ಪಷ್ಟಪಡಿಸಿದರು.

ಈ ಬಾರಿಯು ಕನ್ನಡ ಹಾಗೂ ಇಂಗ್ಲಿಷ್‌ ಎರಡು ಭಾಷೆಯಲ್ಲಿಯೂ ಪ್ರಶ್ನೆ ಪತ್ರಿಕೆ ಕೊಡಲಾಗುವುದು. ಅಂದರೆ ಎರಡೂ ಭಾಷೆಯಲ್ಲಿಯೂ ಪ್ರಶ್ನೆಗಳು ಇರಲಿವೆ. ವಿದ್ಯಾರ್ಥಿಗಳು ಕನ್ನಡ ಇಲ್ಲವೇ ಇಂಗ್ಲಿಷ್‌ ಭಾಷೆಯಲ್ಲಿಉತ್ತರ ಬರೆಯಬಹುದು. ಆದರೆ ಒಂದೇ ಉತ್ತರ ಪತ್ರಿಕೆಯಲ್ಲಿಎರಡೂ ಭಾಷೆಯಲ್ಲಿಬರೆಯಲು ಅವಕಾಶವಿಲ್ಲ. ವಿದ್ಯಾರ್ಥಿಗಳು ಈ ಅಂಶವನ್ನು ಗಮನದಲ್ಲಿಇಟ್ಟುಕೊಳ್ಳಬೇಕು. ಇದರಿಂದ ವಿದ್ಯಾರ್ಥಿಗಳು ಪ್ರಶ್ನೆಗಳನ್ನು ಸುಲಭವಾಗಿ ಅರ್ಥ ಮಾಡಿಕೊಳ್ಳಲು ಅನುಕೂಲ ಆಗಲಿದೆ ಎಂದು ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ