ಆ್ಯಪ್ನಗರ

ಅನರ್ಹರ ಹಿತ ಕಾಯಲು ಸಿಎಂ ತಂತ್ರ: ಬಿಜೆಪಿ ಬಂಡಾಯ ನಾಯಕರಿಗೆ ನಿಗಮ ಮಂಡಳಿ ಅಧ್ಯಕ್ಷ ಪಟ್ಟ

ಬಿಜೆಪಿಯಲ್ಲಿ ಈಗ ಬಂಡಾಯದ ಬಾವುಟ ಜೋರಾಗಿ ಹಾರುತ್ತಿದೆ. ಅನರ್ಹ ಶಾಸಕರಿಗಾಗಿ ಕ್ಷೇತ್ರದ ಸೀಟು ಬಿಟ್ಟು ಕೊಡದಿರಲು ಸ್ಥಳೀಯ ನಾಯಕರು ಮುಂದಾಗಿದ್ದಾರೆ. ಇವರ ಮೂಗಿಗೆ ತುಪ್ಪ ಸವರಲು ಮುಖ್ಯಮಂತ್ರಿ ಪ್ರಯತ್ನ ನಡೆಸಿದ್ದಾರೆ.

Vijaya Karnataka Web 9 Oct 2019, 6:44 pm
ಬೆಂಗಳೂರು: ಬಿಜೆಪಿಯಲ್ಲಿ ಭುಗಿಲೆದ್ದಿರುವ ಭಿನ್ನಮತವನ್ನು ಶಮನ ಮಾಡಲು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಈಗ ತಂತ್ರವನ್ನು ಉಪಯೋಗಿಸಿದ್ದಾರೆ.
Vijaya Karnataka Web ವಿಧಾನಸೌಧ
ವಿಧಾನಸೌಧ


ಅನರ್ಹ ಶಾಸಕರ ಹಿತ ಕಾಪಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಿದ್ದಾರೆ. ಈ ಕಾರಣಕ್ಕಾಗಿ ಬಂಡಾಯದ ಬಾವುಟ ಹಾರಿಸಲು ಮುಂದಾಗಿದ್ದ ಕೆಲವು ಪರಾಜಿತ ಅಭ್ಯರ್ಥಿಗಳಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ ನೀಡಲಾಗಿದೆ.

ಪ್ರಮುಖವಾಗಿ ಅನರ್ಹ ಶಾಸಕರಿಗೆ ಈ ಕ್ಷೇತ್ರಗಳನ್ನು ಬಿಟ್ಟುಕೊಡಲು ನಿರ್ಧರಿಸಲಾಗಿತ್ತು. ಆದರೆ ಈಗಾಗಲೇ ಈ ಕ್ಷೇತ್ರದಲ್ಲಿ ಪರಾಜಿತಗೊಂಡ ಹಾಗೂ ಸ್ಥಳೀಯ ಮಟ್ಟದಲ್ಲಿ ಪ್ರಭಾವಿ ನಾಯಕರು ಎನಿಸಿಕೊಂಡಿದ್ದವರು ಭಿನ್ನಮತದ ಮುನ್ಸೂಚನೆ ನೀಡಿದ್ದರು. ಇದನ್ನು ಅರಿತ ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಹಲವರಿಗೆ ನಿಗಮ ಮಂಡಳಿ ಅಧ್ಯಕ್ಷ ಸ್ಥಾನ "ವಿತರಿಸಿದ್ದಾರೆ'.

ಪ್ರಮುಖವಾಗಿ ಹೊಸಕೋಟೆ, ಕೆ.ಆರ್‌. ಪುರಂ, ಗೋಕಾಕ, ಹಿರೇಕೆರೂರು, ಹೊಸಪೇಟೆ, ಕಾಗವಾಡ, ಮಸ್ಕಿ, ಯಲ್ಲಾಪುರದಲ್ಲಿ ಭಿನ್ನಮತ ಶಮನ ಮಾಡಲು ಕ್ರಮ ಕೈಗೊಳ್ಳಲಾಗಿದೆ. ನಿಗಮ ಮಂಡಳಿ ಅಧ್ಯಕ್ಷರ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

ಅಶೋಕ್‌ ಪೂಜಾರಿ (ಗೋಕಾಕ, ಬೆಳಗಾವಿ): ಕರ್ನಾಟಕ ಗಡಿ ಅಭಿವೃದ್ಧಿ ಪ್ರಾಧಿಕಾರ

ರಾಜು ಕಾಗೆ (ಕಾಗವಾಡ, ಬೆಳಗಾವಿ): ಅಚ್ಚುಕಟ್ಟು ಪ್ರದೇಶಾಭಿವೃದ್ಧೀ ಮತ್ತು, ಮಲಪ್ರಭಾ, ಘಟಪ್ರಭಾ ಯೋಜನೆ

ಯುಬಿ ಬಣಕಾರ (ಹಿರೆಕೆರೂರು, ಹಾವೇರಿ): ಕೃಷಿ ಉತ್ಪನ್ನ, ಸಂಸ್ಕರಣ ನಿಗಮ

ಬಸನಗೌಡ ತುರವಿಹಾಳ (ಮಸ್ಕಿ, ರಾಯಚೂರು): ಅಚ್ಚುಕಟ್ಟು ಪ್ರದೇಶಾಭಿವೃದ್ಧಿ (ಕಾಡಾ), ತುಂಗಭದ್ರಾ ಯೋಜನೆ

ವಿ.ಎಸ್‌. ಪಾಟೀಲ (ಯಲ್ಲಾಪುರ, ಉತ್ತರ ಕನ್ನಡ): ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ

ಎಚ್‌ಆರ್‌ ಗವಿಯಪ್ಪ (ಹೊಸಪೇಟೆ, ಬಳ್ಳಾರಿ): ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮ

ನಂದೀಶ್‌ ರೆಡ್ಡಿ (ಕೆ.ಆರ್‌. ಪುರಂ, ಬೆಂಗಳೂರು): ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ - ಬಿಎಂಟಿಸಿ

ಶರತ್‌ ಬಚ್ಚೇಗೌಡ (ಹೊಸಕೇಟೆ, ಬೆಂ. ಗ್ರಾಮಾಂತರ): ಕರ್ನಾಟಕ ಗೃಹ ಮಂಡಳಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ