ಆ್ಯಪ್ನಗರ

ಗಂಗಾಕಲ್ಯಾಣ ಯೋಜನೆಯಡಿ 6ಸಾವಿರ ಬೋರ್‌ವೆಲ್‌ ಕೊರೆಯುವ ಟೆಂಡರ್‌ಗೆ ತಡೆ

ಅರಸು ಹಿಂದುಗಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಗಂಗಾಕಲ್ಯಾಣ ಯೋಜನೆಯಡಿ ರಾಜ್ಯಾದ್ಯಂತ ಸುಮಾರು ಆರು ಸಾವಿರ ಬೋರ್‌ವೆಲ್‌ ಕೊರೆಯಿಸಲು ...

Vijaya Karnataka 2 Mar 2019, 5:00 am
ಬೆಂಗಳೂರು: ಅರಸು ಹಿಂದುಗಳಿದ ವರ್ಗಗಳ ಅಭಿವೃದ್ಧಿ ನಿಗಮದ ವತಿಯಿಂದ ಗಂಗಾಕಲ್ಯಾಣ ಯೋಜನೆಯಡಿ ರಾಜ್ಯಾದ್ಯಂತ ಸುಮಾರು ಆರು ಸಾವಿರ ಬೋರ್‌ವೆಲ್‌ ಕೊರೆಯಿಸಲು ಕರೆದಿದ್ದ ಗುತ್ತಿಗೆ ಕಾರ್ಯಾದೇಶ ನೀಡುವುದಕ್ಕೆ ಹೈಕೋರ್ಟ್‌ ಶುಕ್ರವಾರ ಮಧ್ಯಾಂತರ ತಡೆ ನೀಡಿದೆ.
Vijaya Karnataka Web highcourt


ಬೆಂಗಳೂರಿನ ಮೆರ್ಸಸ್‌ ಮಂಜುನಾಥ ಬೋರ್‌ವೆಲ್ಸ್‌ ಸೇರಿ ನಾನಾ ಜಿಲ್ಲೆಗಳ ಎಂಟು ಬೋರ್‌ವೆಲ್‌ ಕಂಪನಿಗಳು ಗುತ್ತಿಗೆ ಅಧಿಸೂಚನೆ ರದ್ದು ಕೋರಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಅಲೋಕ್‌ ಆರಾಧೆ ಅವರಿದ್ದ ಏಕಸದಸ್ಯಪೀಠ ಈ ಆದೇಶ ನೀಡಿದೆ.

ಅರ್ಜಿದಾರರ ವಕೀಲ ಡಿ.ಆರ್‌.ರವಿಶಂಕರ್‌, ''ಒಂದನೇ ದರ್ಜೆ ಹಾಗೂ ವಾರ್ಷಿಕ ಹತ್ತು ಕೋಟಿ ರೂ.ವರೆಗಿನ ಗುತ್ತಿಗೆ ಕೆಲಸ ಮಾಡಿಸಿದ ಗುತ್ತಿಗೆದಾರರು ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅರ್ಹರು ಎಂಬುದಾಗಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ. 12 ಪ್ಯಾಕೇಜ್‌ಗಳಲ್ಲಿ ಗುತ್ತಿಗೆ ನೀಡುವುದರಿಂದ ಟೆಂಡರ್‌ ಕೆಲವರಿಗೆ ಮಾತ್ರ ಗುತ್ತಿಗೆ ಸಿಗಲಿದೆ. ಪರಿಣಾಮ ಸರಕಾರದ ಖಜಾನೆಗೆ ನಷ್ಟವಾಗಲಿದೆ,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ