ಆ್ಯಪ್ನಗರ

ಬ್ರಾಹ್ಮಣರ ಸಮಸ್ಯೆ ಪರಿಹರಿಸಲು ಬ್ರಾಹ್ಮಣರ ಅಭಿವೃದ್ಧಿ ಪ್ರಾಧಿಕಾರ ರಚನೆ: ಜಿಟಿಡಿ

ಮೈಸೂರಿನಲ್ಲಿ ಸಚಿವ ಜಿಟಿಡಿ ಕುಟುಂಬ ಸದಸ್ಯರಿಗೆ ಸನ್ಮಾನ

Vijaya Karnataka Web 16 Jul 2018, 5:10 pm
ಮೈಸೂರು: ಬ್ರಾಹ್ಮಣ ಸಮುದಾಯದವರು ಸೂರ್ಯದೇವನಲ್ಲಿ ಸರ್ವೇ ಜನ ಸುಖಿನೋ ಭವಂತು ಎಂದು ಪ್ರಾರ್ಥಿಸುತ್ತಾರೆ, ವಿಪ್ರರು ವಿದ್ಯಾವಂತರು ಸ್ವಾಭಿಮಾನಿಗಳು ಅದರಂತೆಯೇ ಹೆಚ್ಚಿನ ಸಂಖ್ಯೆಯಲ್ಲಿ ಬಡವರು ಸಹ ಇದ್ದಾರೆ, ಅಂತವರ ಸಮಸ್ಯೆಯನ್ನು ಪರಿಹರಿಸುವದಕ್ಕಾಗಿಯೇ - ಬ್ರಾಹ್ಮಣರ ಅಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಲಾಗಿದೆ ಎಂದು ಸಚಿವ ಜಿ.ಟಿ. ದೇವೇಗೌಡ ತಿಳಿಸಿದರು.
Vijaya Karnataka Web ಸಚಿವ ಜಿಟಿಡಿಗೆ ಸನ್ಮಾನ
ಸಚಿವ ಜಿಟಿಡಿಗೆ ಸನ್ಮಾನ


ಮೈಸೂರಿನ ವಿವಿಧ ದೇವಸ್ಥಾನಗಳ ಪುರೋಹಿತರ ಬಳಗದ ವತಿಯಿಂದ ಜಿಟಿ.ದೇವೇಗೌಡ, ಪತ್ನಿ ಲಲಿತಾ, ಪುತ್ರ ಹರೀಶ್ ಗೌಡರನ್ನು ಸನ್ಮಾನಿಸಿದರು.

ನಂತರ ಸಚಿವರಾದ ಜಿಟಿ. ದೇವೆಗೌಡರು ಮಾತನಾಡಿ, ಜಿಲ್ಲಾಡಳಿತ ವತಿಯಿಂದ ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದಿಂದ ಶಂಕರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಗುತ್ತಿದ್ದು ಶಾಲಾ ಕಾಲೇಜುಗಳಲ್ಲು ಸಹ ಶಂಕರ ಜಯಂತಿಯನ್ನು ಆಚರಿಸಲಾಗುವುದು ಎಂದರು.

ಸರ್.ಎಂ ವಿಶ್ವೇಶ್ವರಯ್ಯನವರು ದಿವಾನರಾಗಿ ಹಳೇ ಮೈಸೂರು ಭಾಗಕ್ಕೆ ಎಲ್ಲಾ ಕ್ಷೇತ್ರಕ್ಕೂ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಅದಕ್ಕಾಗಿ ಮಂಡ್ಯ ಭಾಗದಲ್ಲಿ ಪ್ರತಿಯೊಂದು ಮನೆಯಲ್ಲೂ ಸರ್. ಎಂ ವಿಶ್ವೇಶ್ವರಯ್ಯನವರ ಭಾವಚಿತ್ರವಿದೆ ಎಂದು ಸಚಿವ ಜಿಟಿಡಿ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ