ಆ್ಯಪ್ನಗರ

ಆಕಾಂಕ್ಷಿಗೆ ಬ್ರೇಕ್‌ ಹಾಕಿದ ಬ್ರೇಕಿಂಗ್‌ ನ್ಯೂಸ್‌!

ಟಿವಿ ಚಾನಲ್‌ವೊಂದರಲ್ಲಿ ಪ್ರಸಾರವಾದ ಒಂದು ಸಾಲಿನ ಬ್ರೇಕಿಂಗ್‌ ಚುನಾವಣಾ ಸ್ಪರ್ಧಿಯ ಆಕಾಂಕ್ಷೆಗೆ ಬ್ರೇಕ್‌ ಹಾಕಬಹುದೇ?

Vijaya Karnataka Web 15 Jan 2018, 5:00 am

ಚಿತ್ರದುರ್ಗ: ಟಿವಿ ಚಾನಲ್‌ವೊಂದರಲ್ಲಿ ಪ್ರಸಾರವಾದ ಒಂದು ಸಾಲಿನ ಬ್ರೇಕಿಂಗ್‌ ಚುನಾವಣಾ ಸ್ಪರ್ಧಿಯ ಆಕಾಂಕ್ಷೆಗೆ ಬ್ರೇಕ್‌ ಹಾಕಬಹುದೇ?

ಹೌದು. ಶನಿವಾರ ಸಂಜೆ ಖಾಸಗಿ ಚಾನಲ್‌ ಒಂದರಲ್ಲಿ ಬೆಂಗಳೂರಿನ ರಿಯಲ್‌ ಎಸ್ಟೇಟ್‌ ಪ್ರಕರಣವೊಂದರಲ್ಲಿ ನಾಲ್ಕು ಜನ ಬಂಧಿತರಾಗಿರುವ ಸುದ್ದಿ ಬ್ರೇಕಿಂಗ್‌ನಲ್ಲಿ ಪ್ರಸಾರವಾಯಿತು. ಅದರಲ್ಲಿ ಬೆಂಗಳೂರು ಎಚ್‌ಎಸ್‌ಆರ್‌ ಲೇಔಟ್‌ನ ಕಾಂತರಾಜ್‌ ಗೌಡ ಎಂಬಾತನ ಹೆಸರೂ ಇತ್ತು.

Vijaya Karnataka Web breaking news become controversy
ಆಕಾಂಕ್ಷಿಗೆ ಬ್ರೇಕ್‌ ಹಾಕಿದ ಬ್ರೇಕಿಂಗ್‌ ನ್ಯೂಸ್‌!


ಅವರು'ಕಾಂತರಾಜು' ಚಿತ್ರದುರ್ಗ ಕ್ಷೇತ್ರಕ್ಕೆ ಜೆಡಿಎಸ್‌ ಆಕಾಂಕ್ಷಿ. ಜೆಡಿಎಸ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಾಂತರಾಜ್‌ಗೆ ಶಾಕ್‌ ನೀಡಿತಲ್ಲದೇ, ಬೆಂಬಲಿಗರನ್ನು ತಳಮಳಕ್ಕೆ ತಳ್ಳಿತು. ವಾಟ್ಸಾ ಆ್ಯಪ್‌ ಗ್ರೂಪ್‌ಗಳಲ್ಲೂ ಹರಿದಾಡಿತು.

ಕೂಡಲೇ ಸುದ್ದಿಗೋಷ್ಠಿ ನಡೆಸಿ 'ನಾನವನಲ್ಲ' ಎಂದು ಸ್ಪಷ್ಟಪಡಿಸಿದರು. ಭಾನುವಾರ ಪುನಃ ಸುದ್ದಿಗೋಷ್ಠಿ ನಡೆಸಿ, ''ಚಾನಲ್‌ನ ಬ್ರೇಕಿಂಗ್‌ನ ಕ್ಲಿಪ್‌ ಎಲ್ಲೆಡೆ ಹರಿದಾಡುತ್ತಿದ್ದು, ವಿರೋಧಿಗಳು ಅಪ ಪ್ರಚಾರಕ್ಕೆ ಬಳಸುತ್ತಿದ್ದಾರೆ. ಇದರಿಂದ ನನಗೆ ನೋವಾಗಿದ್ದು, ಮನೆ ಮನೆಗೆ ಹೋಗಿ ಸ್ಪಷ್ಟೀಕರಣ ಕೊಡಲು ಆಗುವುದಿಲ್ಲ. ಆದ್ದರಿಂದ ನಾನು ಸ್ಪರ್ಧೆಯಿಂದ ಹಿಂದೆ ಸರಿಯುತ್ತಿದ್ದೇನೆ' ಎಂದು ಘೋಷಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ