ಮುದ್ದೇಬಿಹಾಳ: ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಐದು ಬಾರಿ ಶಾಸಕ ಸಿ.ಎಸ್.ನಾಡಗೌಡ ಅವರ ಸಹೋದರ ಗಂಗಾಧರರಾವ್ ನಾಡಗೌಡ ಅವರು ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದು, ಮೂರು ದಶಕಕ್ಕೂ ಮಿಗಿಲಾದ ನಾಡಗೌಡ ಕುಟುಂಬದ ರಾಜಕೀಯದಲ್ಲಿ ಬಿರುಕು ಕಾಣಿಸಿಕೊಂಡಿದೆ. ಸೋಮವಾರ ಅವರು ನಾಮಪತ್ರ ಸಲ್ಲಿಸಿದರು. ''ಈಗಾಗಲೇ ನಾನು ಜಿಪಂ ಸದಸ್ಯನಾಗಿ, ಅಧ್ಯಕ್ಷ ನಾಗಿ ರಾಜಕೀಯವಾಗಿ ಬೆಳೆದಿದ್ದೇನೆ. ಆದರೆ ಇತ್ತಿಚಿನ ದಿನಗಳಲ್ಲಿ ತಾಲೂಕಿನಲ್ಲಿ ಆರ್ಥಿಕ ಪರಿಸ್ಥಿತಿ ಸುಧಾರಣೆ ಕಂಡಿಲ್ಲ. ಕೃಷಿಕರು ಬೆಳೆದಂತಹ ಧಾನ್ಯಗಳಿಗೆ ಬೆಲೆ ಇಲ್ಲದಂತಾಗಿದೆ. ಅನೇಕ ಅಭಿವೃದ್ಧಿ ಕೆಲಸಗಳು ಕುಂಠಿತಗೊಳ್ಳುತ್ತಿದೆ,'' ಎಂದು ಪರೋಕ್ಷ ವಾಗಿ ಸಹೋದರ ಶಾಸಕ ಸಿ.ಎಸ್.ನಾಡಗೌಡರ ಮೇಲೆ ಹರಿಹಾಯ್ದರು.
ಮುದ್ದೇಬಿಹಾಳದಲ್ಲಿ ಸಹೋದರರ ಸವಾಲ್
ವಿಜಯಪುರ ಜಿಲ್ಲೆ ಮುದ್ದೇಬಿಹಾಳ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಐದು ಬಾರಿ ಶಾಸಕ ಸಿಎಸ್...
Vijaya Karnataka 24 Apr 2018, 5:00 am