ಆ್ಯಪ್ನಗರ

ವಿಜಯ ದಿವಸದಂದೇ ಬಿಎಸ್‌ವೈ ಪ್ರಮಾಣ!: ರಾಜಭವನದ ಸುತ್ತ ಕಿಕ್ಕಿರಿದ ಜನ

ಭರಣಿ ನಕ್ಷತ್ರ ಹಾಗೂ ಕಾರ್ಗಿಲ್‌ ವಿಜಯ್‌ ದಿವಸ್‌ನಂದೆ ಬಿಎಸ್‌ವೈ ರಾಜ್ಯದ 24ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಹಸಿರು ಶಾಲು ಧರಿಸಿದ್ದ ಬಿಎಸ್‌ವೈ ಗೆ ರಾಜಭವನದ ಸುತ್ತ ಕಿಕ್ಕಿರಿದು ತುಂಬಿದ್ದ ಜನ, ಜೈಕಾರ ಹಾಕಿ ಬರಮಾಡಿಕೊಂಡರು.

Vijaya Karnataka Web 26 Jul 2019, 6:52 pm
ಬೆಂಗಳೂರು: ಯಡಿಯೂರಪ್ಪ ಅವರಿಗೆ ಜೈ ಎಂಬ ಜಯಘೋಷಗಳೊಂದಿಗೆ ರಾಜಭವನಕ್ಕೆ ಆಗಮಿಸಿದ ಬಿಎಸ್‌ ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಆಗಮಿಸಿದರು.
Vijaya Karnataka Web bs yeddyurappa takes oath as chief minister of karnataka things you need to know what all happened
ವಿಜಯ ದಿವಸದಂದೇ ಬಿಎಸ್‌ವೈ ಪ್ರಮಾಣ!: ರಾಜಭವನದ ಸುತ್ತ ಕಿಕ್ಕಿರಿದ ಜನ


ಇದಕ್ಕೂ ಮುನ್ನ ಮಲ್ಲೇಶ್ವರಂನಲ್ಲಿರುವ ಕಾಡು ಮಲ್ಲೇಶ್ವರ ದೇವಾಲಯಕ್ಕೆ ಭೇಟಿ ನೀಡಿ, ವಿಶೇಷ ಪ್ರಾರ್ಥನೆ ಸಲ್ಲಿಸಿದರ ಬಿಎಸ್‌ ಯಡಿಯೂರಪ್ಪ, ಬಳಿಕ ಬಿಜೆಪಿ ಕಚೇರಿಗೆ ತೆರಳಿದರು.


ಬೆಳಗ್ಗೆ ರಾಜಭವನಕ್ಕೆ ಭೇಟಿ ನೀಡಿ ಸರಕಾರ ರಚನೆಗೆ ಅವಕಾಶ ನೀಡಲು ಅನುಮತಿ ಕೇಳಿದ್ದ ಯಡಿಯೂರಪ್ಪ ಅವರು, ಮಧ್ಯಾಹ್ನ ಬಳಿಕ ಸಂಪೂರ್ಣ ಬ್ಯುಸಿಯಾದರು. ಆತುರದಲ್ಲೇ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮ ನಿಗದಿ ಮಾಡಲಾಗಿದೆ. ಮಧ್ಯಾಹ್ಯ 2 ರ ವೇಳೆ ಬೆಂಗಳೂರಿನಲ್ಲಿರುವ ಯೋಧರ ಸ್ಮಾರಕಕ್ಕೆ ತೆರಳಿ, ಕಾರ್ಗಿಲ್‌ ಯುದ್ಧದಲ್ಲಿ ಮಡಿದ ಸೈನಿಕರಿಗೆ ಗೌರವ ಸಲ್ಲಿಸಿದ್ದರು.

ಹಸಿರು ಶಾಲು ಹೊದ್ದ ಬಿಎಸ್‌ವೈ
ನಾಲ್ಕನೇ ಬಾರಿಗೆ ಯಡಿಯೂರಪ್ಪ ಪ್ರಮಾಣವಚನ ಸ್ವೀಕಾರಕ್ಕೆ ಆಗಮಿಸುವ ವೇಳೆ ಹಸಿರು ಶಾಲು ಹೊದ್ದಿದ್ದರು. ಮೊದಲ ಬಾರಿಗೆ ಸಿಎಂ ಆಗುವ ವೇಳೆ ಯಡಿಯೂರಪ್ಪ ಹಸಿರು ಶಾಲು ಧರಿಸಿದ್ದರು. ಅಷ್ಟೇ ಅಲ್ಲದೆ ರೈತರ ಮೇಲೆ ಪ್ರಮಾಣ ಮಾಡಿ ಪ್ರಮಾಣ ವಚನ ಸ್ವೀಕರಿಸಿದ್ದರು. ರೈತರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಬಿಎಸ್‌ವೈ ಹಸಿರು ಶಾಲು ಧರಿಸುತ್ತಾರೆ ಎನ್ನಲಾಗುತ್ತದೆ.

ನಾಲ್ಕನೇ ಬಾರಿ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಪ್ರಮಾಣ ವಚನ


ಮೋದಿಗೂ ಜೈಕಾರ
ರಾಜಭವನದ ಸುತ್ತ ಕಿಕ್ಕಿರುದು ತುಂಬಿದ್ದ ಜನರು ಬಿಎಸ್‌ ಯಡಿಯೂರಪ್ಪ ಹಾಗೂ ಪ್ರಧಾನಿ ಮೋದಿಗೆ ಜೈಕಾರ ಹಾಕಿದರು. ರಾಜಭವನದ ಗಾಜಿನಮನೆಯ ತುಂಬಿ ಹೋಗಿದ್ದರಿಂದ ರಾಜಭವನ ಪ್ರವೇಶಕ್ಕೆ ನೂಕನುಗ್ಗಲು ಉಂಟಾದ ಘಟನೆಯೂ ನಡೆಯಿತು. ಪಾಸ್‌ ಇದ್ದವರಿಗೂ ಪೊಲೀಸರು ಗೇಟ್‌ನಲ್ಲೇ ತಡೆದರು.

ಸಿಎಂ ಆಗುವುದಕ್ಕೂ ಮುನ್ನವೇ ಸಿಎಸ್‌ಗೆ ಸೂಚನೆ ಕೊಟ್ಟ ಬಿಎಸ್‌ವೈ: ಜುಲೈನಲ್ಲಿ ಆದ ಆದೇಶಗಳಿಗೆ ಬ್ರೇಕ್‌

ಭರಣಿ ನಕ್ಷತ್ರ- ಕಾರ್ಗಿಲ್‌ ವಿಜಯ ದಿನ

ಭರಣಿ ನಕ್ಷತ್ರದ ದಿನ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿರುವುದು ಕೆಲವೆಡೆ ಚರ್ಚೆಗೆ ಕಾರಣವಾದರೆ, ಮತ್ತೊಂದೆಡೆ ಇಂದು ಭಾರತಕ್ಕೆ ವಿಜಯದ ದಿನ. ಕಾರ್ಗಿಲ್‌ ವಿಜಯೋತ್ಸವ ದಿನ. ಅತಿ ಶ್ರೇಷ್ಠವಾದ ದಿನದಂದು ಬಿಎಸ್‌ ವೈ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ ಎಂದು ಚರ್ಚೆಯಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ