ಆ್ಯಪ್ನಗರ

ಹೆಕ್ಟೇರ್‌ಗೆ 10 ಸಾವಿರ ರೂ. ಹೆಚ್ಚುವರಿ ಪರಿಹಾರ, ಯಡಿಯೂರಪ್ಪ ಘೋಷಣೆ

​"​​ಜಿಲ್ಲೆ ಹಾಗೂ ಪಟ್ಟಣ ಪ್ರದೇಶದಲ್ಲಿ ನೀರು ನುಗ್ಗಿ ಹಾನಿಗೊಂಡ ಅಂಗಡಿಗಳಿಗೆ 20 ಸಾವಿರ, ಜತೆಗೆ ನೇಕಾರರ ಕೈಮಗ್ಗಗಳು ಹಾನಿಗೊಂಡಿದ್ದರೆ 25 ಸಾವಿರ ರೂ. ಪರಿಹಾರ ನೀಡುತ್ತೇವೆ," ಎಂಬುದಾಗಿ ಯಡಿಯೂರಪ್ಪ ಮಾಹಿತಿ ನೀಡಿದರು.

Vijaya Karnataka 11 Oct 2019, 11:21 pm

ಬೆಂಗಳೂರು: ಪ್ರವಾಹದಿಂದ ಹಾನಿಗೊಂಡ ಕೃಷಿ ಹಾಗೂ ತೋ ಟಗಾರಿಕಾ ಬೆಳೆಗಳಿಗೆ ಎನ್‌ಡಿಆರ್‌ಎಫ್‌ ಮಾರ್ಗಸೂಚಿ ಪರಿಹಾರ ಧನದ ಜತೆಗೆ ರಾಜ್ಯ ಸರಕಾರ ತನ್ನ ಬೊಕ್ಕಸದಿಂದ ಪ್ರತಿ ಹೆಕ್ಟೇರ್‌ಗೆ 10 ಸಾವಿರ ರೂ. ಹೆಚ್ಚುವರಿ ಪರಿಹಾರ ನೀಡಲು ನಿರ್ಧರಿಸಿದೆ.
Vijaya Karnataka Web BS Yediyurappa


ಕಾಂಗ್ರೆಸ್‌, ಜೆಡಿಎಸ್‌ ಮಂಡಿಸಿದ್ದ ನಿರ್ಣಯದ ಮೇಲಿನ ಚರ್ಚೆಗೆ ಉತ್ತರಿಸಿದ ಸಿಎಂ ಬಿ.ಎಸ್‌.ಯಡಿಯೂರಪ್ಪ, ''ಅಡಕೆ, ರೇಷ್ಮೆಯಂಥ ವಾಣಿಜ್ಯ ಬೆಳೆಗಳಿಗೂ ಪರಿಹಾರ ನೀಡಲು ಸರಕಾರ ನಿರ್ಧರಿಸಿದೆ. ಇದುವರೆಗೆ 2,950 ಕೋಟಿ ರೂ. ಪರಿಹಾರ ಧನ ಬಿಡುಗಡೆ ಮಾಡಲಾಗಿದ್ದು, ಈ ಹಿಂದಿನ ಯಾವ ಸರಕಾರವೂ ಇಷ್ಟೊಂದು ಉದಾರವಾಗಿ ಪರಿಹಾರ ನೀಡಿರಲಿಲ್ಲ,'' ಎಂದು ಸ್ಪಷ್ಟಪಡಿಸಿದರು.

ಮನಸ್ಸು ಮಾಡಿದರೆ ಪರಿಹಾರಕ್ಕೆ 15,000 ಕೋಟಿ ರೂ. ಹೊಂದಿಸಬಹುದು: ಎಚ್‌ಡಿಕೆ

"ಜಿಲ್ಲೆ ಹಾಗೂ ಪಟ್ಟಣ ಪ್ರದೇಶದಲ್ಲಿ ನೀರು ನುಗ್ಗಿ ಹಾನಿಗೊಂಡ ಅಂಗಡಿಗಳಿಗೆ 20 ಸಾವಿರ, ಜತೆಗೆ ನೇಕಾರರ ಕೈಮಗ್ಗಗಳು ಹಾನಿಗೊಂಡಿದ್ದರೆ 25 ಸಾವಿರ ರೂ. ಪರಿಹಾರ ನೀಡುತ್ತೇವೆ," ಎಂಬುದಾಗಿ ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಸೂರು ಕಲ್ಪಿಸಲು ಬದ್ಧ


"ಒಂದೇ ಮನೆಯಲ್ಲಿ ಮೂರು ಕುಟುಂಬಗಳಿದ್ದರೆ ಅವರಿಗೂ ಮನೆ ಕಟ್ಟಿಕೊಡುತ್ತೇವೆ. ಈ ನೆಪದಲ್ಲಾದರೂ ಅವರಿಗೊಂದು ಸೂರು ದೊರೆಯಲಿ. ಅದೇ ರೀತಿ ನದಿ ಪಾತ್ರದಲ್ಲಿ ನೆಲೆಸಿರುವ ಜನರು ಈಗಿರುವ ಸ್ಥಳವನ್ನು ಬಿಟ್ಟು ಬೇರೆಡೆಗೆ ಸ್ಥಳಾಂತರಗೊಳ್ಳುವುದಿದ್ದರೆ ಅವರಿಗೂ ಮನೆ ನಿರ್ಮಿಸಿಕೊಡುತ್ತೇವೆ,'' ಎಂದು ಸಿಎಂ ಹೇಳಿದರು.

ಸಂತ್ರಸ್ತರಿಗೆ ಆರ್‌ಟಿಜಿಎಸ್‌ ಮೂಲಕ ಪರಿಹಾರ ವಿತರಣೆ: ಕಂದಾಯ ಸಚಿವ ಅಶೋಕ್‌

''ಹಾನಿಗೊಂಡ ಮನೆಗಳನ್ನು ಎ, ಬಿ, ಸಿ ಎಂದು ವರ್ಗೀಕರಿಸಿದ್ದೇವೆ. ವಾಸ ಯೋಗ್ಯವಲ್ಲದ 42,893 ಮನೆಗಳಿಗೆ ತಲಾ 5 ಲಕ್ಷ ರೂ. ಪರಿಹಾರ ನೀಡಲಾಗಿದೆ. ಸಿ ವರ್ಗದ 77,513 ಮನೆಗಳಿಗೆ ಈ ಹಿಂದೆ ನೀಡಲು ನಿರ್ಧರಿಸಿದ್ದ 25 ಸಾವಿರ ರೂ. ಪರಿಹಾರವನ್ನು 50 ಸಾವಿರಕ್ಕೆ ಹೆಚ್ಚಿಸಲಾಗುವುದು. ಹಾನಿಗೊಂಡ ರಸ್ತೆಗಳ ನಿರ್ಮಾಣಕ್ಕೆ 8 ಸಾವಿರ ಕೋಟಿ ರೂ. ಅಗತ್ಯವಿದ್ದು, ಪ್ರಾಥಮಿಕ ಹಂತದಲ್ಲಿ 500 ಕೋಟಿ ರೂ. ಬಿಡುಗಡೆ ಆಗಿದೆ,'' ಎಂದರು.

ಬೆಳೆ ಪರಿಹಾರ

ಸ್ವರೂಪ ಎನ್‌ಡಿಆರ್‌ಎಫ್‌ರಾಜ್ಯದ ಪಾಲು ಟ್ಟು
ಖುಷ್ಕಿ 6,800 10,00016,800
ತೋಟಗಾರಿಕೆ 13,500 10,000 23,500
ಶಾಶ್ವತ ನೀರಾವರಿ18,000 10,000 28,000
(ಪ್ರತಿ ಹೆಕ್ಟೇರ್‌ಗೆ)

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ