ಆ್ಯಪ್ನಗರ

ಮೈತ್ರಿ ಸರಕಾರದ ಬೆಂಬಲವಾಗಿದ್ದೇನೆ; ರಾಜೀನಾಮೆಯ ಪ್ರಶ್ನೆಯೇ ಇಲ್ಲ: ಎನ್. ಮಹೇಶ್‌

ಮಧ್ಯಂತರ ಚುನಾವಣೆ ಅನಿವಾರ್ಯವಾದರೆ ಮತದಾನ ಮಾಡಬೇಡಿ. ವೋಟಿಂಗ್ ಡಬ್ಬ ಖಾಲಿ ಕಳುಹಿಸಲು ಮತದಾರರಿಗೆ ಕರೆ ನೀಡುವೆ. ಇಂತಹ ಪರಿಸ್ಥಿತಿ ಉಂಟಾಗಿದ್ದು ಬೇಸರ ಮತ್ತು ವಿಷಾದದ ಸಂಗತಿ ಎಂದು ಸಹ ಸದ್ಯದ ರಾಜಕೀಯ ಬೆಳವಣಿಗೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

Vijaya Karnataka Web 9 Jul 2019, 5:09 pm
ಬೆಂಗಳೂರು: ಮುಳುಗುತ್ತಿರುವವರಿಗೆ ಹುಲ್ಲು ಕಡ್ಡಿಯೂ ಆಸರೆ ಅನ್ನುವಂತೆ ರಾಜ್ಯದ ಸಮ್ಮಿಶ್ರ ಸರಕಾರಕ್ಕೆ ಅಲ್ಪ ಸಮಾಧಾನ ದೊರೆತಿದೆ. ಶಾಸಕರೊಬ್ಬರು ನಾನು ಮೈತ್ರಿ ಸರ್ಕಾರದ ಬೆಂಬಲವಾಗಿದ್ದೇನೆ. ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.
Vijaya Karnataka Web n. mahesh


ಬಿಎಸ್‌ಪಿ ಶಾಸಕ ಎನ್.ಮಹೇಶ್ ಈ ರೀತಿ ಸಮ್ಮಿಶ್ರ ಸರಕಾರಕ್ಕೆ ಹುಲ್ಲು ಕಡ್ಡಿಯಂತೆ ಆಸರೆಯಾಗಿದ್ದಾರೆ. ಮಹೇಶ್‌ ಸಹ ಸಮ್ಮಿಶ್ರ ಸರಕಾರಕ್ಕೆ ನೀಡಿರುವ ಬೆಂಬಲವನ್ನು ಹಿಂಪಡೆದುಕೊಳ್ಳಲಿದ್ದಾರೆ ಎಂಬ ಮಾತುಗಳು ಹಲವೆಡೆ ಕೇಳಿ ಬರುತ್ತಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿದ ಮಾಜಿ ಸಚಿವ ಮಹೇಶ್‌, ನಾನು ಮೈತ್ರಿ ಸರ್ಕಾರದ ಬೆಂಬಲವಾಗಿದ್ದೇನೆ. ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ.

ಬೆಂಗಳೂರಿನ ಸ್ಪೀಕರ್‌ ಕಚೇರಿ ಬಳಿ ಮಾಹಿತಿ ನೀಡಿದ ಬಿಎಸ್‌ಪಿ ಶಾಸಕ ಮಹೇಶ್‌, ''ನಾನು ಮೈತ್ರಿ ಸರಕಾರದ ಬೆಂಬಲವಾಗಿದ್ದೇನೆ. ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಅಧಿವೇಶನದಲ್ಲಿ ಕೆಲ ವಿಷಯ ಚರ್ಚೆ ಬಗ್ಗೆ ಮಾತನಾಡಲು ಬಂದಿದ್ದೆ. '' ಎಂದಿದ್ದಾರೆ.

ಅಲ್ಲದೆ, ''ಮಧ್ಯಂತರ ಚುನಾವಣೆ ಅನಿವಾರ್ಯವಾದರೆ ಮತದಾನ ಮಾಡಬೇಡಿ. ವೋಟಿಂಗ್ ಡಬ್ಬ ಖಾಲಿ ಕಳುಹಿಸಲು ಮತದಾರರಿಗೆ ಕರೆ ನೀಡುವೆ. ಇಂತಹ ಪರಿಸ್ಥಿತಿ ಉಂಟಾಗಿದ್ದು ಬೇಸರ ಮತ್ತು ವಿಷಾದದ ಸಂಗತಿ'' ಎಂದು ಸಹ ಸದ್ಯದ ರಾಜಕೀಯ ಬೆಳವಣಿಗೆ ಬಗ್ಗೆ ಪ್ರಶ್ನೆ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ