ಆ್ಯಪ್ನಗರ

ಒಂದೇ ತಿಂಗಳಲ್ಲಿ ಬಿಎಸ್‌ವೈ ಇಬ್ಬರು ಆಪ್ತ ಅಧಿಕಾರಿ ಎತ್ತಂಗಡಿ: ಹೈ ಕಮಾಂಡ್ ಸೂಚನೆಯ ಅನುಮಾನ

ಕೆಲವೇ ದಿನದಲ್ಲಿ ಇಬ್ಬರು ಅಧಿಕಾರಿಗಳ ವಿರುದ್ಧ ಶಾಸಕರು ಅಪಸ್ವರ ತೆಗೆದಿದ್ದರು. ಜನಪ್ರತಿನಿಧಿಗಳಿಗೆ ಗೌರವ ನೀಡುತ್ತಿಲ್ಲ.

Vijaya Karnataka 20 Oct 2019, 10:22 am
ಬೆಂಗಳೂರು: ಒಂದೇ ತಿಂಗಳ ಅವಧಿಯಲ್ಲಿಇಬ್ಬರು ಆಪ್ತ ಅಧಿಕಾರಿಗಳನ್ನು ಸಿಎಂ ಯಡಿಯೂರಪ್ಪ ಹಠಾತ್‌ ಬೇರೆ ಕಡೆ ಸ್ಥಳಾಂತರಿಸಿರುವುದು ಆಡಳಿತಾತ್ಮಕ ಹಾಗೂ ರಾಜಕೀಯದಲ್ಲಿತೀವ್ರ ಚರ್ಚೆಗೆ ಕಾರಣವಾಗಿದೆ. ಆಡಳಿತದಲ್ಲಿ ದಕ್ಷತೆ, ವೇಗ ಹಾಗೂ ಪಾರದರ್ಶಕ ತರುವಂತೆ ಬಿಜೆಪಿಯ ಹೈಕಮಾಂಡ್‌ ಸೂಚನೆ ನೀಡಿದ ಹಿನ್ನಲೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ವರ್ಗಾವಣೆ ಮಾಡಿದ್ದಾರೆ ಎನ್ನಲಾಗಿದೆ. ಶನಿವಾರ ಸಂಜೆ ಕಳಸದ್‌ ವರ್ಗಾವಣೆ­ಗೊಳಿಸಲಾಗಿದೆ.
Vijaya Karnataka Web ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿದ  cm


ಅವರ ಸ್ಥಾನಕ್ಕೆ ಡಾ.ಎಸ್‌.ಸೆಲ್ವಕುಮಾರ್‌ ನೇಮಕಗೊಂಡಿದ್ದಾರೆ. ಮೈತ್ರಿ ಸರಕಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ­ಯವರಿಗೆ ಸೆಲ್ವಕುಮಾರ್‌ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಅದೇ ರೀತಿ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತ ಡಾ.ಆರ್‌.ವಿಶಾಲ್‌ ಅವರನ್ನು ಮುಖ್ಯಮಂತ್ರಿ ಕಚೇರಿ ಹೆಚ್ಚು­ವರಿ ಕಾರ್ಯದರ್ಶಿಯಾಗಿ ನಿಯೋಜನೆ­ಗೊಳಿಸಲಾಗಿದೆ. ರಾಜ್ಯದಲ್ಲಿಸಾಕಷ್ಟು ಮಳೆಯಾಗಿದ್ದರೂ ಮೋಡ ಬಿತ್ತನೆಗೆ ಸಿದ್ಧತೆ ನಡೆಸಿದ ಸಲುವಾಗಿ ಸಚಿವ ಕೆ.ಎಸ್‌.ಈಶ್ವರಪ್ಪ ವಾರದ ಹಿಂದಷ್ಟೇ ವಿಶಾಲ್‌ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಹೀಗಾಗಿ ಈ ವರ್ಗಾವಣೆಗೂ ಮಹತ್ವ ಲಭಿಸಿದೆ. ಬಿಎಸ್‌ವೈ ಆಪ್ತರು: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಶಿವಯೋಗಿ ಸಿ. ಕಳಸದ್‌ ಹಾಗೂ ವಿ.ಪಿ.ಇಕ್ಕೇರಿಯವರನ್ನು ಕಾರ್ಯದರ್ಶಿಯಾಗಿ ಯಡಿಯೂರಪ್ಪ ನೇಮಕಗೊಳಿಸಿಕೊಂಡಿದ್ದರು. ಆದರೆ

ಕೆಲವೇ ದಿನದಲ್ಲಿ ಇಬ್ಬರು ಅಧಿಕಾರಿಗಳ ವಿರುದ್ಧ ಶಾಸಕರು ಅಪಸ್ವರ ತೆಗೆದಿದ್ದರು. ಜನಪ್ರತಿನಿಧಿಗಳಿಗೆ ಗೌರವ ನೀಡುತ್ತಿಲ್ಲ.

ಕಡತ ವಿಲೇವಾರಿಯಲ್ಲೂವಿಳಂಬವಾಗುತ್ತಿತ್ತು. ಈ ಮಧ್ಯೆ ಕಳಸದ್‌ ಹಾಗೂ ಇಕ್ಕೇರಿ ವಿರುದ್ಧ ಬೆಂಗಳೂರು ನಗರದ ಶಾಸಕರು ಸಂಘ-ಪರಿವಾರದ ಮುಖಂಡರ ಬಳಿ ದೂರು ನೀಡಿದ್ದರು. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಬಳಿಯೂ ಅಳಲು ತೋಡಿಕೊಳ್ಳಲಾಗಿತ್ತು ಎನ್ನಲಾಗಿದೆ. ಈ ಮಧ್ಯೆ ಪ್ರಧಾನಿ ಕಚೇರಿ ಮಾದರಿಯಲ್ಲಿಮುಖ್ಯಮಂತ್ರಿ ಕಚೇರಿ ಚುರುಕುಗೊಳಿಸಲು ಸಿದ್ಧತೆ ನಡೆಸಲಾಗಿದೆ. ಸರಕಾರಕ್ಕೆ ನಿರೀಕ್ಷಿತ ಮಟ್ಟದಲ್ಲಿವೇಗ ದೊರೆತಿಲ್ಲ. ಪ್ರವಾಹ ನಿರ್ವಹಣೆ ಸಂದರ್ಭದಲ್ಲಿಕೇಂದ್ರ ಹಾಗೂ ರಾಜ್ಯ ಸರಕಾರದ ಮಧ್ಯೆ ನಿರೀಕ್ಷಿತ ಸಮನ್ವಯ ಸಾಧಿಸಲು ಇವರಿಬ್ಬರೂ ವಿಫಲರಾದರು ಎಂಬ ಆರೋಪವೂ ಎದುರಾಗಿದೆ. ಹೀಗಾಗಿ ಇಬ್ಬರು ಆಪ್ತ ಅಧಿಕಾರಿಗಳನ್ನು ಸ್ಥಳಾಂತರಿಸಿದ್ದಾರೆ. ಬಿತ್ತನೆ ರೂವಾರಿ: ಅದೇ ರೀತಿ ಮುಖ್ಯಮಂತ್ರಿ ಹೆಚ್ಚುವರಿ ಕಾರ್ಯದರ್ಶಿಯಾಗಿ ವರ್ಗಾವಣೆಗೊಂಡಿರುವ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಆಯುಕ್ತ ಡಾ. ಆರ್‌.ವಿಶಾಲ್‌ ರಾಜ್ಯ ಪ್ರವಾಹ ಸಂತ್ರಸ್ತವಾಗಿರುವ ಸಂದರ್ಭದಲ್ಲಿವಿಶಾಲ್‌ ಮೋಡ ಬಿತ್ತನೆ ಯೋಜನೆಗೆ ಸಿದ್ಧತೆ ನಡೆಸಿದ್ದರು. ಈ ಬಗ್ಗೆ 'ವಿಜಯ ಕರ್ನಾಟಕ'ದಲ್ಲಿವಿಶೇಷ ವರದಿ ಪ್ರಕಟವಾಗಿತ್ತು. ಇದಕ್ಕೆ ಸಚಿವ ಈಶ್ವರಪ್ಪ ತೀವ್ರ ತರಾಟೆಗೆ ತೆಗೆದುಕೊಂಡಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ