ಆ್ಯಪ್ನಗರ

ಒಬ್ಬರೇ ಇದ್ರೂ ಸರಕಾರ: ಸಿಎಂ

ಒಬ್ಬರೇ ಇದ್ದರೂ ಸರಕಾರವೇ. ಪ್ರಗತಿ ಪರಿಶೀಲನೆ ಸಭೆ ನಡೆಸಲು ತೊಂದರೆಯಿಲ್ಲವೆಂದು ಸಿಎಂ ಬಿ.ಎಸ್‌.ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದಾರೆ.

Vijaya Karnataka 3 Aug 2019, 8:04 am
ಬೆಂಗಳೂರು : ಒಬ್ಬರೇ ಇದ್ದರೂ ಸರಕಾರವೇ. ಪ್ರಗತಿ ಪರಿಶೀಲನೆ ಸಭೆ ನಡೆಸಲು ತೊಂದರೆಯಿಲ್ಲವೆಂದು ಸಿಎಂ ಬಿ.ಎಸ್‌.ಯಡಿಯೂರಪ್ಪ ಸಮರ್ಥಿಸಿಕೊಂಡಿದ್ದಾರೆ.
Vijaya Karnataka Web BSY 1200


ಸಂಪುಟ ರಚನೆಯಾಗದೇ ಪ್ರಮುಖ ಸಭೆ ಹಾಗೂ ವರ್ಗಾವಣೆ ಪ್ರಕ್ರಿಯೆ ಕೈಗೊಳ್ಳುವುದು ಸಾಧುವಾ ಎಂದು ಕೇಳಲಾಯಿತು. ಪ್ರತಿಕ್ರಿಯಿಸಿದ ಅವರು, ಒಬ್ಬರಿದ್ದರೂ ಸರಕಾರವೇ. 25 ಜನರಿದ್ದರೂ ಸರಕಾರವೇ. ಸರಕಾರದಲ್ಲಿ ವರ್ಗಾವಣೆ ನಡೆಯುವುದು ಸಹಜ ಪ್ರಕ್ರಿಯೆ ಎಂದರು.

ಆಗಸ್ಟ್‌ 6ಕ್ಕೆ ದಿಲ್ಲಿಗೆ

ಆಗಸ್ಟ್‌ 6, 7, 8ರಂದು ದಿಲ್ಲಿಗೆ ಭೇಟಿ ನೀಡಲಾಗುವುದು. ಈ ವೇಳೆ ಸಂಪುಟ ವಿಸ್ತರಣೆ ಬಗ್ಗೆ ಹೈಕಮಾಂಡ್‌ನೊಂದಿಗೆ ಚರ್ಚಿಸಲಾಗುವುದು. ವರಿಷ್ಠರ ಅನುಮತಿಯೊಂದಿಗೆ ಸಂಪುಟ ವಿಸ್ತರಿಸಲಾಗುವುದು ಎಂದು ಹೇಳಿದರು. ರೈತರ ಸಾಲ ಮನ್ನಾ ಸಂಬಂಧ ಅಂಕಿ, ಅಂಶ ತರಿಸಿಕೊಳ್ಳಲಾಗಿದೆ. ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ