ಬೆಂಗಳೂರು: ಜೆಡಿಎಸ್ ನಾಯಕ ಸಾರಾ ಮಹೇಶ್ ಮತ್ತು ರಾಜ್ಯ ಬಿಜೆಪಿ ಉಸ್ತುವಾರಿ ಮುರಳಿಧರ ರಾವ್ ಗುಪ್ತ ಗುಪ್ತ ಮಾತುಕತೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಈ ಹಿಂದೆ ಜೆಡಿಎಸ್ ಜತೆ ಸರಕಾರ ರಚಿಸಿ ಸೋತು ಹೋಗಿದ್ದೇವೆ. ಈಗ ಅವರ ಜತೆ ಸರಕಾರ ರಚಿಸಲು ಸಾಧ್ಯವೆ ಪ್ರಶ್ನಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್-ಬಿಜೆಪಿ ನಾಯಕರ ಭೇಟಿ ಕಾಕತಾಳೀಯ ಅಷ್ಟೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಅತೃಪ್ತ ಶಾಸಕರ ಸರಣಿ ರಾಜೀನಾಮೆಯಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಗುಡುಕು ಜೀವ ಉಳಿಸಿಕೊಂಡ ಪರದಾಡುತ್ತಿರುವ ಬೆನ್ನಲ್ಲೆ ಸಿಎಂ ಕುಮಾರಸ್ವಾಮಿ ಆಪ್ತ ಸಾರಾ ಮಹೇಶ್ ಅವರು ಬಿಜೆಪಿ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಮತ್ತೊಮ್ಮೆ ಬಿಜೆಪಿ-ಜೆಡಿಎಸ್ ಸರಕಾರ ರಚನೆಯಾಗುವುದೇ ಎಂಬ ಉಹಾಪೋಹಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದ್ದವು.
ಸತ್ತರೂ ಜೆಡಿಎಸ್ ಜತೆ ಹೋಗಲ್ಲ
ಬಿಜೆಪಿ-ಜೆಡಿಎಸ್ ಸರಕಾರ ರಚನೆ ಕುರಿತು ಉಹಾಪೋಹಗಳನ್ನು ಬಿಜೆಪಿ ಮುಖಂಡ ರೇಣುಕಾಚಾರ್ಯ ಕೂಡ ತಳ್ಳಿ ಹಾಕಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, 20-20 ಸರಕಾರ ಇದ್ದಾಗಲೇ ಜೆಡಿಎಸ್ನವರ ಆಟ ನೋಡಿದ್ದೇವೆ. ನಾವು ಸತ್ತರೂ ಜೆಡಿಎಸ್ ಜತೆ ಹೋಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೆಡಿಎಸ್-ಬಿಜೆಪಿ ನಾಯಕರ ಭೇಟಿ ಕಾಕತಾಳೀಯ ಅಷ್ಟೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅವಶ್ಯಕತೆ ಇಲ್ಲ ಎಂದಿದ್ದಾರೆ.
ಅತೃಪ್ತ ಶಾಸಕರ ಸರಣಿ ರಾಜೀನಾಮೆಯಿಂದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಗುಡುಕು ಜೀವ ಉಳಿಸಿಕೊಂಡ ಪರದಾಡುತ್ತಿರುವ ಬೆನ್ನಲ್ಲೆ ಸಿಎಂ ಕುಮಾರಸ್ವಾಮಿ ಆಪ್ತ ಸಾರಾ ಮಹೇಶ್ ಅವರು ಬಿಜೆಪಿ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದು, ಮತ್ತೊಮ್ಮೆ ಬಿಜೆಪಿ-ಜೆಡಿಎಸ್ ಸರಕಾರ ರಚನೆಯಾಗುವುದೇ ಎಂಬ ಉಹಾಪೋಹಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದ್ದವು.
ಸತ್ತರೂ ಜೆಡಿಎಸ್ ಜತೆ ಹೋಗಲ್ಲ
ಬಿಜೆಪಿ-ಜೆಡಿಎಸ್ ಸರಕಾರ ರಚನೆ ಕುರಿತು ಉಹಾಪೋಹಗಳನ್ನು ಬಿಜೆಪಿ ಮುಖಂಡ ರೇಣುಕಾಚಾರ್ಯ ಕೂಡ ತಳ್ಳಿ ಹಾಕಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು, 20-20 ಸರಕಾರ ಇದ್ದಾಗಲೇ ಜೆಡಿಎಸ್ನವರ ಆಟ ನೋಡಿದ್ದೇವೆ. ನಾವು ಸತ್ತರೂ ಜೆಡಿಎಸ್ ಜತೆ ಹೋಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.