ಆ್ಯಪ್ನಗರ

ಬಿಎಸ್‌ವೈ ಟ್ರ್ಯಾಪ್‌ಗೆ ವಿಫಲ ಯತ್ನ

ಆನಂದಸಿಂಗ್‌ ರಾಜೀನಾಮೆ ಪ್ರಕರಣದ ಬೆನ್ನಲ್ಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್‌...

Vijaya Karnataka 4 Jul 2019, 5:00 am
ಬೆಂಗಳೂರು: ಆನಂದಸಿಂಗ್‌ ರಾಜೀನಾಮೆ ಪ್ರಕರಣದ ಬೆನ್ನಲ್ಲೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರನ್ನು 'ಟ್ರ್ಯಾಪ್‌ ' ಮಾಡುವುದಕ್ಕೆ ವಿಫಲ ಯತ್ನ ನಡೆದಿದೆ ಎಂಬ ಮಾಹಿತಿ ಈಗ ಬಿಜೆಪಿ ವಲಯದಿಂದ ಬಿತ್ತರವಾಗಲಾರಂಭಿಸಿದೆ.
Vijaya Karnataka Web bsy trap
ಬಿಎಸ್‌ವೈ ಟ್ರ್ಯಾಪ್‌ಗೆ ವಿಫಲ ಯತ್ನ


ತಮ್ಮನ್ನು ಶಾಸಕರು ಎಂದು ಪರಿಚಯಿಸಿಕೊಂಡ ನಾಲ್ವರು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರಿಗೆ ಕರೆ ಮಾಡಿ 'ಕಂಗ್ರಾಜ್ಯುಲೇಷÜನ್‌ ಸರ್‌. ಪ್ರಮಾಣ ವಚನ ಸ್ವೀಕಾರಕ್ಕೆ ಯಾವಾಗ ಮುಹೂರ್ತ ನಿಗದಿಯಾಗಿದೆ. ನಾವು ಕೂಡಾ ನಿಮ್ಮ ಜತೆ ಬಂದು ಬಿಡುತ್ತೇವೆ 'ಎಂದು ಮಾತುಕತೆಗೆ ಪೀಠಿಕೆ ಹಾಕಿದ್ದರು ಎನ್ನಲಾಗಿದೆ. ಆದರೆ ಅಪಾಯದ ವಾಸನೆ ಅರಿತ ಯಡಿಯೂರಪ್ಪ ಬಯ್ದು ದೂರವಾಣಿ ಕರೆ ಕಡಿತ ಮಾಡಿದರು ಎಂದು ತಿಳಿದು ಬಂದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ