ಆ್ಯಪ್ನಗರ

ಲಾಕ್‌ಡೌನ್ ಅವಧಿಯಲ್ಲೊಂದು ಬುದ್ಧ ಪೂರ್ಣಿಮೆ, ಫೇಸ್‌‌ಬುಕ್‌ನಲ್ಲಿ ‘ಪ್ರಬುದ್ಧ ಲೈವ್’ ಅಭಿಯಾನ

ಲಾಕ್‌ಡೌನ್ ಅವಧಿಯಲ್ಲಿ ಯಾವುದೇ ಸಭೆ ಸಮಾರಂಭಗಳನ್ನು ನಡೆಸಲು ಅವಕಾಶವಿಲ್ಲ. ಆದರೆ ಈ ಸಂದರ್ಭದಲ್ಲಿ ಡಿಜಿಟಲ್ ಮಾಧ್ಯಮಗಳ ಮೂಲಕವೇ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಂತಹ ಒಂದು ಕಾರ್ಯಕ್ರಮದ ಕುರಿತಾಗಿ ಇಲ್ಲಿದೆ ವಿವರ.

ಇರ್ಷಾದ್ ಉಪ್ಪಿನಂಗಡಿ | Vijaya Karnataka Web 7 May 2020, 11:32 am
ಬೆಂಗಳೂರು: ಮೇ 7 ಬುದ್ಧ ಪೂರ್ಣಿಮೆ ದಿನ. ಲಾಕ್‌ಡೌನ್ ಕಾರಣದಿಂದಾಗಿ ಯಾವುದೇ ಸಭೆ ಸಮಾರಂಭಗಳಿಗೆ ಅವಕಾಶವಿಲ್ಲ. ಆದರೆ ಈ ದಿನದ ಆಚರಣೆಯನ್ನು ಸಾಮಾಜಿಕ ಜಾಲತಾಣದ ಮೂಲಕವೇ ವಿಭಿನ್ನವಾಗಿ ಆಚರಿಸಲಾಗುತ್ತಿದೆ. ಬುದ್ಧ ಪುರ್ಣಿಮೆ ದಿನದಂದು ಡಾ. ಬಿ. ಆರ್‌ ಅಂಬೇಡ್ಕರ್‌ ಹಾಗೂ ಬುದ್ಧ ಕುರಿತಾಗಿ ಪುಸ್ತಕ ಅಧ್ಯಯನ ನಡೆಸುವ 'ಪ್ರಬುದ್ಧ ಲೈವ್' ಅಭಿಯಾನ ಫೇಸ್‌ಬುಕ್‌ನಲ್ಲಿ ನಡೆಯುತ್ತಿದೆ.
Vijaya Karnataka Web budhha


ಸಾಮಾಜಿಕ ಕಾರ್ಯಕರ್ತರು ಹಾಗೂ ಚಿಂತಕರನ್ನು ಒಳಗೊಂಡ ತಂಡ ಈ ವಿಶಿಷ್ಟ ಕಾರ್ಯಕ್ರಮವನ್ನು ಆನ್‌ಲೈನ್‌ ಮೂಲಕ ಹಮ್ಮಿಕೊಂಡಿದೆ. ಫೇಸ್ ಬುಕ್‌‌ನಲ್ಲಿ ಗುರುವಾರ ಬೆಳಗ್ಗೆ 8 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಡಾ. ಅಂಬೇಡ್ಕರ್ ಅವರ ಬರೆದಿರುದ ‘ಬುದ್ಧ ಮತ್ತು ಅವನ ದಮ್ಮ’ ಪುಸ್ತಕವನ್ನು ಓದುವ ಅಭಿಯಾನ ನಡೆಸಲಾಗುತ್ತಿದೆ.

ಕೊರೊನಾ ಲೈವ್ ಅಪ್‌ಡೇಟ್ಸ್: ದೇಶದಲ್ಲಿ 53 ಸಾವಿರ ಗಡಿ ದಾಟಿದ ಸೋಂಕಿತ ಪ್ರಕರಣ!

ಪುಸ್ತಕದ ಆಯ್ದ ಭಾಗವನ್ನು ಕೆಲವರು ಫೇಸ್‌ಬುಕ್‌ ಲೈವ್‌ನಲ್ಲಿ ಓದುವ ಮೂಲಕ ಚರ್ಚೆಯನ್ನು ನಡೆಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಈಗಾಗಲೇ ಸಿನಿಮಾ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್ ಇದಕ್ಕೆ ಚಾಲನೆ ನಿಡಿದ್ದಾರೆ. ‘ಬುದ್ಧ ಮತ್ತು ಅವನ ದಮ್ಮ’ ಪುಸ್ತಕದ ಆಯ್ದ ಭಾಗವನ್ನು ಫೇಸ್‌ಬುಕ್ ಲೈವ್‌ನಲ್ಲಿ ಓದುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಸಂಶೋಧಕರಾದ ಪುರುಶೋತ್ತಮ ಬಿಳಿಮಲೆ, ಸಾಹಿತಿ ಯೋಗೀಶ್ ಮಾಸ್ಟರ್‌ ಸೇರಿದಂತೆ ಸುಮಾರು 20 ಕ್ಕೂ ಅಧಿಕ ಮಂದಿ ಈ ಪುಸ್ತಕದ ಆಯ್ದ ಭಾಗಗಳನ್ನು ಓದಲಿದ್ದಾರೆ. ಫೇಸ್‌ಬುಕ್‌ ಮೂಲಕ ನಡೆಯುತ್ತಿರುವ ಈ ವಿಭಿನ್ನ ಅಭಿಯಾನಕ್ಕೆ ಉತ್ತಮ ಸ್ಪಂದನೆ ಸಿಗುತ್ತಿದೆ. ಪುಸ್ತಕದ ಓದಿನ ಕುರಿತಾಗಿ ಕಾಮೆಂಟ್‌ಗಳ ಮೂಲಕ ಚರ್ಚೆಯೂ ನಡೆಯುತ್ತಿದೆ.

ಮನೆಗೆ ಮರಳಿ ಬಂದು ಮರವೇರಿ ಕ್ವಾರಂಟೈನ್‌ಗೆ ಗುರಿಯಾದ ವಲಸೆ ಕಾರ್ಮಿಕ!

ಈ ಕುರಿತಾಗಿ ಮಾತನಾಡಿದ ಕಾರ್ಯಕ್ರಮದ ಆಯೋಜಕರಲ್ಲಿ ಒಬ್ಬರಾದ ಅರುಣ್ ಜೋಳದ ಕೂಡ್ಲಿಗಿ ‘ಲಾಕ್‌ಡೌನ್ ಅವಧಿಯನ್ನು ಒಂದು ವರ್ಗದ ಜನರು ವಿರಾಮದ ಅವಧಿಯಾಗಿ ಬಳಸಿಕೊಳ್ಳುತ್ತಿದ್ದಾರೆ. ಆದರೆ ನಾವು ಇದನ್ನು ಅಧ್ಯಯನಕ್ಕಾಗಿ ಸದ್ಬಳಕೆ ಮಾಡಿಕೊಳ್ಳುತ್ತಿದ್ದೇವೆ. ಮನೆಯಲ್ಲೇ ಇದ್ದು ಎಲ್ಲರ ಜೊತೆಗೆ ವಿಚಾರ ವಿನಿಮಯ ಮಾಡಲು ಈ ಪ್ರಯತ್ನದಿಂದ ಎಲ್ಲರಿಗೂ ಅನುಕೂಲವಾಗಿದೆ. ಜನರ ಸ್ಪಂದನೆ ಕೂಡಾ ಉತ್ತಮವಾಗಿದೆ. ಸುಮಾರು 15,000 ಜನರನ್ನು ಆನ್‌ಲೈನ್ ಮೂಲಕ ತಲುಪುವ ಸಾಧ್ಯತೆ ಇದೆ. ಈ ಮೂಲಕ ಹೊಸಬರಿಗೆ ಪುಸ್ತಕ ಓದಿನ ಅಭಿರುಚಿ ಮೂಡಿಸುವುದು ತಮ್ಮ ಉದ್ದೇಶದ ಭಾಗವಾಗಿದೆ’ ಎನ್ನುತ್ತಾರೆ.

ಇನ್ನು ಬುದ್ಧಪೂರ್ಣಿಮೆಯ ದಿನದಂದು ವಿಶೇಷ ಆನ್ಲೈನ್ ಸೆಮಿನಾರ್ ಕೂಡಾ ಹಮ್ಮಿಕೊಳ್ಳಲಾಗಿದೆ. ಝೂಮ್ ಆಪ್‌ ಮೂಲಕ ಈ ಸೆಮಿನಾರ್ ಆಯೋಜಿಸಲಾಗಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಡಿಜಿಟಲ್‌ ಮಾದರಿಯನ್ನು ಈ ಮೂಲಕ ವ್ಯವಸ್ಥಿತವಾಗಿ ಬಳಸಿಕೊಳ್ಳಲಾಗುತ್ತಿದೆ.
ಲೇಖಕರ ಬಗ್ಗೆ
ಇರ್ಷಾದ್ ಉಪ್ಪಿನಂಗಡಿ
ವಿಜಯ ಕರ್ನಾಟಕ ಡಿಜಿಟಲ್ ವಿಭಾಗದಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ದೃಶ್ಯ ಹಾಗೂ ಡಿಜಿಟಲ್ ಮಾಧ್ಯಮ ವರದಿಗಾರಿಕೆಯಲ್ಲಿ 12 ವರ್ಷಗಳ ಅನುಭವ ಹೊಂದಿದ್ದಾರೆ. ಸಿನಿಮಾ ನೋಡುವುದು, ಪುಸ್ತಕ ಓದುವುದು, ಸಮಯ ಸಿಕ್ಕಾಗ ಸುತ್ತಾಟ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ