ಮೈಸೂರು/ಬೆಂಗಳೂರು ಗ್ರಾಮಾಂತರ: ಅಯೋಧ್ಯೆಯಲ್ಲಿ ಉತ್ಖನನದ ವೇಳೆ ಬೌದ್ಧ ಧರ್ಮಕ್ಕೆ ಸಂಬಂಧಿಸಿದ ಅವಶೇಷಗಳು ಲಭ್ಯವಾಗಿರುವುದರಿಂದ ಆ ಜಾಗವನ್ನು ಪ್ರಾಚೀನ ಬೌದ್ಧ ಸ್ಮಾರಕ ಎಂದು ಘೋಷಿಸಿ ಭೌದ್ಧ ಧರ್ಮದ ಕುರುಹುಗಳನ್ನು ಸಂರಕ್ಷಿಸುವಂತೆ ಒತ್ತಾಯಿಸಿ ರಾಜ್ಯದ ಹಲವೆಡೆ ಹೋರಾಟ ಶುರುವಾಗಿದೆ. ಮೈಸೂರು ಜಿಲ್ಲೆ ನಂಜನಗೂಡಿನಲ್ಲಿ ದಲಿತ ಸಂಘಟನೆಗಳ ಒಕ್ಕೂಟದಿಂದ ತಹಸೀಲ್ದಾರ್ಗೆ ಮನವಿ ಸಲ್ಲಿಸಲಾಯಿತು. ಸರ್ವೋಚ್ಛ ನ್ಯಾಯಾಲಯದ ಇತ್ತೀಚಿನ ತೀರ್ಪಿನಂತೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಆದರೆ ಇದೀಗ ಉತ್ಖನನದ ವೇಳೆ ಬೌದ್ಧ ಧರ್ಮಾಚರಣೆ ಸಂಬಂಧ ಅವಶೇಷಗಳು ಹಾಗೂ ಕಲಾಕೃತಿಗಳು ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗಿದೆ. ಉತ್ಖನನ ಸ್ಥಳದಲ್ಲಿ ದೊರೆತಿರುವ ಬೌದ್ಧಾವಶೇಷಗಳನ್ನು ನೋಡಿದರೆ ಈ ಹಿಂದೆ ಅಯೋಧ್ಯೆ ಬೌದ್ಧರ ನೆಲೆಯಾಗಿತ್ತು ಎಂಬುದನ್ನು ಸ್ಪಷ್ಟವಾಗುತ್ತಿದೆ.
ಹೀಗಾಗಿ ತಕ್ಷಣ ರಾಮಮಂದಿರ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಿ ಬೌದ್ಧಾವಶೇಷಗಳನ್ನು ರಕ್ಷಿಸಲು ಸರಕಾರ ಮುಂದಾಗಬೇಕು ಎಂದು ಸಂಘಟನೆ ಆಗ್ರಹಿಸಿದೆ. ಪುರಾತತ್ವ ನೆಲೆಗಳು ಹಾಗೂ ಪಳೆಯುಳಿಕೆ ಕಾಯಿದೆ 1958ರ ಪ್ರಕಾರ ಅಯೋಧ್ಯೆಯನ್ನು ಪ್ರಾಚೀನ ಪುರಾತತ್ವ ಬೌದ್ಧ ಸ್ಮಾರಕ ಎಂದು ಘೋಷಿಸುವಂತೆ ಒತ್ತಾಯಿಸಲಾಗಿದೆ.
ಇತ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಈ ಸಂಬಂಧ ಆಗ್ರಹ ಕೇಳಿ ಬಂದಿದೆ. ರಾಮ ಮಂದಿರ ನಿರ್ಮಾಣ ಮಾಡಲು ಉದ್ದೇಶಿಸಿರುವ ಸ್ಥಳದಲ್ಲಿ ಉತ್ಖನನ ಮಾಡಿದ ವೇಳೆ, ಪುರಾತನ ಬುದ್ಧ ವಿಗ್ರಹಗಳು ದೊರೆತಿದ್ದು, ಇದರಿಂದಾಗಿ ಈ ಸ್ಥಳದಲ್ಲಿ ಬೌದ್ಧ ವಿಹಾರ ಕೇಂದ್ರ ನಿರ್ಮಿಸಬೇಕೆಂದು ಬುದ್ದಿಸ್ಟ್ ಇಂಟರ್ ನ್ಯಾಷನಲ್ ನೆಟ್ವರ್ಕ್(ಬಿಐಎನ್) ರಾಜ್ಯಾದ್ಯಕ್ಷ ಎಸ್.ಸಿದ್ದಾರ್ಥ ಒತ್ತಾಯಿಸಿದ್ದಾರೆ.
ರಾಮ ಮಂದಿರ ಶಿಲಾನ್ಯಾಸಕ್ಕೆ ಕ್ಷಣಗಣನೆ: ಅಯೋಧ್ಯೆಯಲ್ಲಿ ರುದ್ರಾಭಿಷೇಕ ಆರಂಭ!
ಆಯೋಧ್ಯೆಯ ರಾಮ ಜನ್ಮಭೂಮಿ ಸ್ಥಳದಲ್ಲಿ ಬೌದ್ಧ ವಿಹಾರ ಕೇಂದ್ರ ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿ ಬಿಐಎನ್ ಮತ್ತು ವಿವಿಧ ಸಂಘಟನೆಗಳ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ರಾಮ ಜನ್ಮಭೂಮಿ, ಬಾಬರಿ ಮಸೀದಿ ಸ್ಥಳದಲ್ಲಿ ಬುದ್ಧನ ಪುರಾತನ ವಿಗ್ರಹಗಳು ಸಿಕ್ಕಿರುವುದರಲ್ಲಿ ವಿಶೇಷವೇನೂ ಇಲ್ಲ ಎಂದು ಸಂಘಟನೆ ಹೇಳಿದೆ.
ಅಯೋಧ್ಯೆಯಲ್ಲಿ ಬೌದ್ಧವಿಹಾರ ಕಟ್ಟಲು ಆಗ್ರಹ
ಒಟ್ಟಿನಲ್ಲಿ ದಶಕಗಳ ಕಾಲ ಹಿಂದೂ ಹಾಗೂ ಮುಸ್ಲಿಮರ ನಡುವಣ ಸಂಘರ್ಷದ ಕೇಂದ್ರವಾಗಿದ್ದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಇದೀಗ ಬೌದ್ಧರು ದನಿ ಎತ್ತುತ್ತಿದ್ದಾರೆ.
Fact Check: ಜಾರ್ಖಂಡ್ನಲ್ಲಿ ಸಿಕ್ಕಿದ್ದು ಅಯೋಧ್ಯಾ ಸೀತಾರಾಮರ ಮೂರ್ತಿಯೇ..?
ಹೀಗಾಗಿ ತಕ್ಷಣ ರಾಮಮಂದಿರ ನಿರ್ಮಾಣ ಕಾರ್ಯವನ್ನು ಸ್ಥಗಿತಗೊಳಿಸಿ ಬೌದ್ಧಾವಶೇಷಗಳನ್ನು ರಕ್ಷಿಸಲು ಸರಕಾರ ಮುಂದಾಗಬೇಕು ಎಂದು ಸಂಘಟನೆ ಆಗ್ರಹಿಸಿದೆ. ಪುರಾತತ್ವ ನೆಲೆಗಳು ಹಾಗೂ ಪಳೆಯುಳಿಕೆ ಕಾಯಿದೆ 1958ರ ಪ್ರಕಾರ ಅಯೋಧ್ಯೆಯನ್ನು ಪ್ರಾಚೀನ ಪುರಾತತ್ವ ಬೌದ್ಧ ಸ್ಮಾರಕ ಎಂದು ಘೋಷಿಸುವಂತೆ ಒತ್ತಾಯಿಸಲಾಗಿದೆ.
ಇತ್ತ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲೂ ಈ ಸಂಬಂಧ ಆಗ್ರಹ ಕೇಳಿ ಬಂದಿದೆ. ರಾಮ ಮಂದಿರ ನಿರ್ಮಾಣ ಮಾಡಲು ಉದ್ದೇಶಿಸಿರುವ ಸ್ಥಳದಲ್ಲಿ ಉತ್ಖನನ ಮಾಡಿದ ವೇಳೆ, ಪುರಾತನ ಬುದ್ಧ ವಿಗ್ರಹಗಳು ದೊರೆತಿದ್ದು, ಇದರಿಂದಾಗಿ ಈ ಸ್ಥಳದಲ್ಲಿ ಬೌದ್ಧ ವಿಹಾರ ಕೇಂದ್ರ ನಿರ್ಮಿಸಬೇಕೆಂದು ಬುದ್ದಿಸ್ಟ್ ಇಂಟರ್ ನ್ಯಾಷನಲ್ ನೆಟ್ವರ್ಕ್(ಬಿಐಎನ್) ರಾಜ್ಯಾದ್ಯಕ್ಷ ಎಸ್.ಸಿದ್ದಾರ್ಥ ಒತ್ತಾಯಿಸಿದ್ದಾರೆ.
ರಾಮ ಮಂದಿರ ಶಿಲಾನ್ಯಾಸಕ್ಕೆ ಕ್ಷಣಗಣನೆ: ಅಯೋಧ್ಯೆಯಲ್ಲಿ ರುದ್ರಾಭಿಷೇಕ ಆರಂಭ!
ಆಯೋಧ್ಯೆಯ ರಾಮ ಜನ್ಮಭೂಮಿ ಸ್ಥಳದಲ್ಲಿ ಬೌದ್ಧ ವಿಹಾರ ಕೇಂದ್ರ ಸ್ಥಾಪನೆ ಮಾಡಬೇಕೆಂದು ಒತ್ತಾಯಿಸಿ ಬಿಐಎನ್ ಮತ್ತು ವಿವಿಧ ಸಂಘಟನೆಗಳ ವತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗಿದೆ. ರಾಮ ಜನ್ಮಭೂಮಿ, ಬಾಬರಿ ಮಸೀದಿ ಸ್ಥಳದಲ್ಲಿ ಬುದ್ಧನ ಪುರಾತನ ವಿಗ್ರಹಗಳು ಸಿಕ್ಕಿರುವುದರಲ್ಲಿ ವಿಶೇಷವೇನೂ ಇಲ್ಲ ಎಂದು ಸಂಘಟನೆ ಹೇಳಿದೆ.
ಅಯೋಧ್ಯೆಯಲ್ಲಿ ಬೌದ್ಧವಿಹಾರ ಕಟ್ಟಲು ಆಗ್ರಹ
ಒಟ್ಟಿನಲ್ಲಿ ದಶಕಗಳ ಕಾಲ ಹಿಂದೂ ಹಾಗೂ ಮುಸ್ಲಿಮರ ನಡುವಣ ಸಂಘರ್ಷದ ಕೇಂದ್ರವಾಗಿದ್ದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ ಬಳಿಕ ಇದೀಗ ಬೌದ್ಧರು ದನಿ ಎತ್ತುತ್ತಿದ್ದಾರೆ.
Fact Check: ಜಾರ್ಖಂಡ್ನಲ್ಲಿ ಸಿಕ್ಕಿದ್ದು ಅಯೋಧ್ಯಾ ಸೀತಾರಾಮರ ಮೂರ್ತಿಯೇ..?