ಆ್ಯಪ್ನಗರ

ಮರಕ್ಕೆ ಬಸ್‌ ಡಿಕ್ಕಿ : 30 ಜನಕ್ಕೆ ಗಾಯ

ಸರಕಾರಿ ಸಾರಿಗೆ ಬಸ್‌ ಬಿಡದಿ ಬಳಿ ಅಪಘಾತಕ್ಕೀಡಾಗಿ 30 ಪ್ರಯಾಣಿಕರು ಗಾಯಗೊಂಡಿದ್ದು, ಅವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ.

Vijaya Karnataka 19 Apr 2019, 5:00 am
ಬಿಡದಿ : ಸರಕಾರಿ ಸಾರಿಗೆ ಬಸ್‌ ಬಿಡದಿ ಬಳಿ ಅಪಘಾತಕ್ಕೀಡಾಗಿ 30 ಪ್ರಯಾಣಿಕರು ಗಾಯಗೊಂಡಿದ್ದು, ಅವರಲ್ಲಿ ಐವರ ಸ್ಥಿತಿ ಗಂಭೀರವಾಗಿದೆ.
Vijaya Karnataka Web bus acident
ಮರಕ್ಕೆ ಬಸ್‌ ಡಿಕ್ಕಿ : 30 ಜನಕ್ಕೆ ಗಾಯ


ಮೈಸೂರಿನಿಂದ ಬೆಂಗಳೂರಿಗೆ ಬಸ್‌ನ ಆಕ್ಸಲ್‌ ತುಂಡಾದ ಪರಿಣಾಮ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದಿದ್ದರಿಂದ ಅವಘಡ ಸಂಭವಿಸಿದೆ. ಗಾಯಾಳುಗಳನ್ನು ಬೆಂಗಳೂರಿನ ನಿಮ್ಹಾನ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಸ್‌ ಗುದ್ದಿದ ರಭಸಕ್ಕೆ ಮರವು ಬುಡ ಸಮೇತ ಉರುಳಿ ಬಿದ್ದಿದೆ. ರಸ್ತೆ ಬದಿಯಲ್ಲಿರುವ ಹೊಂಡಾ ಬೈಕ್‌ ಶೋರಂ ಮುಂಭಾಗ ನಿಲ್ಲಿಸಿದ್ದ 2 ದ್ವಿಚಕ್ರ ವಾಹನಗಳು ಬಸ್‌ಚಕ್ರಕ್ಕೆ ಸಿಲುಕಿ ಪುಡಿಪುಡಿಯಾಗಿವೆ. ಬಸ್‌ ಚಾಲಕ ಹಾಗೂ ನಿರ್ವಾಹಕರಿಗೂ ಗಾಯವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ