ಆ್ಯಪ್ನಗರ

ಹೆಚ್ಚಿನ ಪ್ರಯಾಣ ದರ: 50 ಖಾಸಗಿ ಬಸ್‌ಗಳ ವಿರುದ್ಧ ಕೇಸು

ಶುಕ್ರವಾರ ರಾತ್ರಿ ಗೊರಗುಂಟೆಪಾಳ್ಯದ ಎಐಟಿಒಬಿ, ಮೆಜೆಸ್ಟಿಕ್‌, ಆನಂದರಾವ್‌ ವೃತ್ತ, ದೇವನಹಳ್ಳಿ, ಟೋಲ್‌ಗೇಟ್‌ ಪ್ರದೇಶಗಳಲ್ಲಿ ಸಾರಿಗೆ ಅಧಿಕಾರಿಗಳ 5 ತಂಡಗಳು ಮಧ್ಯರಾತ್ರಿ 12 ಗಂಟೆವರೆಗೆ ತಪಾಸಣೆ ನಡೆಸಿದವು

Vijaya Karnataka 3 Nov 2018, 9:22 am
ಬೆಂಗಳೂರು: ದೀಪಾವಳಿ ಹಬ್ಬದ ಸಾಲು ರಜೆಯಲ್ಲಿ ಊರಿಗೆ ತೆರಳುವವರಿಗೆ ಅಧಿಕ ಟಿಕೆಟ್‌ ದರ ವಿಧಿಸುತ್ತಿರುವ ಖಾಸಗಿ ಬಸ್‌ಗಳ ಮೇಲೆ ದಾಳಿ ನಡೆಸಿರುವ ಸಾರಿಗೆ ಅಧಿಕಾರಿಗಳು 50 ಕೇಸು ದಾಖಲಿಸಿದ್ದಾರೆ.
Vijaya Karnataka Web bus private


ಶುಕ್ರವಾರ ರಾತ್ರಿ ಗೊರಗುಂಟೆಪಾಳ್ಯದ ಎಐಟಿಒಬಿ, ಮೆಜೆಸ್ಟಿಕ್‌, ಆನಂದರಾವ್‌ ವೃತ್ತ, ದೇವನಹಳ್ಳಿ, ಟೋಲ್‌ಗೇಟ್‌ ಪ್ರದೇಶಗಳಲ್ಲಿ ಸಾರಿಗೆ ಅಧಿಕಾರಿಗಳ 5 ತಂಡಗಳು ಮಧ್ಯರಾತ್ರಿ 12 ಗಂಟೆವರೆಗೆ ತಪಾಸಣೆ ನಡೆಸಿದವು. ನಿಗದಿಗಿಂತ ಅಧಿಕ ಪ್ರಯಾಣ ದರ ವಿಧಿಸಿದ್ದ ಬಸ್‌ಗಳು ಹಾಗೂ ಅಕ್ರಮವಾಗಿ ಸರಕು ಸಾಗಣೆ ಮಾಡುತ್ತಿದ್ದ ಬಸ್‌ಗಳ ತಪಾಸಣೆ ನಡೆಸಿ, ರಾತ್ರಿ 10 ಗಂಟೆ ವೇಳೆಗೆ ಒಟ್ಟು 50 ಪ್ರಕರಣಗಳನ್ನು ದಾಖಲಿಸಲಾಯಿತು.

''ಅನೇಕ ಖಾಸಗಿ ಬಸ್‌ಗಳಲ್ಲಿ 1,000 ರೂ. ಟಿಕೆಟ್‌ ದರದ ಬದಲು 2,000 ರೂ. ವಸೂಲಿ ಮಾಡಲಾಗುತ್ತಿದೆ. ಇಂತಹ ಬಸ್‌ಗಳ ಮೇಲೆ ದಾಳಿ ನಡೆಸಿ ತಪಾಸಣೆ ಮಾಡಲಾಗಿದೆ. ಅನೇಕ ಬಸ್‌ಗಳು ಅಕ್ರಮವಾಗಿ ಸರಕು ಸಾಗಣೆ ಮಾಡುತ್ತಿರುವುದನ್ನೂ ಪತ್ತೆಹಚ್ಚಲಾಗಿದೆ,'' ಎಂದು ಸಾರಿಗೆ ಅಧಿಕಾರಿಯೊಬ್ಬರು ತಿಳಿಸಿದರು.

''ಶನಿವಾರದಿಂದ ತಪಾಸಣೆಯನ್ನು ತೀವ್ರಗೊಳಿಸಲಾಗುತ್ತದೆ. 30 ಇನ್ಸ್‌ಪೆಕ್ಟರ್‌ಗಳು, 20 ಅಧಿಕಾರಿಗಳನ್ನೊಳಗೊಂಡ 11 ತಂಡಗಳು ಅನುಮಾನ ಬಂದ ಸ್ಥಳಗಳಲ್ಲಿ ಸಂಜೆ 6 ರಿಂದ ಮಧ್ಯರಾತ್ರಿ 12 ಗಂಟೆವರೆಗೆ ತಪಾಸಣೆ ಮಾಡಲಿವೆ,'' ಎಂದು ಅವರು ಮಾಹಿತಿ ನೀಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ