ಆ್ಯಪ್ನಗರ

ಚುನಾವಣೆ ನಂತರ ಬಸ್‌ ಪ್ರಯಾಣ ದರ ಏರಿಕೆ ನಿರ್ಧಾರ: ತಮ್ಮಣ್ಣ

ಲೋಕಸಭೆ ಚುನಾವಣೆ ಬಳಿಕ ಕೆಎಸ್‌ಆರ್‌ಟಿಸಿ ಬಸ್‌ ಪ್ರಯಾಣ ದರವನ್ನು ಶೇ...

Vijaya Karnataka 6 Mar 2019, 5:00 am
ಬೆಂಗಳೂರು: ಲೋಕಸಭೆ ಚುನಾವಣೆ ಬಳಿಕ ಕೆಎಸ್‌ಆರ್‌ಟಿಸಿ ಬಸ್‌ ಪ್ರಯಾಣ ದರವನ್ನು ಶೇ.18ರಷ್ಟು ಹೆಚ್ಚಳ ಮಾಡುವ ಕುರಿತಂತೆ ತೀರ್ಮಾನಿಸಲಾಗುವುದು ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ತಿಳಿಸಿದ್ದಾರೆ.
Vijaya Karnataka Web ksrtc1


ಸುದ್ದಿಗಾರರ ಜತೆ ಮಾತನಾಡಿ''ಮಾರ್ಚ್‌ 1ರಿಂದ ಡೀಸೆಲ್‌ ದರ 3 ರೂ.ಗಳಷ್ಟು ಹೆಚ್ಚಳವಾಗಿದೆ. ಇಂಧನ ದರ ಸತತ ಹೆಚ್ಚಳವಾಗುತ್ತಲೇ ಬಂದಿದ್ದು, ನಷ್ಟದ ಪ್ರಮಾಣ ಏರಿಕೆಯಾಗಿದೆ,''ಎಂದು ಹೇಳಿದರು.

''ಎಲೆಕ್ಟ್ರಿಕ್‌ ಬಸ್‌ಗಳನ್ನು ಬಾಡಿಗೆ ಕೊಡಲು ಮುಂದಾಗಿದ್ದ ಕಂಪನಿಗಳು ಭಾರಿ ಲಾಬಿ ಮಾಡಿದ್ದವು. ಅಗತ್ಯಬಿದ್ದರೆ ಮಂತ್ರಿಗಳನ್ನೇ ಬದಲಾಯಿಸುವ ಶಕ್ತಿ ಅವರಿಗೆ ಇದೆ. ಹೀಗಾಗಿ 78 ಕೋಟಿ ರೂ. ವೆಚ್ಚದಲ್ಲಿ ರಾಜ್ಯ ಸರಕಾರ ಬಸ್‌ ಖರೀದಿಸಲು ನಿರ್ಧರಿಸಿದೆ,''ಎಂದರು.

ಮೂರು ಸಾವಿರ ಬಸ್‌ ಖರೀದಿ

ಬಿಎಂಟಿಸಿ ಹಾಗೂ ಕೆಎಸ್‌ಆರ್‌ಟಿಸಿಗೆ ತಲಾ ಒಂದೂವರೆ ಸಾವಿರದಂತೆ ಒಟ್ಟು 3 ಸಾವಿರ ಬಸ್‌ಗಳನ್ನು ಖರೀದಿಸಲು ಉದ್ದೇಶಿಸಿದೆ. ಮೂಲಸೌಕರ್ಯ ಸುಧಾರಣೆಗೂ ಪ್ರಯತ್ನಿಸಲಾಗುತ್ತಿದೆ. ಈಗಾಗಲೇ ರೆಕ್ಸಿನ್‌, ಕಂಪ್ಯೂಟರ್‌ ಖರೀದಿ, ವರ್ಗಾವಣೆ ಅಕ್ರಮಗಳ ಕುರಿತು ತನಿಖೆಗೆ ಆದೇಶಿಸಿದ್ದೇನೆ,''ಎಂದು ಹೇಳಿದರು.

ಆರ್‌ಟಿಒ ನೇಮಕಾತಿಗೆ ನಿಯಮ ತಿದ್ದುಪಡಿ

''ರಾಜ್ಯದಲ್ಲಿ ಒಟ್ಟು 750 ಪ್ರಾದೇಶಿಕ ಸಾರಿಗೆ ಅಧಿಕಾರಿಗಳ (ಆರ್‌ಟಿಓ) ಹುದ್ದೆಗಳಿವೆ. ಆದರೆ ಕೇವಲ 250 ಆರ್‌ಟಿಓಗಳಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆ ಬಳಿಕ ಭರ್ತಿಗೆ ನಿಯಮ ತಿದ್ದುಪಡಿ ಮೂಲಕ ನೇಮಕ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು,'' ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ